ಗುಜ್ಜಾಡಿ:ಎಸ್‍ಡಿಎಂಸಿ ಸದಸ್ಯರಿಂದ ಬಿಸಿಯೂಟ ತಯಾರಿ

ಗುಜ್ಜಾಡಿ:ಎಸ್‍ಡಿಎಂಸಿ ಸದಸ್ಯರಿಂದ ಬಿಸಿಯೂಟ ತಯಾರಿ ಕುಂದಾಪುರ:ಶಾಲೆಗಳಲ್ಲಿ ಬಿಸಿ ಊಟವನ್ನು ತಯಾರು ಮಾಡುತ್ತಿರುವ ಅಡುಗೆ ಸಿಬ್ಬಂದಿಗಳು ಮುಷ್ಕರವನ್ನು ಕೈಗೊಂಡಿದ್ದರಿಂದ ಶಾಲೆಗೆ ಬಿಸಿಯೂಟ ನೌಕರರು ಗೈರಾಗಿದ್ದರ ಪರಿಣಾಮ ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಗುಜ್ಜಾಡಿ ಶಾಲೆಯ ಹಳೆ ವಿದ್ಯಾರ್ಥಿಗಳಾದ ಊಷ ಪೂಜಾರಿ,ಸುಕೇಶ್ ಹಾಗೂ ಎಸ್‍ಡಿಎಂಸಿ ಸದಸ್ಯರಾದ ಗಾಯಿತ್ರಿ ಕೊಡಂಚ,ಶಾಂತ ದೇವಾಡಿಗ,ತನುಜಾ,ಮಹೇಶ ಆಚಾರ್ಯ ಅವರು ಬುಧವಾರ ಬಿಸಿ ಊಟವನ್ನು ತಯಾರಿಸಿ ವಿದ್ಯಾರ್ಥಿಗಳಿಗೆ ಬಡಿಸಿದರು.ಎಸ್‍ಡಿಎಂಸಿ ಅಧ್ಯಕ್ಷ ನಾರಾಯಣ ಕೆ.ಗುಜ್ಜಾಡಿ ಮೇಲ್ವಿಚಾರಣೆಯನ್ನು ನೋಡಿಕೊಂಡರು.

ಕುಂದಾಪುರ:ಅಕಾಲಿಕ ಮಳೆಯಿಂದ ಭತ್ತದ ಬೆಳೆಗೆ ಸಂಕಷ್ಟ

ಕುಂದಾಪುರ:ಅಕಾಲಿಕವಾಗಿ ಸುರಿದ ಬಾರಿ ಮಳೆಗೆ ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಾಕೆರೆ,ನಾಡ,ತಾರಿಬೇರು,ಜಡ್ಡಾಡಿ,ಕಡಿಕೆ,ಕೋಣ್ಕಿ ಹಾಗೂ ಹೆಮ್ಮಾಡಿ ಭಾಗದಲ್ಲಿ ಕೃಷಿ ನಷ್ಟ ಉಂಟಾಗಿದೆ.ಜಾನುವಾರುಗಳ ಬೈಹುಲ್ಲು ಬೈಲಿನಲ್ಲಿ ಕೊಳೆಯುತ್ತಿದೆ.ಹವಾಮಾನ ವೈಪರಿತ್ಯದಿಂದಾಗಿ ಭಾನುವಾರ ಕುಂದಾಪುರ ಮತ್ತು ಬೈಂದೂರು ತಾಲೂಕಿನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಭತ್ತ ಬೆಳೆಗೆ ಸಂಕಷ್ಟ ಎದುರಾಗಿದ್ದು ಮಳೆ ಕಾರಣದಿಂದ ಸಮಯಕ್ಕೆ ಸರಿಯಾಗಿ ಕೊಯ್ಲು ಮಾಡದೆ ಫಸಲು ಭರಿತ ಬೆಳೆ ಬೈಲಿನಲ್ಲಿ ನಶೀಸುತ್ತಿದೆ.ಭತ್ತದ ಬೆಳೆಗೆ ಅವಶ್ಯಕವಾಗಿರುವ ಸಂದರ್ಭ ಮಳೆ ಕೈಕೊಟ್ಟಿದ್ದು ಕೊಯ್ಲು ಸಮಯದಲ್ಲಿ ಮಳೆ ಎಡಬಿಡದೆ ಸುರಿಯುತ್ತಿದೆ.ಕೊಯ್ಲು ಮಾಡಿದ […]

ಬಿ.ವೈ.ವಿಜಯೇಂದ್ರ ರಾಜ್ಯ ಬಿಜೆಪಿ ನೂತನ ಸಾರಥಿ ಆಗಿ ನೇಮಕ

ಬೆಂಗಳೂರು:ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ , ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ.ಬಿಜೆಪಿ ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿದ್ದ ಶಿಕಾರಿಪುರ ಶಾಸಕರಾದ ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಈ ಕ್ಷಣದಿಂದಲೇ ಜಾರಿಗೆ ಬರುವಂತೆ ರಾಜ್ಯ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.ರಾಜ್ಯಾಧ್ಯಕ್ಷರಾಗಿದ್ದ ನಳಿನ್ ಕುಮಾರ್ ಕಟೀಲ್ ಅವರ ಅವಧಿ ಕೊನೆ ಗೊಂಡು ಆರು ತಿಂಗಳ ಬಳಿಕ ಹಲವು ಲೆಕ್ಕಾಚಾರ […]

You cannot copy content of this page