ಸರಕಾರದ ಮಟ್ಟದಲ್ಲಿ ಮಾತನಾಡಿ ಕಾನೂನನ್ನು ಸರಿಪಡಿಸುವ ಕೆಲಸವನ್ನು-ಮಾಡಲಾಗುವುದು ಕೆ.ಗೋಪಾಲ ಪೂಜಾರಿ

ಕುಂದಾಪುರ:1994 ರ ಕಾರ್ಯಾದೇಶವನ್ನು ಮಾರ್ಚ್ ತಿಂಗಳಿನಲ್ಲಿ ಆಗಿನ ಸರಕಾರ ರದ್ದು ಮಾಡಿರುವುದರಿಂದ ಇವೊಂದು ಸಮಸ್ಯೆ ಹುಟ್ಟಿಕೊಂಡಿದೆ.ಸರಕಾರದ ಮಟ್ಟದಲ್ಲಿ ಮಾತನಾಡಿ ಕಾನೂನನ್ನು ಸರಿಪಡಿಸುವ ಕೆಲಸವನ್ನು ಮಾಡಲಾಗುವುದು ಎಂದು ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರು ಆರೋಪಿಸಿದರು.ಕುಂದಾಪುರ ಮತ್ತು ಬೈಂದೂರು ತಾಲೂಕು ಲಾರಿ ಮತ್ತು ಟೆಂಪೋ ಚಾಲಕರ ಸಂಘದ ವತಿಯಿಂದ ಹೆಮ್ಮಾಡಿಯಲ್ಲಿ ನಡೆಯುತ್ತಿರುವ 3ನೇ ದಿನದ ಕಟ್ಟಡ ಸಾಮಾಗ್ರಿ ಸಾಗಾಟದ ವಾಹನಗಳ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಶುಕ್ರವಾರ ಭಾಗವಹಿಸಿ ಅವರು ಮಾತಾಡಿದರು.ಕಾನೂನು ಬಾಹಿರ ಚಟುವಟಕೆಗಳನ್ನು ನಡೆಸಲು ನಮ್ಮ ಸರಕಾರ […]

ಕಟ್‍ಬೇಲ್ತೂರು:ವಿದ್ಯುತ್ ಸ್ಪರ್ಶಿಸಿ ದಂತಿಗಳಿಬ್ಬರು ದಾರುಣ ಸಾವು

ಕುಂದಾಪುರ:ತುಂಡಾಗಿ ನೆಲಕ್ಕೆ ಬಿದ್ದ ವಿದ್ಯುತ್ ತಂತಿಯಿಂದ ಶಾಕ್ ತಗುಲಿ ದಂಪತಿಗಳಿಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ಕುಂದಾಪುರ ತಾಲೂಕಿನ ಕಟ್‍ಬೇಲ್ತೂರು ಗ್ರಾಮದ ಸುಳ್ಸೆ ಎಂಬಲ್ಲಿ ಶುಕ್ರವಾರ ನಡೆದಿದೆ.ಮಹಾಬಲ ದೇವಾಡಿಗ (55) ಅವರ ಪತ್ನಿ ಲಕ್ಷ್ಮೀ ದೇವಾಡಿಗ (47) ಸಾವನ್ನಪ್ಪಿದ ದುರ್ದೈವಿಗಳು.ಶುಕ್ರವಾರ ಮಧ್ಯಾಹ್ನ 3.30 ರ ಸುಮಾರಿಗೆ ಮಹಾಬಲ ದೇವಾಡಿಗ ಮತ್ತು ಅವರ ಪತ್ನಿ ಲಕ್ಷ್ಮೀ ದೇವಾಡಿಗ ಎನ್ನುವವರು ಕೆಲಸವನ್ನು ಮುಗಿಸಿಕೊಂಡು ತೆರಳುತ್ತಿರುವ ಸಂದರ್ಭ ಸುಳ್ಸೆ ಕರ್ಣಿಕರ ಮನೆ ಸಮೀಪ ಕಾಲು ದಾರಿಯಲ್ಲಿ ವಿದ್ಯುತ್ ಕಂಬದಿಂದ ಲೈನ್ ತುಂಡಾಗಿ ಕೇಳಕ್ಕೆ […]

ನಾವುಂದ:ಈದ್ ಮಿಲಾದ್ ಆಚರಣೆ

ಬೈಂದೂರು:ತಾಲೂಕಿನ ಮರವಂತೆ-ನಾವುಂದದಲ್ಲಿ ಮೊಹಿದ್ದೀನ್ ಜುಮ್ಮಾ ಮಸೀದಿಯಲ್ಲಿ ಈದ್ ಮಿಲಾದ್ ಹಬ್ಬ ಗುರುವಾರ ನಡೆಯಿತು.ಮುಸ್ಲಿಂ ಬಾಂಧವರು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಪಾದಯಾತ್ರೆ ನಡೆಸಿದರು.ಈ ಸಂದರ್ಭ ಮುಸ್ಲಿ ಸಮುದಾಯದ ಗುರುಗಳು,ಮುಖಂಡರುಗಳು ಉಪಸ್ಥಿತರಿದ್ದರು.

You cannot copy content of this page