ಗಂಗೊಳ್ಳಿ:ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಸಮಾರೋಪ ಸಮಾರಂಭ

ಕುಂದಾಪುರ:ಉಡುಪಿ ಜಿಲ್ಲಾ ಪಂಚಾಯತ್,ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ ಉಡುಪಿ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ ಹಾಗೂ ಸ.ವಿ. ಆಂಗ್ಲ ಮಾಧ್ಯಮ ಪ್ರೌಢಶಾಲೆ ಗಂಗೊಳ್ಳಿ ಆಶ್ರಯದಲ್ಲಿ ಗಂಗೊಳ್ಳಿ ಎಸ್.ವಿ. ಪದವಿ ಪೂರ್ವ ಕಾಲೇಜಿನ ವಠಾರದಲ್ಲಿ ನಡೆದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ-ಬಾಲಕಿಯರ ಉಡುಪಿ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದ ಸಮಾರೋಪ ಸಮಾರಂಭ ಗುರುವಾರ ನಡೆಯಿತು.ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಎಂ.ನಾಗೇಂದ್ರ ಪೈ,ಶಾಲೆಯ ಶಿಕ್ಷಕ-ರಕ್ಷಕ ಸಮಿತಿ ಉಪಾಧ್ಯಕ್ಷ ಜಿ.ವಿಠಲ ಶೆಣೈ ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.ಪಂಚಾಯತ್ ಸದಸ್ಯ […]

ಗಂಗೊಳ್ಳಿ:ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ

ಕುಂದಾಪುರ:ಕಿನಾರಾ ಜ್ಯೋತಿ ಮತ್ತು ಪ್ರಗತಿ ಮಹಿಳಾ ಸ್ವ ಸಹಾಯ ಸಂಘದ ವತಿಯಿಂದ ಶಿಕ್ಷಕರ ದಿನಾಚರಣೆ, ಹೆಣ್ಣು ಮಕ್ಕಳ ದಿನಾಚರಣೆ ಹಾಗೂ ಹೊಸತು ಆಚರಣೆ ಕಾರ್ಯಕ್ರಮ ಗಂಗೊಳ್ಳಿಯ ವಿಲ್ಸನ್ ಡಯಾಸ್ ಮನೆ ವಠಾರದಲ್ಲಿ ನಡೆಯಿತು.ಗಂಗೊಳ್ಳಿ ಚರ್ಚ್‍ನ ಧರ್ಮಗುರು ರೆ.ಫಾ.ತೋಮಸ್ ರೋಶನ್ ಡಿಸೋಜ ಆಶೀರ್ವಚನ ನೀಡಿದರು.ಚರ್ಚಿನ ಪಾಲನಾ ಮಂಡಳಿ ಕಾರ್ಯದರ್ಶಿ ಗ್ಲೋರಿಯಾ ಡಿಸೋಜ,ಕುಂದಾಪುರ-ಬೈಂದೂರು ವಲಯದ ಸ್ವಸಹಾಯ ಸಂಘಗಳ ಪ್ರೇರಕಿ ಸಿಂತಿಯಾ ರೊಡ್ರಿಗಸ್,ಅಮೃತ ಸ್ತ್ರೀ ಸಂಘಟನೆ ಅಧ್ಯಕ್ಷೆ ಜೆಸಿಂತಾ ಮಿರಾಂದ ಉಪಸ್ಥಿತರಿದ್ದರು.ಹೆಣ್ಣು ಮಕ್ಕಳನ್ನು ಹಾಗೂ ಸ್ಥಳೀಯ ಶಿಕ್ಷಕರನ್ನು ಗೌರವಿಸಲಾಯಿತು.ಕಾರ್ಯಕ್ರಮ ಅಂಗವಾಗಿ ಏರ್ಪಡಿಸಿದ್ದ […]

ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿ ಉಪ್ರಳ್ಳಿ ಪದಾಧಿಕಾರಿಗಳ ಆಯ್ಕೆ

ಬೈಂದೂರು:ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿ ಉಪ್ರಳ್ಳಿ ಅದರ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮ ದೇವಳದ ಮೊಕ್ತೇಸರರಾದ ಕಳಿ ಚಂದ್ರಯ್ಯ ಆಚಾರ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಮಹಿಳಾ ಸಮಿತಿ ನೂತನ ಅಧ್ಯಕ್ಷರಾಗಿ ಶೈಲಾ ಆಚಾರ್ಯ ಉಪ್ಪುಂದ ಹಾಗೂ ಕಾರ್ಯದರ್ಶಿಯಾಗಿ ಜ್ಯೋತಿ ಆಚಾರ್ಯ ಗುಜ್ಜಾಡಿ ಆಯ್ಕೆಯಾದರು.ಉಪಾಧ್ಯಕ್ಷರಾಗಿ ಸುಮತಿ ಆಚಾರ್ಯ ಕಿರಿಮಂಜೇಶ್ವರ,ಇಂದಿರಾ ಆಚಾರ್ಯ ನೀರ್ಕರೆ,ಶ್ರೀಮತಿ ಆಚಾರ್ಯ ಮರವಂತೆ,ಸವಿತ ಆಚಾರ್ಯ ಬಾರಂದಾಡಿ,ಶ್ರೀಮತಿ ಆಚಾರ್ಯ ಮರವಂತೆ,ಗಾಯಿತ್ರಿ ಆಚಾರ್ಯ ಮರವಂತೆ ಆಯ್ಕೆಯಾದರು.ಜೊತೆ ಕಾರ್ಯದರ್ಶಿಯಾಗಿ ಶರಾವತಿ ಆಚಾರ್ಯ ಪಡುಕೋಣೆ,ಸುಜಾತ ಆಚಾರ್ಯ ಕಟ್‍ಬೇಲ್ತೂರು,ಅನುಷಾ ಆಚಾರ್ಯ ಮಾಣಿಕೊಳಲು,ವಿಜಯ ಗಣೇಶ ಪುರೋಹಿತರು,ಕ್ರೀಡಾ ಕಾರ್ಯದರ್ಶಿಯಾಗಿ […]

You cannot copy content of this page