ಕೇರಳ ರಾಜ್ಯದ ಮಾಜಿ ಮುಖ್ಯಮಂತ್ರಿ ಉಮನ್ ಚಾಂಡಿ ನಿಧನ

ಬೆಂಗಳೂರು:ಕಾಂಗ್ರೆಸ್ ಪಕ್ಷದ ಹಿರಿಯ ನೇತಾರ,ಎರಡು ಬಾರಿ ಕೇರಳ ರಾಜ್ಯದ ಮುಖ್ಯ ಮಂತ್ರಿ ಆಗಿ ಜನಸೇವೆ ಮಾಡಿರುವ ಮಾಜಿ ಮುಖ್ಯ ಮಂತ್ರಿ ಉಮನ್ ಚಾಂಡಿ ಅವರು ನಿಧನರಾದರು.ವಿದ್ಯಾರ್ಥಿ ಜೀವನದಲ್ಲೆ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಉಮನ್ ಚಾಂಡಿ ಅವರು,ಸತತ 53 ವರ್ಷಗಳ ಕಾಲ ಒಂದೇ ಕ್ಷೇತ್ರವನ್ನು ಪ್ರತಿನಿಧಿಸಿ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದ್ದರು.ಕಾಂಗ್ರೆಸ್ ಪಕ್ಷದ ನಿಷ್ಠಾಂವತ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.

ಟಿಪ್ಪರ್ ಗೆ ಸಿಲುಕಿದ ಸ್ಯಾಂಟ್ರೊ ಕಾರ್,ಕಿಲೋಮೀಟರ್ ವರೆಗೆ ಎಳೆದು ಕೊಂಡು ಹೋದ ಚಾಲಕ

ಪಡುಬಿದ್ರಿ:ಸ್ಯಾಂಟ್ರೊ ಕಾರ್ ಟಿಪ್ಪರ್ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ,ಕಾರಿನ ಮುಂಭಾಗ ನಜ್ಜುಗುಜ್ಜಾಗಿ ಟಿಪ್ಪರ್ ಹಿಂಬದಿ ಬಾಡಿ ಒಳಗೆ ಸಿಲುಕಿ ಕೊಂಡಿದೆ.ಅಪಘಾತ ಸಂಭವಿಸಿದ್ದರು ಟಿಪ್ಪರ್ ಚಾಲಕ ತನ್ನ ಗಾಡಿಯನ್ನು ನಿಲ್ಲಿಸದೆ ಕಾರಿನಲ್ಲಿದ್ದಾ ಪ್ರಯಾಣಿಕರ ಸಹಿತ ಕಾರನ್ನು ಎಳೆದುಕೊಂಡು ಅಸಡ್ಡೆಯಿಂದ ಟಿಪ್ಪರ್ ಚಲಾಯಿಸಿಕೊಂಡು ಹೋಗಿದ ಘಟನೆ ಪಡುಬಿದ್ರಿಯಲ್ಲಿ ಸೋಮವಾರ ನಡೆದಿದೆ.ಹೆಜಮಾಡಿ ಟೋಲ್‍ಗೇಟ್ ಬಳಿ ಟಿಪ್ಪರನ್ನು ಅಡ್ಡ ನಿಲ್ಲಸಿ,ಕಾರಿನಲ್ಲಿದ್ದ ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಹೆಚ್ಚಿನ ತನಿಖೆಯನ್ನು ನಡೆಸಿದ್ದಾರೆ.ಅದೆ ದಾರಿಯಲ್ಲಿ ಸಾಗುತ್ತಿದ್ದ ಇನ್ನೊಂದು ಕಾರಿನಲ್ಲಿದ್ದವರು ತಮ್ಮ ಮೊಬೈಲ್ […]

ಸೌತ್ ಕೆನರಾ ಫೋಟೋಗ್ರಾಫರ್ಸ್,ವಾರ್ಷಿಕ ಕ್ರೀಡಾಕೂಟ

ಕುಂದಾಪುರ:ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ) ಕುಂದಾಪುರ ಮತ್ತು ಬೈಂದೂರು ವಲಯದ ವಾರ್ಷಿಕ ಕ್ರೀಡಾ ಕೂಟ ಕುಂದಾಪುರ ಗಾಂಧಿ ಮೈದಾನದಲ್ಲಿ ಭಾನುವಾರ ನಡೆಯಿತು. ಉದ್ಯಮಿ ದಿನಕರ್ ನಾಯ್ಕ್ ಬೆಳಂಜೆ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ,ಕಷ್ಟ ಪಟ್ಟು ದುಡಿದ ಹಣದಲ್ಲಿ ಸ್ವಲ್ಪಂಶವನ್ನು ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದೀರಿ.ವೃತೀಯ ಜಂಜಾಟದ ನಡುವೆಯೂ ವರ್ಷಕ್ಕೊಮ್ಮೆ ಕ್ರೀಡಾ ಕೂಟವನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ಸದಸ್ಯರೊಳಗೆ ಸಾಮಾರಸ್ಯ ಮುಡಿಸುವ ಪ್ರಯತ್ನ ಸಂಘಟನೆಯಿಂದ ಆಗುತ್ತಿದೆ ಎಂದರು.ಇದೇ ಸಂಧರ್ಭದಲ್ಲಿ ಇಂಡಿಯನ್ ಪ್ಯಾರಾ ಕ್ರಿಕೆಟ್ ಆಟಗಾರ […]

You cannot copy content of this page