ಸಮುದ್ರದಲ್ಲಿ ನಾಪತ್ತೆ ಆದ ಯುವಕ,ಶವವಾಗಿ ಪತ್ತೆ

ಕುಂದಾಪುರ:ತ್ರಾಸಿ-ಮರವಂತೆ ಬೀಚ್‍ನಲ್ಲಿ ಸಮುದ್ರಕ್ಕೆ ಇಳಿದು,ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿ ಮಂಗಳವಾರ ಸಮುದ್ರದಲ್ಲಿ ನಾಪತ್ತೆ ಆಗಿದ್ದ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮೇವಂಡಿ ನಿವಾಸಿ ಫೀರಸಾಬ ನದಾಫ (22) ಎನ್ನುವ ಯುವಕ ಗುಜ್ಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸನ್ಯಾಸಿ ಬಲೇ ಎಂಬಲ್ಲಿ ಸಮುದ್ರ ತೀರದ ಬಳಿ ಬುಧವಾರ ಶವವಾಗಿ ಪತ್ತೆ ಆಗಿದ್ದಾನೆ.ಗಂಗೊಳ್ಳಿ ಠಾಣೆಯ ಪಿಎಸ್‍ಐ ಹರೀಶ್ ನಾಯ್ಕ್ ಮತ್ತು ಸಿಬ್ಬಂದಿಗಳು ಘಟನೆಯ ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು.24/7 ಆಂಬ್ಯುಲೆನ್ಸ್ ಇಬ್ರಾಹಿಂ ಗಂಗೊಳ್ಳಿ ಶವವನ್ನು ಶವಾಗಾರಕ್ಕೆ ಸಾಗಿಸಲು ಸಹರಿಸಿದರು.

ಮಲ್ಪೆಯಲ್ಲಿ ದೋಣಿ ಮುಳುಗಡೆ,ಐವರು ಮೀನುಗಾರರ ರಕ್ಷಣೆ

ಉಡುಪಿ:ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಸಮುದ್ರದ ಅಲೆಗಳ ಆರ್ಭಟಕ್ಕೆ ಒಡೆದು ನೀರು ತುಂಬಿ ಮುಳುಗುವ ಸ್ಥಿತಿಯಲ್ಲಿದ್ದದೋಣಿಯನ್ನು ಆಪತ್ಭಾಂಧವ ಈಶ್ವರ್ ಮಲ್ಪೆ ಅವರ ತಂಡ ರಕ್ಷಿಸಿದ ಘಟನೆ ಮಲ್ಪೆಯಲ್ಲಿ ನಡೆದಿದೆ. ಮೀನುಗಾರರಿಗೆ ತೆರಳಿದ್ದ ಸಂದರ್ಭ ದೋಣಿಯೊಂದು ಮುಳುಗುವ ಸ್ಥಿತಿಯಲ್ಲಿ ಇರುವ ವಿಷಯವನ್ನು ಅರಿತ ಮುಳುಗು ತಜ್ಞ ಈಶ್ವರ ಮಲ್ಪೆ ಮತ್ತು ಅವರ ಸ್ನೇಹಿತರು ದೋಣಿಯ ಮೂಲಕ ಘಟನೆ ಸ್ಥಳಕ್ಕೆ ತೆರಳಿ ಐದು ಜನ ಮೀನುಗಾರರನ್ನು ಹಾಗೂ ಮೂರು ಲಕ್ಷಕ್ಕೂ ಅಧಿಕ ಬೆಲೆಬಾಳುವ ಎರಡು ಎಂಜಿನ್ ಮತ್ತು ಇಂಧನಗಳನ್ನು ಸುರಕ್ಷಿತವಾಗಿ ತರುವಲ್ಲಿ […]

ಮರವಂತೆ ಬೀಚ್ ನಲ್ಲಿ ನೀರಿಗೆ ಇಳಿದ ಪ್ರವಾಸಿಗ ಸಮುದ್ರ ಪಾಲು

ಕುಂದಾಪುರ:ಪಡುಬಿದ್ರಿ ಯಿಂದ ಹುಬ್ಬಳ್ಳಿ ಕಡೆಗೆ ಸಾಗುತ್ತಿದ್ದ ಟ್ಯಾಂಕರ್‍ನ್ನು ಹತ್ತಿಕೊಂಡು ಬಂದಿದ್ದ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮೆವಂಡಿ ನಿವಾಸಿ ಪೀರೂ ನದಾಫ್ (22) ಎನ್ನುವ ಯುವಕನೊಬ್ಬ ತ್ರಾಸಿ-ಮರವಂತೆ ಬೀಚ್‍ನಲ್ಲಿ ಸಮುದ್ರಕ್ಕೆ ಇಳಿದ ಪರಿಣಾಮ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದು ಸಮುದ್ರದಲ್ಲಿ ನಾಪತ್ತೆ ಆದ ಘಟನೆ ಮಂಗಳವಾರ ನಡೆದಿದೆ. ಉಡುಪಿಯಲ್ಲಿ ಮೇಸ್ತ್ರಿ ಕೆಲಸವನ್ನು ಮಾಡಿಕೊಂಡಿರುವ ಗದಗ ಜಿಲ್ಲೆಯ ಪೀರೂ ನದಾಫ್ ಎನ್ನುವ ಯುವಕ ಊರಿಗೆ ಹೋಗುವ ಸಲುವಾಗಿ ಹುಬ್ಬಳ್ಳಿ ಕಡೆಗೆ ಸಾಗುತ್ತಿದ್ದ ಟ್ಯಾಂಕರ್‍ನ್ನು ಉಡುಪಿಯಲ್ಲಿ ಅಡ್ಡ ಗಟ್ಟಿ ಹತ್ತಿಕೊಂಡಿದ್ದಾನೆ.ಮಧ್ಯಾಹ್ನ […]

You cannot copy content of this page