ಭಾರಿ ಗಾಳಿ ಮಳೆಗೆ ಉರುಳಿದ ಮರ:ವಿದ್ಯುತ್ ಸಂಪರ್ಕ ಕಡಿತ
ಕುಂದಾಪುರ:ಮುಳ್ಳಿಕಟ್ಟೆ-ನಾಯಕವಾಡಿ ಮುಖ್ಯ ರಸ್ತೆ ಮೇಲೆ ಹಾದು ಹೋದ 11,000.ಕೆ.ವಿ ವಿದ್ಯುತ್ ಲೈನ್ ಮೇಲೆ ಬೃಹತ್ ಗಾತ್ರದ ಮರ ಉರುಳಿ ಬಿದ್ದು ರಸ್ತೆಗೆ ಒರಗಿದೆ.ವಿದ್ಯುತ್ ಲೈನ್ ಮೇಲೆ ಮರ ಬಿದ್ದ ಪರಿಣಾಮ ತಂತಿ ತುಂಡಾಗಿದ್ದರಿಂದ ಆಸುಪಾಸಿನ ಪರಿಸರದಲ್ಲಿ ಬೆಳಿಗ್ಗೆ ಯಿಂದ ಸಂಜೆ ತನಕ ವಿದ್ಯುತ್ ಕೈ ಕೊಟ್ಟಿದ್ದೆ.ಗುಜ್ಜಾಡಿ ಗ್ರಾ.ಪಂ ಮತ್ತು ಮೆ.ಸ್ಕಾಂ ಸಿಬ್ಬಂದಿಗಳು ಹಾಗೂ ಇಬ್ರಾಹಿಂ ಗಂಗೊಳ್ಳಿ ಮತ್ತು ಸ್ಥಳೀಯರು ಮರವನ್ನು ತೆರವು ಮಾಡಿದರು.