ಗಂಗೊಳ್ಳಿಯಲ್ಲಿ ಪೊಲೀಸ್ ರೂಟ್ ಮಾರ್ಚ್

ಕುಂದಾಪುರ:ಗಣೇಶ ಹಬ್ಬದ ಪ್ರಯುಕ್ತ ಮುಂಜಾಗ್ರತಾ ಕ್ರಮದ ಭಾಗವಾಗಿ ಗಂಗೊಳ್ಳಿಯಲ್ಲಿ ಬೈಂದೂರು ವೃತ್ತ ನಿರೀಕ್ಷ ಸವಿತ್ರ ತೇಜ್ ಅವರ ನೇತೃತ್ವದಲ್ಲಿ ಪೊಲೀಸ್ ರೂಟ್ ಮಾರ್ಚ್ ಸೋಮವಾರ ನಡೆಯಿತು.ಗಂಗೊಳ್ಳಿ ಠಾಣೆ ಪಿಎಸ್‌ಐ ಹರೀಶ್ ಆರ್ ನಾಯ್ಕ್ ಮತ್ತು ಸಿಬ್ಬಂದಿಗಳು,ಕೆಎಸ್‌ಆರ್‌ಪಿ,ಡಿಎಆರ್ ಸಿಬ್ಬಂದಿಗಳು ಭಾಗವಹಿಸಿದ್ದರು.

ನಾಡಿನೆಲ್ಲೆಡೆ ಗಣೇಶ ಚತುರ್ಥಿ ಹಬ್ಬ ಸಂಭ್ರಮದಿಂದ ಆಚರಣೆ

ಕುಂದಾಪುರ:ಪ್ರಥಮ ಪೂಜಿತ ವಿಘ್ನ ನಿವಾರಕನಾದ ಗಣೇಶನನ್ನು ಆರಾಧಿಸದ ವ್ಯಕ್ತಿಯಿಲ್ಲ ಎಲ್ಲಾ ಜಾತಿ ಜನಾಂಗದವರು ಗಣೇಶನನ್ನು ಪೂಜಿಸುತ್ತಾರೆ.ನಮ್ಮ ಬಯಕೆಗಳ ಈಡೇರಿಕೆಗಾಗಿ ಗಜಮುಖನ ಮೊರೆ ಹೋಗುತ್ತೇವೆ.ಸಂಗೀತ,ನೃತ್ಯ,ಚಿತ್ರ,ಶಿಲ್ಪ,ನಾಟಕ,ಯಕ್ಷಗಾನ,ಶುಭಕಾರ್ಯ,ದೇವತಾ ಕಾರ್ಯಗಳ ಆರಂಭಿಕ ಹಂತವಾಗಿ ಗಣೇಶನಿಗೆ ಪೂಜೆ ಸಲ್ಲಿಸಿ ಅವನ ಸ್ತುತಿಸಿಯೇ ಕಾರ್ಯಾರಂಭ ಮಾಡುತ್ತೇವೆ.ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿ ದಿನ ಆಚರಿಸಲಾಗುವ ಗಣೇಶ ಚುತಿರ್ಥಿ ಗಣೇಶ ಹುಟ್ಟಿದ ದಿನ ಎಂದು ಪುರಾಣದ ಪ್ರಕಾರ ನಂಬಲಾಗಿದೆ.ನಾಡಿನಾದ್ಯಂತ ಗಣೇಶ ಚುತುರ್ಥಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು.ನಾನಾ ಕಡೆಗಳಲ್ಲಿ ಗಣೇಶ ದೇವರ ಮೂರ್ತಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದ್ದು.ಚೌತಿ ಹಬ್ಬ ಸಡಗರದಿಂದ […]

ತ್ರಾಸಿ:ಚಾಯ್ ಪೇ ಚರ್ಚಾ ಕಾರ್ಯಕ್ರಮ

ಕುಂದಾಪುರ:ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮ ದಿನದ ಪ್ರಯುಕ್ತ ತ್ರಾಸಿಯಲ್ಲಿ ಚಾಯ್ ಪೇ ಚರ್ಚಾ ಕಾರ್ಯಕ್ರಮ ಭಾನುವಾರ ನಡೆಯಿತು.ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದರು.ಈ ಸಂದರ್ಭ ತ್ರಾಸಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಿಥುನ್ ದೇವಾಡಿಗ ತ್ರಾಸಿ ಮತ್ತು ಬಿಜೆಪಿ ಪಕ್ಷದ ಮುಖಂಡರು,ಕಾರ್ಯಕರ್ತರು ಉಪಸ್ಥಿತರಿದ್ದರು.

You cannot copy content of this page