ಘನಪಾಠಿ ಕೆ.ಗೋವಿಂದ ಪ್ರಕಾಶ ಭಟ್ಟಗೆ ಸನ್ಮಾನ

ಕುಂದಾಪುರ:ಘನಪಾಠಿ ವಿದ್ವಾನ್ ಬಿ.ಕೆ ಲಕ್ಷ್ಮೀನಾರಾಯಣ ಭಟ್ ಗುರುಶಿಷ್ಯರು ಮತ್ತು ವೇದಾಭಿಮಾನಿಗಳ ಪರಿಷತ್ ಕುಂದಾಪುರ ವತಿಯಿಂದ ಆಹಿತಾಗ್ನಿ ಘನಪಾಠಿ ಕೆ.ಗೋವಿಂದ ಪ್ರಕಾಶ ಭಟ್ ಅವರನ್ನು ಶೃಂಗೇರಿಯಲ್ಲಿನ ಅವರ ವೇದಶ್ರೀ ನಿವಾಸದಲ್ಲಿ ನಗದು ಪುರಸ್ಕಾರವನ್ನು ನೀಡಿ ಘನಪಾಠಿ ಬಿ.ಕೆ ಲಕ್ಷ್ಮೀನಾರಾಯಣ ಭಟ್ ಸನ್ಮಾನಿಸಿದರು.ಕುಂದಾಪುರ ತಾಲೂಕಿನ ಹೊಸಾಡು ಗಣೇಶ್ ಸೊಸೈಟಿ ಅಧ್ಯಕ್ಷ ಮುರಳೀಧರ ಐತಾಳ್ ಸ್ವಾಗತಿಸಿ ವಂದಿಸಿದರು.

ಶಾಸಕ ಗುರುರಾಜ್ ಗಂಟಿಹೊಳೆ ಗಂಗೊಳ್ಳಿ ಜೆಟ್ಟಿ ಪರಿಶೀಲನೆ

ಕುಂದಾಪುರ:ಕಳೆದ ವರ್ಷ ಜೆಟ್ಟಿ ಕುಸಿತದಿಂದ ಹಾನಿ ಸಂಭವಿಸಿದ ಗಂಗೊಳ್ಳಿ ಗಂಗೊಳ್ಳಿ ಬಂದರಿಗೆ ಗುರುರಾಜ್ ಗಂಟಿಹೊಳೆ ಭೇಟಿ ಸ್ಥಳ ಪರಿಶೀಲನೆ ಮಾಡಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.ಈ ಸಂದರ್ಭದಲ್ಲಿ ಗಂಗೊಳ್ಳಿ ಗ್ರಾ.ಪಂ ಅಧ್ಯಕ್ಷ ಶ್ರೀನಿವಾಸ ಖಾರ್ವಿ,ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ಹಿರಿಯ ಮೀನುಗಾರರಾದ ರಾಮಪ್ಪ ಖಾರ್ವಿ,ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ,ಅಧಿಕಾರಿಗಳು ಉಪಸ್ಥಿತರಿದ್ದರು.

ಎಸ್‍ಎಸ್‍ಎಲ್‍ಸಿ ಫಲಿತಾಂಶ-2023 ಸಂಭ್ರಮ,ಪ್ರತಿಭಾನಿತ್ವ ವಿದ್ಯಾರ್ಥಿಗಳಿಗೆ ಅಭಿನಂದನೆ

ಕುಂದಾಪುರ:ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೈಂದೂರು,ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘ ಬೈಂದೂರು,ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಬೈಂದೂರು ವತಿಯಿಂದ ಎಸ್‍ಎಸ್‍ಎಲ್‍ಸಿ ಫಲಿತಾಂಶ-2023 ಸಂಭ್ರಮ ಮತ್ತು ಪ್ರತಿಭಾನಿತ್ವ ವಿದ್ಯಾರ್ಥಿಗಳಿಗೆ ಸನ್ಮಾನ ಅಭಿನಂದನಾ ಕಾರ್ಯಕ್ರಮ ಶ್ರೀಮಹಾಗಣಪತಿ ಮಾಂಗಲ್ಯ ಮಂಟಪ ನಾವುಂದದಲ್ಲಿ ನಡೆಯಿತು.ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಶಿಕ್ಷಕರು ಮಕ್ಕಳಿಗೆ ಸ್ಫೂರ್ತಿದಾಯಕರಾದರೆ ಮಾತ್ರ ಹೆಚ್ಚಿನ ರೀತಿಯಲ್ಲಿ ಮಕ್ಕಳು ವಿದ್ಯಾಭ್ಯಾಸದಲ್ಲಿ ತೊಡಗಿಕೊಳ್ಳಲು ಸಾಧ್ಯವಿದೆ ಎಂದು ಹೇಳಿದರು. ಕೊಲ್ಲೂರು ದೇವಳದ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ,ವಿದ್ಯಾಂಗ ಉಪ ನಿರ್ದೇಶಕ […]

You cannot copy content of this page