ನಾಗಾನುಗ್ರಹ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ

ಕುಂದಾಪುರ:ಧನ,ಧಾನ್ಯ ಉಳ್ಳವರು ಸಾಮಾಜಿಕ ಮನೋಭಾವ ಬೆಳೆಸಿಕೊಂಡು ಸಮಾಜದಲ್ಲಿನ ಅಶಕ್ತರ ಕಷ್ಟಗಳಿಗೆ ಸ್ಪಂದನೆ ಮಾಡುವ ಗುಣಗಳನ್ನು ರೂಢಿಸಿಕೊಂಡಾಗ ಮಾತ್ರ ಜೀವನ ಸಾರ್ಥಕತೆಯನ್ನು ಹೊಂದುತ್ತದೆ.ಇಂದಿನ ಮನುಷ್ಯನ ಜೀವನವು ಹಣದ ಬಲದ ಮೇಲೆ ನಿಂತ್ತಿರುವುದು ಅಪಾಯಕಾರಿ ಆಗಿದೆ ಇದು ದೇವರ ಮೇಲಿನಾ ಭಕ್ತಿ ಮೇಲೆ ಪರಿಣಾಮವನ್ನು ಕೂಡ ಬೀರಿದೆ ಎಂದು ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ,ಮುಂಬೈ ಅಧ್ಯಕ್ಷ ರಾಜು ಎಮ್ ಮೆಂಡನ್ ಅಭಿಪ್ರಾಯ ಪಟ್ಟರು.ಬೈಂದೂರು ತಾಲೂಕಿನ ಮರವಂತೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೋಮವಾರ ನಡೆದ ನಾಗರ ಪಂಚಮಿ ಉತ್ಸವದ ಪ್ರಯುಕ್ತ […]

ಕಟ್ ಬೇಲ್ತೂರು ಪಂಚಾಯತ್ ಉಪಾಧ್ಯಕ್ಷರಾಗಿ ರಾಮ ಶೆಟ್ಟಿ ಬಾಳಿಕೆರಿ ಆಯ್ಕೆ

ಕುಂದಾಪುರ:ಕಟ್ ಬೇಲ್ತೂರು ಗ್ರಾಮ ಪಂಚಾಯತಿಯ ನೂತನ ಉಪಾಧ್ಯಕ್ಷರಾಗಿ ಶ್ರೀ ರಾಮ ಶೆಟ್ಟಿ ಬಾಳಿಕೆರಿ ಅವರು ಆಯ್ಕೆಯಾಗಿದ್ದಾರೆ.ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು,ಅಭಿವೃದ್ಧಿ ಕಾರ್ಯ ಸಹಿತ ಸಾಮಾನ್ಯ ಜನರ ಕಷ್ಟಕ್ಕೆ ಸ್ಪಂದನೆ ಮಾಡಲಾಗುವುದೆಂದ ಕಟ್ ಬೇಲ್ತೂರು ಪಂಚಾಯತ್ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಶ್ರೀರಾಮ ಶೆಟ್ಟಿ ಅವರು ತಮ್ಮ ಮನದ ಇಂಗಿತವನ್ನು ಹಂಚಿಕೊಂಡಿದ್ದಾರೆ.ಉಪಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಶ್ರೀರಾಮ ಶೆಟ್ಟಿ ಬಾಳಿಕೆರಿ ಅವರಿಗೆ ದೇವಲ್ಕುಂದ ಗ್ರಾಮಸ್ಥರು ಹಾಗೂ ಬಾಳಿಕೆರಿ,ಜಾಡಿ ಫ್ರೆಂಡ್ಸ್ ಸರ್ವ ಸದಸ್ಯರು ಮತ್ತು ಹರೆಗೋಡು,ಕಟ್ ಬೇಲ್ತೂರು ಗ್ರಾಮಸ್ಥರು ಮತ್ತು ಕೆಂಚನೂರು ಹಾಗೂ ಹಾಲಾಡಿ ಮನೆ […]

ಶ್ರೀ ಪಂಜುರ್ಲಿ ಆಟೋ ಸೆಂಟರ್ ಶುಭಾರಂಭ

ಬೈಂದೂರು:ಉಪ್ಪುಂದ ಬಿಜೂರುನಲ್ಲಿ ಉದಯ್ ಪೂಜಾರಿ ಜಡ್ಡಾಡಿ ಅವರ ಮಾಲೀಕತ್ವದಲ್ಲಿ ನೂತನವಾಗಿ ಆರಂಭಗೊಂಡಿರುವ ಶ್ರೀ ಪಂಜುರ್ಲಿ ಆಟೋ ಸೆಂಟರ್ ಪ್ರಾರಂಭೋತ್ಸವ ಕಾರ್ಯಕ್ರಮ ವೇ.ಮೂ ಚೆನ್ನಕೇಶವ ಭಟ್ ಆನ್ಗಳ್ಳಿ ಗಜಪುರ ಅವರ ನೇತೃತ್ವದಲ್ಲಿ ಭಾನುವಾರ ನಡೆಯಿತು.ಈ ಸಂದರ್ಭ ಉದ್ಯಮಿ ಸತೀಶ ಪೂಜಾರಿ ಮರವಂತೆ,ರಾಜೇಶ ಪೂಜಾರಿ ತ್ರಾಸಿ,ಪ್ರವೀಣ್ ಪೂಜಾರಿ ಗೋಳಿಹೊಳೆ,ಶಂಕರ ಪೂಜಾರಿ ನಾವುಂದ,ಸುಬ್ರಹ್ಮಣ್ಯ ಉಪ್ಪುಂದ,ಜೋಕಿಮ್ ಡಿ ಕೋಸ್ಟಾ ಗೋವಾ ಉಪಸ್ಥಿತರಿದ್ದರು.

You cannot copy content of this page