ಕಟ್ಬೇಲ್ತೂರು:ಪಾಳು ಬಾವಿಗೆ ಬಿದ್ದ ಚಿರತೆ ರಕ್ಷಣೆ
ಕುಂದಾಪುರ:ಕಟ್ಬೇಲ್ತೂರು ಗ್ರಾಮದ ಸುಳ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಮೀಪ ಇರುವ ಸುಳ್ಸೆ ಬಾಬು ಪೂಜಾರಿ ಎಂಬುವವರ ತೋಟದಲ್ಲಿರುವ ಆವರಣವಿಲ್ಲದ ಪಾಳು ಬಾವಿಗೆ ಬಿದ್ದ ಚಿರತೆಯನ್ನು ಶನಿವಾರ ರಕ್ಷಿಸಲಾಗಿದೆ.ಆಹಾರವನ್ನು ಹುಡುಕಿಕೊಂಡು ಜನವಸತಿ ಪ್ರದೇಶದ ಕಡೆಗೆ ಬಂದಿರುವ ಅಂದಾಜು ೩ ವರ್ಷ ಪ್ರಾಯದ ಗಂಡು ಚಿರತೆಯೊಂದು ರಾತ್ರಿ ಸಮಯದಲ್ಲಿ ಆವರಣವಿಲ್ಲದ ಪಾಳು ಬಿದ್ದ ಬಾವಿಗೆ ಬಿದ್ದಿದೆ.ಬೆಳಗಿನ ಸಮಯದಲ್ಲಿ ಪ್ರಾಣಿಯೊಂದು ಕೂಗುತ್ತಿರುವ ಶಬ್ಧವನ್ನು ಗಮನಿಸಿದ ಬಾಬು ಪೂಜಾರಿ ಅವರು ಮನೆ ಹಿಂದುಗಡೆ ಇರುವ ತೋಟದಲ್ಲಿರುವ ಬಾವಿಯನ್ನು ಇಣುಕಿ ನೋಡಿದಾಗ ಚಿರತೆ […]