ಕರಾಟೆ ಸ್ಪರ್ಧೆಯಲ್ಲಿ,ಯಶವಂತ ಖಾರ್ವಿಗೆ ಪ್ರಥಮ ಸ್ಥಾನ

ಭಟ್ಕಳ:ಪದವಿ ಪೂರ್ವ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಟ್ಕಳದ ಬೀನಾ ವೈದ್ಯಾ ಪಿ.ಯು ಕಾಲೇಜಿನ ವಿದ್ಯಾರ್ಥಿ,ಮುಳುಗುಜ್ಞ ದಿನೇಶ್ ಖಾರ್ವಿ ಗಂಗೊಳ್ಳಿ ಲೈಟ್‍ಹೌಸ್ ಅವರ ಮಗ ಯಶವಂತ ಖಾರ್ವಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಅ.7 ರಂದು ಶ್ರೀಗುಹೇಶ್ವರ ದೇವಳದಲ್ಲಿ ಅಷ್ಟಮಂಗಲ ಪ್ರಶ್ನೆ

ಕುಂದಾಪುರ:ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪುರಾಣ ಪ್ರಸಿದ್ಧ ಗುಜ್ಜಾಡಿ ಗ್ರಾಮದ ಕೊಡಪಾಡಿಯಲ್ಲಿರುವ ಶ್ರೀ ಗುಹೇಶ್ವರ ದೇವಾಲಯವು ಸಾವಿರಾರು ವರ್ಷಗಳ ಇತಿಹಾಸವನ್ನುಳ್ಳ ದೇವಾಲಯಗಳಲ್ಲಿ ಒಂದಾಗಿದೆ.ಪಡುವಣ ಕಡಲಿನಿಂದ ಆರಂಭಗೊಂಡು ಸೌಪರ್ಣಿಕಾ ನದಿಯಿಂದ ಸುತ್ತುವರಿಯಲ್ಪಟ್ಟ ಗಂಗೊಳ್ಳಿ,ಗುಜ್ಜಾಡಿ,ತ್ರಾಸಿ ಮತ್ತು ಹೊಸಾಡು ಈ ನಾಲ್ಕು ಗ್ರಾಮಗಳ ಗ್ರಾಮದೇವರಾದ ಶ್ರೀ ಗುಹೇಶ್ವರ ಸನ್ನಿಧಾನದಲ್ಲಿ ಜೀರ್ಣೋದ್ಧಾರ ಅಂಗವಾಗಿ ಕೇರಳದ ಪ್ರಸಿದ್ಧ ದೈವಜ್ಞರಾದ ಶ್ರೀ ನಾರಾಯಣ ನಂಬೂದಿರಿ ಕೈಮುಕ್ಕು ಹಾಗೂ ಇತರ ದೈವಜ್ಞರ ಸಹಕಾರದೊಂದಿಗೆ ಅಷ್ಟಮಂಗಲ ಪ್ರಶ್ನೆಯು ಅ.7 ರಂದು ಶನಿವಾರ ದಿಂದ ಆರಂಭಗೊಂಡು ಅ.09 ರ ಸೋಮವಾರ […]

ದೇವಾಡಿಗ ಅಕ್ಷಯ ಕಿರಣ ಸೇವಾ ಪೌಂಡೇಶನ್ 170ನೇ ಸೇವಾಯಜ್ಞ

ಕುಂದಾಪುರ: ನೊಂದವರ ಬಾಳಿಗೆ ಬೆಳಕಾಗುತ್ತಿರುವ ದೇವಾಡಿಗ ಅಕ್ಷಯ ಕಿರಣದ ವತಿಯಿಂದ169 ನೆ ಸೇವಾಕಾರ್ಯದ ಅಂಗವಾಗಿ ಮುಂಬೈನ ಕಾಂದಿವಿಲಿಯಲ್ಲಿ ಕ್ಯಾನ್ಸರ್ ನಿಂದ ಬಳಲುತ್ತಿರುವ ಶ್ರೀನಿವಾಸ್ ದೇವಾಡಿಗರ ಮನೆಗೆ ತೆರಳಿ 40,000/- ಸಹಾಯ ಧನವನ್ನು ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಮುಂಬೈನ ಸೇವಾದಾರರುಗಳಾದ ಶ್ರೀ ಅಶೋಕ್ ದೇವಾಡಿಗ, ಪೋವಾಯಿ, ಪರಮೇಶ್ವರ್ ದೇವಾಡಿಗ, ನಾಯ್ಕ್ ನಕಟ್ಟೆ, ದಯಾನಂದ ದೇವಾಡಿಗ ನೆರೂಲ್, ವಿಠ್ಠಲ್ ದೇವಾಡಿಗ, ಅಂಧೇರಿ,ಗಣೇಶ್ ಎಸ್. ಬ್ರಹ್ಮಾವರ್ ಮತ್ತು ಸ್ಥಳೀಯರಾದ ಭಾಸ್ಕರ್ ದೇವಾಡಿಗರು ಮತ್ತು ವನಿತಾ ದೇವಾಡಿಗರು ಉಪಸ್ಥಿತರಿದ್ದರು. 170 ನೇ ಸೇವಾ ಕಾರ್ಯದ […]

You cannot copy content of this page