ಭಾರಿ ಗಾಳಿ ಮಳೆಗೆ ಉರುಳಿದ ಮರ:ವಿದ್ಯುತ್ ಸಂಪರ್ಕ ಕಡಿತ

ಕುಂದಾಪುರ:ಮುಳ್ಳಿಕಟ್ಟೆ-ನಾಯಕವಾಡಿ ಮುಖ್ಯ ರಸ್ತೆ ಮೇಲೆ ಹಾದು ಹೋದ 11,000.ಕೆ.ವಿ ವಿದ್ಯುತ್ ಲೈನ್ ಮೇಲೆ ಬೃಹತ್ ಗಾತ್ರದ ಮರ ಉರುಳಿ ಬಿದ್ದು ರಸ್ತೆಗೆ ಒರಗಿದೆ.ವಿದ್ಯುತ್ ಲೈನ್ ಮೇಲೆ ಮರ ಬಿದ್ದ ಪರಿಣಾಮ ತಂತಿ ತುಂಡಾಗಿದ್ದರಿಂದ ಆಸುಪಾಸಿನ ಪರಿಸರದಲ್ಲಿ ಬೆಳಿಗ್ಗೆ ಯಿಂದ ಸಂಜೆ ತನಕ ವಿದ್ಯುತ್ ಕೈ ಕೊಟ್ಟಿದ್ದೆ.ಗುಜ್ಜಾಡಿ ಗ್ರಾ.ಪಂ ಮತ್ತು ಮೆ.ಸ್ಕಾಂ ಸಿಬ್ಬಂದಿಗಳು ಹಾಗೂ ಇಬ್ರಾಹಿಂ ಗಂಗೊಳ್ಳಿ ಮತ್ತು ಸ್ಥಳೀಯರು ಮರವನ್ನು ತೆರವು ಮಾಡಿದರು.

ಕುಬ್ಜ ನದಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಅರ್ಚಕ ಸಾವು

ಕುಂದಾಪುರ:ಕಮಲಶಿಲೆ ದೇವಸ್ಥಾನಕ್ಕೆ ಪೂಜೆಗೆ ತೆರಳುತ್ತಿದ್ದ ಸಂದರ್ಭ ತಪ್ಪಲು ಎಂಬಲ್ಲಿ ಸೇತುವೆ ದಾಟುತ್ತಿದ್ದಾಗ ಕಮಲಶಿಲೆ ದೇವಳದ ಅರ್ಚಕ ಶೇಷಾದ್ರಿ ಐತಾಳ್(75) ಎನ್ನುವವರು ಕುಬ್ಜ ನದಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತ ಘಟನೆ ನಡೆದಿದೆ.ಮುಳುಗು ತಜ್ಞ ಮಂಜುನಾಥ ಕನ್ನೇರಿ,ರಾಘವೇಂದ್ರ ಮೊಗವೀರ,ಕೌಶಿಕ್ ಶವವನ್ನು ಮೇಲೆಕ್ಕೆತ್ತಿದರು.ಕಳೆದ ಮೂರು ದಿನಗಳಿಂದ ಕುಂದಾಪುರ ಭಾಗದಲ್ಲಿ ಧಾರಕಾರ ಮಳೆ ಸುರಿಯುತ್ತಿದ್ದರಿಂದ ಕುಬ್ಜ ನದಿಯಲ್ಲಿ ನೀರಿನ ಹರಿವು ಕೂಡ ಅಧಿಕವಾಗಿತ್ತು. (ಸೇತುವೆ )

ಸ್ಕೂಟಿ ಸಮೇತ ಕೆರೆಗೆ ಬಿದ್ದು ಉದ್ಯಮಿ ಸಾವು

ಕುಂದಾಪುರ:ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲ್ಯಾಡಿ ಸಮೀಪದರಸ್ತೆಯಲ್ಲಿ ಸಾಗುತ್ತಿದ್ದಾಗ ನಿಯಂತ್ರಣ ತಪ್ಪಿದ ಸ್ಕೂಟಿ ರಸ್ತೆ ಪಕ್ಕದಲ್ಲಿದ್ದ ಕೆರೆಗೆ ಬಿದ್ದು ಸವಾರರಾದ ಉದ್ಯಮಿ ದಿವಾಕರ ಶೆಟ್ಟಿ (65) ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಧಾರಕಾರವಾಗಿ ಸುರಿಯುತ್ತಿರುವ ಮಳೆಯಲ್ಲಿ ದಿವಾಕರ ಶೆಟ್ಟಿ ಅವರು ಸ್ಕೂಟಿಯಲ್ಲಿ ಮನೆಗೆ ಸಂಚರಿಸುವ ವೇಳೆ ಸ್ಕಿಡ್ ಆಗಿ ಸ್ಕೂಟಿ ಸಮೇತ ಕೆರೆಗೆ ಬಿದ್ದ ಪರಿಣಾಮ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದಾರೆ.ಮಲ್ಯಾಡಿ ರಸ್ತೆ ಪಕ್ಕದಲ್ಲಿರುವ ಬೃಹತ್ ಕೆರೆಗೆ ಯಾವುದೇ ರೀತಿಯ ತಡೆಗೋಡೆ ಇಲ್ಲದ ಕಾರಣ 15 […]

You cannot copy content of this page