ಗೋ ಶಾಲೆ ನಿರ್ಮಾಣಕ್ಕೆ ಗೋ ಪ್ರೇಮಿಗಳ ಆಗ್ರಹ

ಕುಂದಾಪುರ:ಬೈಂದೂರು ವಿಧಾನಸಭೆ ಕ್ಷೇತ್ರದ ವ್ಯಾಪ್ತಿ ಪ್ರದೇಶವಾದ ಹೊಸಾಡು,ನಾವುಂದ,ಮರವಂತೆ,ಬಾರಂದಾಡಿ,ಗಂಗೊಳ್ಳಿ ಸೇರಿದಂತೆ ನಾನಾ ಕಡೆಗಳಲ್ಲಿ ಬೀಡಾಡಿ ಗೋವುಗಳ ಸಂಖ್ಯೆ ಅಧಿಕವಾಗಿದೆ.ರಾತ್ರಿ ಸಮಯದಲ್ಲಿ ಗದ್ದೆಗಳಿಗೆ ದಾಳಿ ಮಾಡುವ ಬೀಡಾಡಿ ಗೋಗಳು ರೈತರಿಗೆ ಉಪದ್ರಕಾರಿಯಾಗಿ ಪರಿಣಮಿಸಿವೆ.ಬೀಡಾಡಿ ಗೋವುಗಳಿಂದ ಆಗುತ್ತಿರುವ ತೊಂದರೆಯನ್ನು ನಿಯಂತ್ರಣಕ್ಕೆ ತರಲು ಗೋ ಶಾಲೆ ನಿರ್ಮಾಣ ಮಾಡಬೇಕ್ಕೆನ್ನುವುದು ಸ್ಥಳೀಯರ ಬೇಡಿಕೆ ಆಗಿದೆ. (ರಾತ್ರಿ ಹಗಲೆನ್ನದೆ ಭತ್ತದ ಗದ್ದೆಗಳಿಗೆ ದಾಳಿ ಮಾಡುವ ಬೀಡಾಡಿ ಗೋಗಳಿಂದ ತೊಂದರೆ ಆಗುತ್ತಿದೆ ಎಂಬುದು ರೈತರ ಅಳಲು) ಜಾನುವಾರು ಸಾಗಾಣಿಕೆಯಲ್ಲಿ ರೈತರು ನಿರುತ್ಸಾಹ ತೋರ್ಪಡಿಸುತ್ತಿದ್ದರಿಂದ ಗೋವುಗಳು ಬೀದಿ ಪಾಲಾಗಿದ್ದು,ಇತ್ತೀಚಿನ […]

ವಾರ್ಷಿಕ ಮಹಾಸಭೆ,ಆರೋಗ್ಯ ನಿಧಿ ವಿತರಣೆ

ಕುಂದಾಪುರ:ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಗಳ ಪ್ರತಿಷ್ಠಿತ ಕ್ಲಬ್‍ಗಳಲ್ಲಿ ಒಂದಾದ ಕುಂದಾಪುರ ತಾಲೂಕು ಎಡ್ವರ್ಡ್ ಮೆಮೋರಿಯಲ್ ಕ್ಲಬ್‍ನ ಹಾಗೂ ರೀಡಿಂಗ್ ರೂಮ್ ಸೊಸೈಟಿ ಕುಂದಾಪುರ ಅದರ 95ನೇ ವಾರ್ಷಿಕ ಮಹಾಸಭೆಯಲ್ಲಿ ಬಡ ಕುಟುಂಬದ ಸದಸ್ಯರ ಅನಾರೋಗ್ಯ ಪೀಡಿತರಿಗೆ ಆರೋಗ್ಯ ನಿಧಿ ಯೋಜನೆಯಡಿ ಧನಸಾಹಯವನ್ನು ಕ್ಲಬ್ಬಿನ ಅಧ್ಯಕ್ಷ ಚಿತ್ತರಂಜನ್ ಹೆಗ್ಡೆ ಹರ್ಕೂರು ಅವರು ವಿತರಿಸಿದರು.ಕ್ಲಬ್ಬಿನ ಸರ್ವ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಕ್ಲಬ್ಬಿನ ಕಾರ್ಯದರ್ಶಿ ಕಾಳಾವರ ಉದಯ ಶೆಟ್ಟಿ ಲೆಕ್ಕಪತ್ರ ಮಂಡನೆ ಮಾಡಿದರು.ನಿವೃತ್ತ ಮುಖ್ಯೋಪಾಧ್ಯಾಯರಾದ ವೀರಣ್ಣ ಶೆಟ್ಟಿ ನಿರೂಪಿಸಿದರು.ಎಡ್ವರ್ಡ್ ಮೆಮೋರಿಯಲ್ […]

ತರಕಾರಿ ಅಂಗಡಿಗೆ ನುಗ್ಗಿದ ಕಾರು,ತಪ್ಪಿದ ಬಾರಿ ಅನಾಹುತ

ಉಡುಪಿ:ಮಧ್ಯಪಾನ ಮಾಡಿಕೊಂಡು ಅಜಾಗರೂಕತೆಯಿಂದ ವಾಹನ ಚಲಾಯಿಸಿಕೊಂಡು ಬಂದ ಯುವಕ ತರಕಾರಿ ಅಂಗಡಿಗೆ ಕಾರನ್ನು ನುಗ್ಗಿಸಿದ ಘಟನೆ ಬೈಲೂರುನಲ್ಲಿ ನಡೆದಿದೆ.ಬೆಂಗಳೂರಿನಿಂದ ಮಲ್ಪೆ ಕಡೆಗೆ ಸಾಗುತ್ತಿದ್ದ ಸಂದರ್ಭ ಈ ಅವಘಡ ಸಂಭವಿಸಿದೆ. ಕಾರಿನಲ್ಲಿ ನಾಲ್ಕು ಜನರ ಪ್ರಯಾಣ ಮಾಡುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಕಾರು ಡಿಕ್ಕಿ ಹೊಡೆದ ರಭಸಕ್ಕೆ ಅಂಗಡಿಯ ಗೋಡೆ ಬಿದ್ದಿದೆ. ಈ ಹೊತ್ತಿನಲ್ಲಿ ಅಂಗಡಿಯಲ್ಲಿ ಯಾರು ಇಲ್ಲದೆ ಇರುವುದರಿಂದ ಬಾರಿ ದೊಡ್ಡ ದುರಂತ‌ ತಪ್ಪಿದೆ.

You cannot copy content of this page