ಗಂಗೊಳ್ಳಿ:ಅರುಣ ನಾಪತ್ತೆ

ಕುಂದಾಪುರ:10ನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿರುವ ಅರುಣ (15) ಎನ್ನುವ ಬಾಲಕ ಸೆ.20 ರಂದು ಮಧ್ಯಾಹ್ನ 3 ಗಂಟೆಗೆ ಕುಂದಾಪುರಕ್ಕೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದು ಈ ವರೆಗೆ ಮನೆಗೆ ಬಾರದೆ ಕಾಣೆಯಾಗಿರುತ್ತಾನೆ.ಪಿರ್ಯಾದಿದಾರರ ತಮ್ಮ ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೋದಿ ಮೈ ಬಣ್ಣವನ್ನು ಹೊಂದಿರುವ ಅರುಣ 5 ಅಡಿ ಎತ್ತರವಿದ್ದು,ಕಪ್ಪನೆ ಕೂದಲು,ಸಾಧಾರಣ ಮೈ ಕಟ್ಟು ಹೊಂದಿರುತ್ತಾನೆ.ಮನೆಯಿಂದ ಹೊರಡುವ ವೇಳೆ ಕಪ್ಪು ಬಣ್ಣದ ಅರ್ಧ ತೋಳಿನ ಟೀ ಶರ್ಟ್, ಕಪ್ಪು ಬಣ್ಣದ ಜೀನ್ಸ ಪ್ಯಾಂಟ್ ಧರಿಸಿದ್ದು […]

ಗಂಗೊಳ್ಳಿ:ವಿಕಾಸ್ ಖಾರ್ವಿಗೆ ಸನ್ಮಾನ

ಕುಂದಾಪುರ:ಗಂಗೊಳ್ಳಿ ರೋಟರಿ ಕ್ಲಬ್ ವತಿಯಿಂದ ಸರ್.ಎಂ ವಿಶ್ವೇಶ್ವರಯ್ಯನವರ ಜನ್ಮ ಜಯಂತಿಯನ್ನು ಆಚರಿಸಲಾಯಿತು.ಸಿವಿಲ್ ಇಂಜಿನಿಯರ್ ವಿಕಾಸ್ ಖಾರ್ವಿ ಅವರನ್ನು ಸನ್ಮಾನಿಸಲಾಯಿತು.ಕ್ಲಬ್ಬಿನ ಅಧ್ಯಕ್ಷ ನಾಗೇಂದ್ರ ಪೈ,ರಾಮನಾಥ್,ಕಾರ್ಯದರ್ಶಿ ಕೃಷ್ಣ ಪೂಜಾರಿ ಮತ್ತು ಸದಸ್ಯರು ಉಪಸ್ಥಿತರಿದ್ದರು.

ಗಂಗೊಳ್ಳಿ:ಸಾಕ್ಷರತೆ ವಿಚಾರ ಸಂಕಿರಣ ಕಾರ್ಯಕ್ರಮ

ಕುಂದಾಪುರ:ರೋಟರಿ ಕ್ಲಬ್ ಗಂಗೊಳ್ಳಿ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ಸಾಕ್ಷರತೆ ಕುರಿತು ವಿಶೇಷ ವಿಚಾರ ಸಂಕಿರಣ ಕಾರ್ಯಕ್ರಮ ಗಂಗೊಳ್ಳಿ ಎಸ್.ವಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ನಾಗೇಂದ್ರ ಪೈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಸಹಾಯಕ ರಾಜ್ಯಪಾಲ ಆರ್‍ಟಿಎನ್ ಪಿಎಚ್‍ಎಫ್ ಡಾ.ಸಂದೀಪ ಶೆಟ್ಟಿ ಉದ್ಘಾಟಿಸಿದರು.ಝೋನಲ್ ಲೆಫ್ಟಿನೆಂಟ್ ಆರ್‍ಟಿಎನ್ ಪ್ರದೀಪ್ ಯಡಿಯಾಲ್ ಶುಭಹಾರೈಸಿದರು.ವಲಯ ಸಂಯೋಜಕ ನಾರಾಯಣ್ ಇ ನಾಯ್ಕ್ ಸಾಕ್ಷರತೆಯ ಮಹತ್ವದ ಕುರಿತು ಮಾಹಿತಿಯನ್ನು ನೀಡಿದರು.ಶಿವಕುಮಾರ್ ಆಲಗೋಡು ಅವರು ಜೀವನದ ಮೌಲ್ಯಗಳು ಮತ್ತು ನೈತಿಕತೆ ಬಗ್ಗೆ ಮಾತನಾಡಿದರು.ಕ್ಲಬ್ಬಿನ ಅಧ್ಯಕ್ಷ […]

You cannot copy content of this page