ಗಂಗೊಳ್ಳಿ ಠಾಣೆ ಉಪನೀರಿಕ್ಷಕರಾಗಿ ಹರೀಶ್ ಆರ್ ಅಧಿಕಾರ ಸ್ವೀಕಾರ

ಕುಂದಾಪುರ:ಗಂಗೊಳ್ಳಿ ಪೆÇಲೀಸ್ ಠಾಣೆಯ ಉಪನಿರೀಕ್ಷಕರಾಗಿ ಹರೀಶ ಆರ್ ಸೋಮವಾರ ಅಧಿಕಾರ ಸ್ವೀಕರಿಸಿದರು.ಗಂಗೊಳ್ಳಿ ಪೆÇಲೀಸ್ ಠಾಣೆಯ ಉಪನಿರೀಕ್ಷಕರಾಗಿದ್ದ ವಿನಯ್ ಎಂ ಕೊರ್ಲಹಳ್ಳಿ ಅವರು ಕುಂದಾಪುರ ಪೆÇಲೀಸ್ ಠಾಣೆಗೆ ವರ್ಗಾವಣೆಯಾಗಿದ್ದಾರೆ.ಕಂಡ್ಲೂರು ಸಂಚಾರ ಠಾಣೆಯಲ್ಲಿ ಉಪನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಹರೀಶ್ ಆರ್. ಅವರನ್ನು ಗಂಗೊಳ್ಳಿ ಪೆÇಲೀಸ್ ಠಾಣೆಯ ಉಪನಿರೀಕ್ಷಕರಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿತ್ತು

ಹಣವನ್ನು ಹಿಂತಿರುಗಿಸಿ ಸಾಮಾಜಿಕ ಕಾಳಜಿ ಮೆರೆದ ಧನ್ವಿ ಮರವಂತೆ

ಕುಂದಾಪುರ:ವಿಶ್ವ ಯೋಗ ಪಟು ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ವಿಜೇತೆ ಬಾಲ ಪ್ರತಿಭೆಯಾಧ ಧನ್ವಿ ಮರವಂತೆ ಅವರು ಶುಕ್ರವಾರ ಮನೆಯಿಂದ ಶಾಲೆಗೆ ಹೋಗುತ್ತಿರುವ ಸಂದರ್ಭದಲ್ಲಿ ರಸ್ತೆಯಲ್ಲಿ ಸಿಕ್ಕಿದ್ದ ಸುಮಾರು 11,500.ರೂ ಅನ್ನು ಪೆÇಲೀಸ್ ಠಾಣೆಗೆ ಹಸ್ತಾಂತರ ಮಾಡಿ ಫಲಾನುಭವಿಗಳಿಗೆ ಮರಳಿಸುವುದರ ಮುಖೇನ ಸಾಮಾಜಿಕ ಕಾಳಜಿ ಮೆರೆದಿದ್ದಾರೆ.ಬಾಲಪ್ರತಿಭೆ ಧನ್ವಿ ಮರವಂತೆ ಅವರ ಸಾಮಾಜಿಕ ಕಾಳಜಿಯನ್ನು ಪ್ರಶಂಶಿಸಿದ ಗಂಗೊಳ್ಳಿ ಪೆÇಲೀಸ್ ಠಾಣೆಯ ಪಿ.ಎಸ್.ಐ ವಿನಯ್ ಎಂ ಕೊರ್ಲಹಳ್ಳಿ ಅವರು ಅವಳ ವಿದ್ಯಾರ್ಥಿ ಜೀವನಕ್ಕೆ ಅನುಕೂಲವಾಗುವ ದೃಷ್ಟಿಯಿಂದ 13,000.ರೂ ಮೌಲ್ಯದ ಟೇಬಲ್ ಸಹಿತ […]

ಬಿಪರ್‍ಜಾಯ್ ಚಂಡಮಾರುತ ಅಬ್ಬರ,ರಸ್ತೆ ಬಿರುಕು

ಕುಂದಾಪುರ:ಬಿಪರ್‍ಜಾಯ್ ಚಂಡಮಾರುತದಿಂದ ಕಡಲಬ್ಬರ ಉಂಟಾದ ಕಾರಣ ಬೈಂದೂರು ತಾಲೂಕಿನ ಮರವಂತೆಯಲ್ಲಿ ಕಡಲ್ಕೊರೆತ ಉಂಟಾಗಿ ಫಿಷರೀಸ್ ರಸ್ತೆ ಬಿರುಕು ಬಿಟ್ಟಿದೆ.ಕಳೆದ ಬಾರಿ ಕಾಣಿಸಿಕೊಂಡಿದ್ದ ತೌಕ್ತೆ ಚಂಡಮಾರುತದ ಪ್ರಭಾವದಿಂದ ಮರವಂತೆ ಕರಾವಳಿ ಭಾಗದ ರಸ್ತೆ ಸಮುದ್ರ ಪಾಲಾಗಿತ್ತು,ಮೀನುಗಾರರು ಸ್ವತಃ ತಮ್ಮ ಖರ್ಚಿನಲ್ಲಿ ಕೆಂಪು ಮಣ್ಣನ್ನು ಹಾಕಿ ರಸ್ತೆಯನ್ನು ಪುನರ್ ನಿರ್ಮಣ ಮಾಡಿದ್ದರು ಆದರೆ ಸರಕಾರ ಯಾವುದೇ ರೀತಿ ಪರಿಹಾರದ ಕ್ರಮಗಳನ್ನು ಕೈಗೊಳ್ಳದೆ ಅಸಹಕಾರವನ್ನು ತಾಳಿತ್ತು.ಕಡಲ ತೀರದ ವಾಸಿಗಳ ರಕ್ಷಣೆಗೆ ಸರಕಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಮೀನುಗಾರರು ಆಗ್ರಹಿಸಿದ್ದಾರೆ.

You cannot copy content of this page