ಗೋ ಶಾಲೆ ನಿರ್ಮಾಣಕ್ಕೆ ಗೋ ಪ್ರೇಮಿಗಳ ಆಗ್ರಹ
ಕುಂದಾಪುರ:ಬೈಂದೂರು ವಿಧಾನಸಭೆ ಕ್ಷೇತ್ರದ ವ್ಯಾಪ್ತಿ ಪ್ರದೇಶವಾದ ಹೊಸಾಡು,ನಾವುಂದ,ಮರವಂತೆ,ಬಾರಂದಾಡಿ,ಗಂಗೊಳ್ಳಿ ಸೇರಿದಂತೆ ನಾನಾ ಕಡೆಗಳಲ್ಲಿ ಬೀಡಾಡಿ ಗೋವುಗಳ ಸಂಖ್ಯೆ ಅಧಿಕವಾಗಿದೆ.ರಾತ್ರಿ ಸಮಯದಲ್ಲಿ ಗದ್ದೆಗಳಿಗೆ ದಾಳಿ ಮಾಡುವ ಬೀಡಾಡಿ ಗೋಗಳು ರೈತರಿಗೆ ಉಪದ್ರಕಾರಿಯಾಗಿ ಪರಿಣಮಿಸಿವೆ.ಬೀಡಾಡಿ ಗೋವುಗಳಿಂದ ಆಗುತ್ತಿರುವ ತೊಂದರೆಯನ್ನು ನಿಯಂತ್ರಣಕ್ಕೆ ತರಲು ಗೋ ಶಾಲೆ ನಿರ್ಮಾಣ ಮಾಡಬೇಕ್ಕೆನ್ನುವುದು ಸ್ಥಳೀಯರ ಬೇಡಿಕೆ ಆಗಿದೆ. (ರಾತ್ರಿ ಹಗಲೆನ್ನದೆ ಭತ್ತದ ಗದ್ದೆಗಳಿಗೆ ದಾಳಿ ಮಾಡುವ ಬೀಡಾಡಿ ಗೋಗಳಿಂದ ತೊಂದರೆ ಆಗುತ್ತಿದೆ ಎಂಬುದು ರೈತರ ಅಳಲು) ಜಾನುವಾರು ಸಾಗಾಣಿಕೆಯಲ್ಲಿ ರೈತರು ನಿರುತ್ಸಾಹ ತೋರ್ಪಡಿಸುತ್ತಿದ್ದರಿಂದ ಗೋವುಗಳು ಬೀದಿ ಪಾಲಾಗಿದ್ದು,ಇತ್ತೀಚಿನ […]