ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಿಶ್ವ ಕುಂದಾಪುರ ಕನ್ನಡ ಸಂಭ್ರಮ

ಕುಂದಾಪುರ:ಜ್ಞಾನ,ಮೌಲ್ಯ,ಶಿಸ್ತು-ಸಂಯಮದಿಂದ ಕೂಡಿದ ಕುಂದಾಪುರ ಕನ್ನಡ ಭಾಷೆಯು ಜನಪದ ಸೊಗಡಿನಿಂದ ಕೂಡಿದೆ ಜನರ ಜೀವನವು ಕುಂದಗನ್ನಡದೊಂದಿಗೆ ಸಮ್ಮಿಲನ ಗೊಂಡಿದೆ.ಅಬ್ಬಿ ಭಾಷೆ ಮಾತಾಡುಕೆ ಚೆಂದ ಅದನ್ನು ಮರೆತ್ರೆ ನಾವು ನಮ್ಮನ್ನ ಮರೆತಂತೆ ಎಂದು ಪ್ರೋ.ಎಂ ಬಾಲಕೃಷ್ಣ ಶೆಟ್ಟಿ ಹೇಳಿದರು.ಲಿಟ್ಲ್ ಸ್ಟಾರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದ ವಿಶ್ವ ಕುಂದಾಪ್ರ ದಿನಾಚರಣೆ ಕಾರ್ಯಕ್ರಮವನ್ನು ತಿರಿಗೆ ಭತ್ತವನ್ನು ತುಂಬುವ ಮೂಲಕ ಸಾಂಪ್ರದಾಯಿಕವಾಗಿ ಉದ್ಘಾಟಿಸಿ ಅವರು ಮಾತನಾಡಿದರು.ಹಾದಿ ಮೇಲೆ ಹೋಪರ್ ಹಾಡೆಂದು ಕಾಣ್ಬೇಡಿ.. ಹಾಡಲ್ಲ ನನ್ನ ಒಡಲೂರಿ.. ಎ೦ದು ಭಾಷೆಯ ಸೊಗಸನ್ನು ಜನಪಾದ ಹಾಡಿನ […]

ಚುಂಗಿಗುಡ್ಡೆ ಯೋಗೀಶ್ ಹೆಬ್ಬಾರ್

ಕುಂದಾಪುರ:ಬೈಂದೂರು ತಾಲೂಕಿನ ಮರವಂತೆ ಗ್ರಾಮದ ನಿವಾಸಿ ಹಕ್ಲಾಡಿ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಚುಂಗಿಗುಡ್ಡೆ ಯೋಗೀಶ್ ಹೆಬ್ಬಾರ್ ಅಲ್ಪಕಾಲದ ಅಸೌಖ್ಯದಿಂದ ಬುಧವಾರ ನಿಧನರಾದರು.ಅವರಿಗೆ ಪತ್ನಿ,ಪುತ್ರ,ಪುತ್ರಿ ಇದ್ದಾರೆ.

ಕೊಲ್ಲೂರಿಗೆ ಸರಕಾರಿ ಬಸ್ ಕಲ್ಪಿಸುವಂತೆ ಬೃಹತ್ ಪ್ರತಿಭಟನೆ

ಕುಂದಾಪುರ:ಕೊಲ್ಲೂರು -ಬೈಂದೂರು,ಕೊಲ್ಲೂರು -ಕುಂದಾಪುರ-ನಿಟ್ಟೂರಿಗೆ ಸ‌ರಕಾರಿ ಬಸ್ ಕಲ್ಪಿಸುವಂತೆ ಆಗ್ರಹಿಸಿ ಕೊಲ್ಲೂರು ಗ್ರಾಮ ಪಂಚಾಯಿತ್ ಎದುರು ಸ್ಥಳೀಯರು ಬೃಹತ್ ಪ್ರತಿಭಟನೆಯನ್ನು ನಡೆಸಿ ಮನವಿಯನ್ನು ನೀಡಿದರು. ಕಾರ್ಮಿಕ ಮುಖಂಡ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿ, ಗ್ರಾಮೀಣ ಪ್ರದೇಶವಾದಕೊಲ್ಲೂರು ಪ್ರೇಕ್ಷಣೀಯ ಸ್ಥಳವಾಗಿದೆ ರಾಜ್ಯದ ಮೂಲೆ ಮೂಲೆಗಳಿಂದ ದಿನಂಪ್ರತಿ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ ಆದರೆ ಕೊಲ್ಲೂರಿಗೆ ಸರ್ಕಾರಿ ಬಸ್ ಸೌಲಭ್ಯ ಇಲ್ಲದೆ,ಇಲ್ಲಿನ ಸ್ಥಳೀಯ ಮತ್ತು ಪ್ರವಾಸಿಗ ಮಹಿಳೆಯರು ಸರ್ಕಾರಿ ಬಸ್ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.ಖಾಸಗಿ ಎಕ್ಸ್ ಪ್ರೆಸ್ […]

You cannot copy content of this page