ಗಂಗೊಳ್ಳಿ:ಪೋಷಣ್ ಅಭಿಯಾನ,ಸೀಮಂತ ಕಾರ್ಯಕ್ರಮ
ಕುಂದಾಪುರ:ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆ ಉಡುಪಿ,ಶೀಶು ಅಬಿವೃದ್ಧಿ ಯೋಜನೆ ಕುಂದಾಪುರ ಮತ್ತು ಗ್ರಾಮ ಪಂಚಾಯತ್ ಗಂಗೊಳ್ಳಿ ವತಿಯಿಂದ ಪೋಷಣ್ ಅಭಿಯಾನ ಮತ್ತು ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮ ದಾಕುಹಿತ್ಲು ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.ಶಾಲಾ ಎಸ್ಡಿಎಂಸಿ ಅಧ್ಯಕ್ಷ ಬಿ.ಎಸ್ ರತ್ನಾಕರ ಖಾರ್ವಿ,ಉಪಾಧ್ಯಕ್ಷ ಸಂಗೀತಾ ಸಂತೋಷ್ ಕೋಡಿಕಾರ್,ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಜಯಂತಿ ಖಾರ್ವಿ,ಮುಖ್ಯ ಶಿಕ್ಷಕಿ ಚಂದ್ರಕಲಾ,ಸಹ ಶಿಕ್ಷಕಿ ಪ್ರೇಮಲತಾ,ಗೌರವ ಶಿಕ್ಷಕಿ ಪಲ್ಲವಿ,ಅಂಗನವಾಡಿ ಕಾರ್ಯಕರ್ತೆ ಫಿಲೋಮಿನಾ ಫೆರ್ನಾಂಡಿಸ್,ಸಹಾಯಕಿ ಗೌರಿ ಖಾರ್ವಿ,ಅಡುಗೆ ಸಹಾಯಕಿ ಗುಲಾಬಿ,ಮಕ್ಕಳ ಪೋಷಕರು ಉಪಸ್ಥಿತರಿದ್ದರು.