ತರಕಾರಿ ಅಂಗಡಿಗೆ ನುಗ್ಗಿದ ಕಾರು,ತಪ್ಪಿದ ಬಾರಿ ಅನಾಹುತ

ಉಡುಪಿ:ಮಧ್ಯಪಾನ ಮಾಡಿಕೊಂಡು ಅಜಾಗರೂಕತೆಯಿಂದ ವಾಹನ ಚಲಾಯಿಸಿಕೊಂಡು ಬಂದ ಯುವಕ ತರಕಾರಿ ಅಂಗಡಿಗೆ ಕಾರನ್ನು ನುಗ್ಗಿಸಿದ ಘಟನೆ ಬೈಲೂರುನಲ್ಲಿ ನಡೆದಿದೆ.ಬೆಂಗಳೂರಿನಿಂದ ಮಲ್ಪೆ ಕಡೆಗೆ ಸಾಗುತ್ತಿದ್ದ ಸಂದರ್ಭ ಈ ಅವಘಡ ಸಂಭವಿಸಿದೆ. ಕಾರಿನಲ್ಲಿ ನಾಲ್ಕು ಜನರ ಪ್ರಯಾಣ ಮಾಡುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಕಾರು ಡಿಕ್ಕಿ ಹೊಡೆದ ರಭಸಕ್ಕೆ ಅಂಗಡಿಯ ಗೋಡೆ ಬಿದ್ದಿದೆ. ಈ ಹೊತ್ತಿನಲ್ಲಿ ಅಂಗಡಿಯಲ್ಲಿ ಯಾರು ಇಲ್ಲದೆ ಇರುವುದರಿಂದ ಬಾರಿ ದೊಡ್ಡ ದುರಂತ‌ ತಪ್ಪಿದೆ.

ನಾಡ ಪಂಚಾಯತ್ ಅಧ್ಯಕ್ಷರಾಗಿ ಪಾರ್ವತಿ ಮೊಗವೀರ ಆಯ್ಕೆ

ಬೈಂದೂರು:ನಾಡ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಬಿಜೆಪಿ ಪಕ್ಷದ ಅಭ್ಯರ್ಥಿ ಪಾರ್ವತಿ ಮೊಗವೀರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಬಿಜೆಪಿ ಪಕ್ಷದ ಅಭ್ಯರ್ಥಿ ಪ್ರಥ್ವಿಶ್ ಶೆಟ್ಟಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜಿಪಿ ಪಕ್ಷದ ಅಧಿಕೃತ ಅಭ್ಯರ್ಥಿ ಪ್ರಥಿಶ್ ಶೆಟ್ಟಿ ಹಾಗೂ ಬಂಡಾಯ ಅಭ್ಯರ್ಥಿ ಶ್ರೀಧರ ದೇವಾಡಿಗ ಸ್ಪರ್ಧೆ ಮಾಡಿದ್ದರು.19 ಸದಸ್ಯರೊಳಗೊಂಡ ನಾಡ ಪಂಚಾಯತಿಯಲ್ಲಿ 14 ಜನ ಬಿಜೆಪಿ ಸದಸ್ಯರು,03 ಜನ ಕಾಂಗ್ರೆಸ್ ಸದಸ್ಯರು ಹಾಗೂ 02 ಜನ ಕಮ್ಯುನಿಸ್ಟ್ ಪಕ್ಷದ ಸದಸ್ಯರಿದ್ದಾರೆ.ಒಬ್ಬ ಪಂಚಾಯತ್ ಸದಸ್ಯೆ ಗೈರಾಗಿದ್ದರಿಂದ ಪ್ರಥ್ವಿಶ್ ಶೆಟ್ಟಿ […]

ಬಿಜೆಪಿಗೆ ಒಲಿದ ತ್ರಾಸಿ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನ

ಕುಂದಾಪುರ:ತ್ರಾಸಿ ಗ್ರಾಮ ಪಂಚಾಯತ್‍ನಲ್ಲಿ ಗುರುವಾರ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಬೆಂಬಲಿತ ಪಂಚಾಯತ್ ಸದಸ್ಯ ಮಿಥುನ್ ದೇವಾಡಿಗ ತ್ರಾಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯೆ ಹೇಮಾ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.06 ಜನ ಕಾಂಗ್ರೆಸ್ ಪಕ್ಷದ ಸದಸ್ಯರು ಹಾಗೂ 02 ಜನ ಬಿಜೆಪಿ ಪಕ್ಷದ ಸದಸ್ಯರು ಸೇರಿ ಒಟ್ಟು ತ್ರಾಸಿ ಗ್ರಾಮ ಪಂಚಾಯತ್‍ನಲ್ಲಿ 08 ಪಂಚಾಯತ್ ಸದಸ್ಯರಿದ್ದಾರೆ.ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ರಾಜು ಮೆಂಡನ್ ಹಾಗೂ ಬಿಜೆಪಿ ಪಕ್ಷದ […]

You cannot copy content of this page