ಯಂತ್ರ ಶ್ರೀ ಬೇಸಾಯಕ್ಕೆ ರೈತರು ಆಸಕ್ತಿ,ಕೃಷಿ ಕೆಲಸ ಚುರುಕು

ಕುಂದಾಪುರ:ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಗುಡ್ ಬೈ ಹೇಳಿದ ಗ್ರಾಮೀಣ ಪ್ರದೇಶದ ಕೃಷಿಕರು ಯಾಂತ್ರಿಕ ಕೃಷಿಯತ್ತಾ ಮುಖ ಮಾಡಿದ್ದಾರೆ.ಛಾಪೆ ಮಾದರಿ ಕೃಷಿ ಪದ್ಧತಿಯನ್ನು ಅಳವಡಿಕೆ ಮಾಡಿಕೊಂಡು ಯಂತ್ರ ಶ್ರೀ ಬೇಸಾಯಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಿದ್ದಾರೆ.ಯಂತ್ರ ಶ್ರೀ ಬೇಸಾಯಕ್ಕೆ ಪ್ರೋತ್ಸಾಹ ಧನವನ್ನು ನೀಡಬೇಕ್ಕೆನ್ನುವುದು ರೈತರ ಬೇಡಿಕೆ ಆಗಿದೆ.ಮುಂಗಾರಿನ ಆರಂಭ ವಿಳಂಬವಾಗಿದ್ದರೂ ಜೂನ್ ಎರಡನೇ ವಾರದಲ್ಲಿ ಬಿರುಸಾಗಿ ಮಳೆ ಸುರಿದಿದ್ದರಿಂದ ಕೆರೆ,ಹಳ್ಳಕೊಳ್ಳ ತುಂಬಿಕೊಂಡಿದೆ ತೋಡುಗಳಲ್ಲಿ ನೀರು ಹರಿಯುತ್ತಿದೆ.ಕುಂದಾಪುರ ತಾಲೂಕಿನ ಆಲೂರು,ಹೊಸಾಡು,ಹಕ್ಲಾಡಿ,ಹೆಮ್ಮಾಡಿ,ಮರವಂತೆ,ನಾವುಂದ,ಕಡಿಕೆ ಸೇರಿದಂತೆ ಇನ್ನಿತರ ಭಾಗಗಳಲ್ಲಿ ಉಳುಮೆ ಕಾರ್ಯದಲ್ಲಿ ಕೃಷಿಕರು ನಿರತರಾಗಿದ್ದಾರೆ.ಜೂನ್ ತಿಂಗಳು […]

ಹೆಮ್ಮಾಡಿ ಶಾಲೆಗೆ ಶಿಕ್ಷಣಾಧಿಕಾರಿಗಳು ಭೇಟಿ

ಕುಂದಾಪುರ:ಶಿಥಿಲಾವಸ್ಥೆಯಲ್ಲಿದ್ದ ಸರಕಾರಿ ಹಿರಿಯ ಪ್ರಾಥಮಿಕ ಹೆಮ್ಮಾಡಿ ಶಾಲೆಯ ಕಟ್ಟಡ ಗಾಳಿ ಮಳೆಗೆ ಧರೆಗುರುಳಿದ ಹಿನ್ನೆಲೆಯಲ್ಲಿ ಶಿಕ್ಷಣ ಸಂಯೋಜಕರಾದ ಯೋಗೀಶ್ ಮತ್ತು ಚಂದ್ರ ದೇವಾಡಿಗ ಹಾಗೂ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಮಂಜುನಾಥ್ ನಾಯ್ಕ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಶಾಲೆಯ ಅಧ್ಯಾಪಕರಾದ ದಿವಾಕರ ಉಪಸ್ಥಿತರಿದ್ದರು.

You cannot copy content of this page