ಪ್ರಥಮಾ ಆರ್ ತಾಳಿಕೋಟಿ ರಾಜ್ಯಕ್ಕೆ 2ನೇ ರ್ಯಾಂಕ್

ಕುಂದಾಪುರ:ವಿ.ಕೆ.ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಹಾಗೂ ಆಲೂರು ಸರಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕರಾದ ರಾಜಶೇಖರ ತಾಳಿಕೋಟಿ ಅವರ ಪುತ್ರಿ ಪ್ರಥಮಾ ಆರ್ ತಾಳಿಕೋಟಿ ಅವರು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 618 ಅಂಕಗಳನ್ನು ಗಳಿಸಿದ್ದು ಮರು ಮೌಲ್ಯ ಮಾಪನದ ನಂತರ 625 ರಲ್ಲಿ 624 ಅಂಕವನ್ನು ಪಡೆದು ರಾಜ್ಯದಲ್ಲಿ 2ನೇ ರ್ಯಾಂಕ್ ಹಾಗೂ ಉಡುಪಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.ಆಂಗ್ಲ ಭಾಷಾ ವಿಷಯದಲ್ಲಿ 94 ಅಂಕಗಳಿಸಿದ ಪ್ರಥಮಾ ಆರ್ ತಾಳಿಕೋಟಿ ಅವರು ಮರು ಮಾಲ್ಯ […]

ಆಲೂರು-ಇಂಬಳಹೊಳೆ ರಸ್ತೆ ಅಭಿವೃದ್ಧಿಗೆ ಆಗ್ರಹ

ಕುಂದಾಪುರ:ಬೈಂದೂರು ವಿಧಾನಸಭೆ ಕ್ಷೇತ್ರದ ಆಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಆಲೂರು ಇಂಬಳಹೊಳೆಯಿಂದ ಬಡಾಕೆರೆ ನಾವುಂದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇಂಬಳಹೊಳೆ ಎಂಬಲ್ಲಿ ಸುಮಾರು 500 ಮೀಟರ್ ವರೆಗೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ.ಕಚ್ಚಾ ರಸ್ತೆಯಲ್ಲಿ ಮಳೆಗಾಲದಲ್ಲಿ ಸಾಗುವುದೇ ದುಸ್ತರವಾಗಿದ್ದು ರಸ್ತೆಯನ್ನು ಅಭಿವೃದ್ಧಿಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.ಕಾಡಂಚಿನ ಪ್ರದೇಶವಾದ ಆಲೂರು ಇಂಬಳಹೊಳೆ ಮುಖ್ಯ ರಸ್ತೆಯು ಆಲೂರು ಪೇಟೆ ಮತ್ತು ನಾವುಂದ-ಬಡಾಕೆರೆಗೆ ಸಂಪರ್ಕವನ್ನು ಕಲ್ಪಿಸುತ್ತದೆ.ಆಲೂರು ಇಂಬಳ ಹೊಳೆ ರಸ್ತೆಯಲ್ಲಿ ದಿನಂಪತ್ರಿ ನೂರಾರು ವಾಹನಗಳು ಸಂಚರಿಸುತ್ತವೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ರಸ್ತೆಯನ್ನು […]

ಚಂಡಮಾರುತದ ಅಬ್ಬರಕ್ಕೆ ದಕ್ಷಿಣ ಬ್ರೆಜಿಲ್ ನಲ್ಲಿ 8 ಮಂದಿಸಾವು

ಕುಂದಾಪುರ:ದಕ್ಷಿಣ ಬ್ರೆಜಿಲ್ ರಾಜ್ಯವಾದ ರಿಯೊ ಗ್ರಾಂಡೆ ಡೊ ಸುಲ್‌ನಲ್ಲಿ ಉಷ್ಣವಲಯದ ಚಂಡಮಾರುತದಿಂದ ಸತ್ತವರ ಸಂಖ್ಯೆ ಎಂಟಕ್ಕೆ ಏರಿದ್ದು, 19 ಜನರು ನಾಪತ್ತೆಯಾಗಿದ್ದಾರೆ.40 ಪುರಸಭೆಗಳ ವ್ಯಾಪ್ತಿಯಲ್ಲಿ ಭೂಕುಸಿತ,ಪ್ರವಾಹ ಮತ್ತು ವಿದ್ಯುತ್ ಉಂಟಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ಶನಿವಾರ ವರದಿ ಮಾಡಿದೆ.ಒಟ್ಟು 2,330 ಜನರನ್ನು ಸ್ಥಳಾಂತರಿಸಲಾಗಿದೆ.

You cannot copy content of this page