ರೈತರ ಮನವಿಯನ್ನು ಸ್ವೀಕರಿಸಿದಶಾಸಕ ಗುರುರಾಜ್ ಗಂಟಿಹೊಳೆ

ಕುಂದಾಪುರ:ಬೈಂದೂರು ವಿಧಾನಸಭೆ ಕ್ಷೇತ್ರದ ಹೊಸಾಡು ಗ್ರಾಮದ ಮುಳ್ಳಿಕಟ್ಟೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ರ ಅಭಿವೃದ್ಧಿ ಕಾಮಗಾರಿ ಸಂದರ್ಭ ಕೈಗೊಂಡ ಚರಂಡಿ ಕಾಮಗಾರಿ ಅವ್ಯವಸ್ಥೆಯಿಂದ ಮಳೆಗಾಲದಲ್ಲಿ ಹೆದ್ದಾರಿಯಲ್ಲಿ ಹರಿದು ಬರುವ ನೀರು ತೋಡಿನ ಮೂಲಕ ಕೃಷಿ ಭೂಮಿಗಳತ್ತಾ ನುಗ್ಗುತ್ತಿದೆ ಚರಂಡಿ ದುರವಸ್ಥೆಯನ್ನು ಸರಿಪಡಿಸಿ ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಹೊಸಾಡು ಗ್ರಾಮದ ರೈತರು ಶಾಸಕ ಗುರುರಾಜ್ ಗಂಟಿಹೊಳೆ ಅವರಿಗೆ ಬುಧವಾರ ಮುಳ್ಳಿಕಟ್ಟೆಯಲ್ಲಿ ಮನವಿಯನ್ನು ನೀಡಿದರು.

ಸಮುದ್ರ ಕಿನಾರೆ ಸ್ವಚ್ಛತೆಗೆ ಇಳಿದ ಶಾಸಕ ಗಂಟಿಹೊಳೆ

ಕುಂದಾಪುರ:ಸಮೃದ್ಧ ಬೈಂದೂರಿನ ಭಾಗವಾದ ಕ್ಲೀನ್ ಕಿನಾರದ ಮೂರನೇ ವಾರದ ಸ್ವಚ್ಛತಾ ಕಾರ್ಯಕ್ರಮ ಗಂಗೆಬೈಲು,ಕಿರಿಮಂಜೇಶ್ವರದ ಕಡಲ ತೀರದಲ್ಲಿ ಭಾನುವಾರ ನಡೆಯಿತು‌. ಶಾಸಕ ಗುರುರಾಜ್ ಗಂಟಿಹೊಳೆ‌ ಅವರು ಕಾರ್ಯಕರ್ತರ ಜತೆಗೂಡಿ ಮಳೆಯನ್ನು ಲೆಕ್ಕಿಸದೆ ಸಮುದ್ರ ಕಿನಾರೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡರು. ಕೇಸರಿ ದಳದ ಕಾರ್ಯಕರ್ತರು, ಸ್ಥಳೀಯರ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಹಕ್ಲಾಡಿ ಚೆನ್ನಕೇಶವ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಗಣಪ್ಪಯ್ಯ ಶೆಟ್ಟಿ ಆಯ್ಕೆ

ಕುಂದಾಪುರ:ಹಕ್ಲಾಡಿ ಚೆನ್ನಕೇಶವ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿಬಾಳೆಮನೆ ಗಣಪಯ್ಯ ಶೆಟ್ಟಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ಆಗಿ ಸಂಜೀವ ಬಿಲ್ಲವ ಮತ್ತು ಕೋಶಾಧಿಕಾರಿಯಾಗಿ ಶೇಖರ್ ಜೋಗಿ ಆಯ್ಕೆಯಾದರು.

You cannot copy content of this page