ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬಗೆ ಸನ್ಮಾನ

ಹೆಮ್ಮಾಡಿ:ಕಿತ್ತಳೆ ಹಣ್ಣನ್ನು ಮಾರಿ ಸರಕಾರಿ ಶಾಲೆಯನ್ನು ಕಟ್ಟಿಸಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹರೇಕಳ ಹಾಜಬ್ಬ ಅವರನ್ನು ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜು ಹೆಮ್ಮಾಡಿಯಲ್ಲಿ ನಡೆದ ಜನತಾ ಆವಿಷ್ಕಾರ್ 2K23 ಉದ್ಘಾಟನಾ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ಕಾಲೇಜಿನ ಅಧ್ಯಕ್ಷರಾದ ಪ್ರಿನ್ಸಿಪಾಲ್ ಗಣೇಶ ಮೊಗವೀರ,ಮಾಧವ ಪೂಜಾರಿ,ಚಿತ್ರಾ ಕಾರಂತ,ಹರ್ಷವರ್ಧನ ಶೆಟ್ಟಿ,ತಿಮ್ಮಪ್ಪ ಮೊಗವೀರ,ಉದಯ ಕುಮಾರ್ ಹಟ್ಟಿಯಂಗಡಿ, ಕಾಲೇಜಿನ ವೈಸ್ ಪ್ರಿನ್ಸಿಪಾಲ್ ರಮೇಶ ಪೂಜಾರಿ ಉಪಸ್ಥಿತರಿದ್ದರು.

ಕಂಚುಗೋಡು ಶಾಲೆ:ಯೋಗ ತರಬೇತಿ ಶಿಬಿರ ಉದ್ಘಾಟನೆ

ಕುಂದಾಪುರ:ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಕಂಚುಗೋಡು ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಉಚಿತ ಯೋಗ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಮಂಗಳವಾರ ನಡೆಯಿತು.ಶಾಲಾ ಮುಖ್ಯೋಪಾಧ್ಯಾಯಿನಿ ಗಿರಿಜಾ.ಎಂ ಉದ್ಘಾಟಿಸಿದರು,ಯೋಗ ಗುರು ನಾರಾಯಣ ದೇವಾಡಿಗ,ಶಾಲಾ ಎಸ್‍ಡಿಎಂಸಿ ಸದಸ್ಯರಾದ ಭಾರತಿ,ಲೀಲಾವತಿ,ಅಂಗನವಾಡಿ ಕಾರ್ಯಕರ್ತೆ ರೇಣುಕಾ,ಸಹ ಶಿಕ್ಷಕರಾದ ನಾಗಮ್ಮ,ಹರ್ಷ,ಉಷಾ ಉಪಸ್ಥಿತರಿದ್ದರು.ನಿವೃತ್ತ ಮುಖ್ಯೋಪಾಧ್ಯಾಯರಾದ ಯೋಗ ಗುರು ನಾರಾಯಣ ದೇವಾಡಿ ಅವರು ಶಾಲಾ ವಿದ್ಯಾರ್ಥಿಗಳಿಗೆ ಹತ್ತು ದಿನಗಳ ಕಾಲ ಉಚಿತವಾಗಿ ಯೋಗ ತರಬೇತಿಯನ್ನು ನೀಡಲಿದ್ದಾರೆ.

ಗುಜ್ಜಾಡಿ:ಎಸ್‍ಡಿಎಂಸಿ ಸದಸ್ಯರಿಂದ ಬಿಸಿಯೂಟ ತಯಾರಿ

ಗುಜ್ಜಾಡಿ:ಎಸ್‍ಡಿಎಂಸಿ ಸದಸ್ಯರಿಂದ ಬಿಸಿಯೂಟ ತಯಾರಿ ಕುಂದಾಪುರ:ಶಾಲೆಗಳಲ್ಲಿ ಬಿಸಿ ಊಟವನ್ನು ತಯಾರು ಮಾಡುತ್ತಿರುವ ಅಡುಗೆ ಸಿಬ್ಬಂದಿಗಳು ಮುಷ್ಕರವನ್ನು ಕೈಗೊಂಡಿದ್ದರಿಂದ ಶಾಲೆಗೆ ಬಿಸಿಯೂಟ ನೌಕರರು ಗೈರಾಗಿದ್ದರ ಪರಿಣಾಮ ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಗುಜ್ಜಾಡಿ ಶಾಲೆಯ ಹಳೆ ವಿದ್ಯಾರ್ಥಿಗಳಾದ ಊಷ ಪೂಜಾರಿ,ಸುಕೇಶ್ ಹಾಗೂ ಎಸ್‍ಡಿಎಂಸಿ ಸದಸ್ಯರಾದ ಗಾಯಿತ್ರಿ ಕೊಡಂಚ,ಶಾಂತ ದೇವಾಡಿಗ,ತನುಜಾ,ಮಹೇಶ ಆಚಾರ್ಯ ಅವರು ಬುಧವಾರ ಬಿಸಿ ಊಟವನ್ನು ತಯಾರಿಸಿ ವಿದ್ಯಾರ್ಥಿಗಳಿಗೆ ಬಡಿಸಿದರು.ಎಸ್‍ಡಿಎಂಸಿ ಅಧ್ಯಕ್ಷ ನಾರಾಯಣ ಕೆ.ಗುಜ್ಜಾಡಿ ಮೇಲ್ವಿಚಾರಣೆಯನ್ನು ನೋಡಿಕೊಂಡರು.

You cannot copy content of this page