ಎಸ್‍ಎಸ್‍ಎಲ್‍ಸಿ ಫಲಿತಾಂಶ-2023 ಸಂಭ್ರಮ,ಪ್ರತಿಭಾನಿತ್ವ ವಿದ್ಯಾರ್ಥಿಗಳಿಗೆ ಅಭಿನಂದನೆ

ಕುಂದಾಪುರ:ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೈಂದೂರು,ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘ ಬೈಂದೂರು,ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಬೈಂದೂರು ವತಿಯಿಂದ ಎಸ್‍ಎಸ್‍ಎಲ್‍ಸಿ ಫಲಿತಾಂಶ-2023 ಸಂಭ್ರಮ ಮತ್ತು ಪ್ರತಿಭಾನಿತ್ವ ವಿದ್ಯಾರ್ಥಿಗಳಿಗೆ ಸನ್ಮಾನ ಅಭಿನಂದನಾ ಕಾರ್ಯಕ್ರಮ ಶ್ರೀಮಹಾಗಣಪತಿ ಮಾಂಗಲ್ಯ ಮಂಟಪ ನಾವುಂದದಲ್ಲಿ ನಡೆಯಿತು.ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಶಿಕ್ಷಕರು ಮಕ್ಕಳಿಗೆ ಸ್ಫೂರ್ತಿದಾಯಕರಾದರೆ ಮಾತ್ರ ಹೆಚ್ಚಿನ ರೀತಿಯಲ್ಲಿ ಮಕ್ಕಳು ವಿದ್ಯಾಭ್ಯಾಸದಲ್ಲಿ ತೊಡಗಿಕೊಳ್ಳಲು ಸಾಧ್ಯವಿದೆ ಎಂದು ಹೇಳಿದರು. ಕೊಲ್ಲೂರು ದೇವಳದ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ,ವಿದ್ಯಾಂಗ ಉಪ ನಿರ್ದೇಶಕ […]

ಚಾರಣಕ್ಕೆ ತೆರಳಿದ್ದ ಎಂಬಿಬಿಎಸ್ ಪದವಿಧರ ಯುವಕ ಹೃದಯಾಘಾತದಿಂದ ಸಾವು

ಕುಂದಾಪುರ:ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ನೇತ್ರಾವತಿ ಉಗಮ ಸ್ಥಾನಕ್ಕೆ ಚಾರಣಕ್ಕೆ ತೆರಳಿದ್ದ ಎಂಬಿಬಿಎಸ್ ಪದವೀಧರ ಯುವಕ ಹೃದಯಘಾತದಿಂದ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.ಮೈಸೂರಿನ ಜೆಪಿ ನಗರದ ನಿವಾಸಿ ರಕ್ಷಿತ್27 ಮೃತಪಟ್ಟ ದುರ್ದೈವಿ.ತನ್ನ ಐವರು ಸ್ನೇಹಿತರೊಂದಿಗೆ ಹೊರನಾಡಿಗೆ ಬಂದಿದ್ದ ರಕ್ಷಿತ್, ಅಲ್ಲಿಂದ ನೇತ್ರಾವತಿ ಉಗಮ ಸ್ಥಾನದ ಕಡೆ ಚಾರಣಕ್ಕೆ ಹೊರಟಿದ್ದರು.ಎಳನೀರು ಗಡಿ ಸುಮಾರು 4 ಕಿ.ಮೀ ಮುಂದೆ ಸಾಗುತ್ತಿದ್ದ ವೇಳೆ ರಕ್ಷಿತ್ ಗೆ ತೀವ್ರ ತರಹದ ಎದೆ ನೋವು ಕಾಣಿಸಿಕೊಂಡಿದೆ ಎದೆ ನೋವಿನಿಂದ ಬಳಲಿದ ಸ್ನೇಹಿತನನ್ನು,ಸ್ಥಳೀಯರ ಸಹಕಾರದಿಂದ ಹೊತ್ತು […]

ಮನೆಯೊಳಗೆ ನುಗ್ಗಿದ ಚಿರತೆ,ವ್ಯಕ್ತಿಯೊಬ್ಬರ ಮೇಲೆ ದಾಳಿ

ಕುಂದಾಪುರ:ಮನೆಯೊಳಗೆ ನುಗ್ಗಿದ ಚಿರತೆಯೊಂದು ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿದ ಘಟನೆ ಕೊಲ್ಲೂರು ಸಮೀಪದ ನಾಗೋಡಿ ಎಂಬಲ್ಲಿ ಕಳೆದ ತಡ ರಾತ್ರಿ ನಡೆದಿದೆ.ಕೊಲ್ಲೂರು ಸಮೀಪದ ನಾಗೋಡಿ ನಿವಾಸಿ ಗಣೇಶ್ (48) ಎನ್ನುವವರು ಚಿರತೆ ದಾಳಿಗೆ ಒಳಗಾಗಿದ್ದ ವ್ಯಕ್ತಿ.ನಾಯಿಯನ್ನು ಬೇಟೆಯಾಡಲು ಬಂದಿದ್ದ ಚಿರತೆ ನಾಯಿ ಮೇಲೆ ದಾಳಿ ನಡೆಸಿದೆ ಚಿರತೆ ದಾಳಿಯಿಂದ ಬೆದರಿದ ನಾಯಿ ಮನೆಯೊಳಗೆ ನುಗಿದ್ದು,ನಾಯಿಯನ್ನು ಬೆನ್ನಟ್ಟಿ ಬಂದಿದ್ದ ಚಿರತೆ ಸಹ ಮನೆಯೊಳಗೆ ನುಗ್ಗಿದೆ ಈ ವೇಳೆ ಗಣೇಶ್ ಎನ್ನುವವರ ಮೇಲೆ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.ಕೂಡಲೇ […]

You cannot copy content of this page