ಮರವಂತೆ ಶ್ರೀರಾಮ ಮಂದಿರದಲ್ಲಿ ಕಳವಿಗೆ ವಿಫಲ ಯತ್ನ

ಕುಂದಾಪುರ:ಬೈಂದೂರು ತಾಲೂಕಿನ ಮರವಂತೆ ಶ್ರೀರಾಮ ಮಂದಿರದಲ್ಲಿ ಶುಕ್ರವಾರ ಬೆಳಗಿನ ಜಾವಾ ಕಳವಿಗೆ ಯತ್ನಿಸಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಸೆ.3 ರಂದು ಶುಕ್ರವಾರ ಬೆಳಗಿನ ಜಾವಾ 1.40 ರ ಸುಮಾರಿಗೆ ರಾಷ್ಷ್ರೀಯ ಹೆದ್ದಾರಿ 66 ರಲ್ಲಿ ಬೈಕ್‍ನಲ್ಲಿ ಬಂದಿಳಿದ ಇಬ್ಬರು ಕಳ್ಳರು ಮರವಂತೆ ಶ್ರೀರಾಮ ಮಂದಿರದ ಪ್ರಾಂಗಣಕ್ಕೆ ನುಗ್ಗಿದ್ದಾರೆ.ಹೆಲ್ಮೆಟ್ ಧರಿಸಿದ ವ್ಯಕ್ತಿಯೊರ್ವ ದೇವಸ್ಥಾನದ ಮುಖ್ಯ ದ್ವಾರದ ಬೀಗವನ್ನು ಮುರಿದು ಕಳವಿಗೆ ಯತ್ನಿಸಿದ್ದಾನೆ.ಕಬ್ಬಿಣದ ಬಾಗಿಲನ್ನು ಮುರಿದು ಒಳನುಗ್ಗಲು ಅಸಾಧ್ಯವೇನಿಸಿದಾಗ ಕಳ್ಳರಿಬ್ಬರೂ ಬೈಕ್‍ನಲ್ಲಿ ಪರಾರಿಯಾಗಿದ್ದಾರೆ. ಮರವಂತೆ ಶ್ರೀರಾಮ ಮಂದಿರದಲ್ಲಿ ಕಳವಿಗೆ ಯತ್ನಿಸಿ ವಿಫಲರಾಗಿದ್ದ […]

ಶ್ರೀಗುಹೇಶ್ವರ ದೇವಸ್ಥಾನದಲ್ಲಿ ಸಂಜೀವಿನಿ ಮೃತ್ಯುಂಜಯ ಹೋಮ,ಮುಷ್ಠಿಕಾಣಿಕೆ ಸಮರ್ಪಣೆ

ಕುಂದಾಪುರ:ತಾಲೂಕಿನ ಗುಜ್ಜಾಡಿ ಗ್ರಾಮದ ಕೊಡಪಾಡಿ ಶ್ರೀಗುಹೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಅಂಗವಾಗಿ ಹಮ್ಮಿಕೊಂಡಿದ್ದ ಅಷ್ಟಮಂಗಲ ಪ್ರಶ್ನಾ ಚಿಂತನಾ ವಿಮರ್ಶೆಯ ಪ್ರಕಾರ ಮೊದಲ ಹಂತದ ಪ್ರಾಯಶ್ಚಿತ ಭಾಗವಾಗಿ ಹಾಗೂ ಲೋಕ ಕಲ್ಯಾಣ ಮತ್ತು ರುದ್ರಕೋಪ ಶಮನಾರ್ಥವಾಗಿ ಸಂಜೀವಿನಿ ಮೃತ್ಯುಂಜಯ ಹೋಮ,ಗಣಹೋಮ,ಮುಷ್ಠಿಕಾಣಿಕೆ ಸಮರ್ಪಣೆ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶುಕ್ರವಾರ ನಡೆಯಿತು.ಶ್ರೀಗುಹೇಶ್ವರ ದೇವಾಲಯದ ತಂತ್ರಿಗಳಾಗಿ ನೇಮಕಗೊಂಡಿರುವ ವೇ.ಮೂ ಶ್ರೀಶ ಅಡಿಗ ಅವರಿಗೆ ಗ್ರಾಮಸ್ಥರ ಪರವಾಗಿ ವರಣೆಯನ್ನು ನೀಡಲಾಯಿತು.ಈ ಸಂದರ್ಭ ವ್ಯವಸ್ಥಾಪನಾ ಮತ್ತು ಕ್ಷೇತ್ರಾಭಿವೃದ್ಧಿ ಸಮಿತಿ ಅಧ್ಯಕ್ಷರು,ಪದಾಧಿಕಾರಿಗಳು,ಸದಸ್ಯರು,ಗ್ರಾಮಸ್ಥರು ಉಪಸ್ಥಿತರಿದ್ದರು.ಪ್ರತಿ ಸೋಮವಾರ ಗ್ರಾಮಸ್ಥರು ಹಾಗೂ […]

ಕೃಷಿಕ ಬಾಬು ಆಚಾರ್ಯಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಕುಂದಾಪುರ:ಸಾವಯವ ಗೊಬ್ಬರವನ್ನು ಬಳಕೆಮಾಡಿಕೊಂಡು ಅಡಿಕೆ,ತೆಂಗು,ಕಾಳು ಮೆಣಸು,ಭತ್ತ ಹಾಗೂ ಬಾಳೆ ಬೆಳೆಯನ್ನು ಬೆಳೆಯುತ್ತಿರುವ ಬೈಂದೂರು ತಾಲೂಕಿನ ಹೇರೂರು ಗ್ರಾಮದ ಮಡ್ಲಗೇರಿ ನಿವಾಸಿ ಪ್ರಗತಿಪರ ಕೃಷಿಕರಾದ ಬಾಬು ಆಚಾರ್ಯ ಅವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶ್ತಸಿ ದೊರೆತ್ತಿದೆ.

You cannot copy content of this page