ಶಂಕರನಾಗ್ ರಿಕ್ಷಾ ನಿಲ್ದಾಣ ಉದ್ಘಾಟನೆ

ಕುಂದಾಪುರ:ಗರ್ಭೀಣಿ ಸ್ತ್ರೀಯರನ್ನು,ಅನಾರೋಗ್ಯ ಪೀಡಿತರನ್ನು ಕ್ಲಪ್ತ ಸಮಯದಲ್ಲಿ ಆಸ್ಪತ್ರೆಗೆ ದಾಖಲು ಮಾಡಿ ತುರ್ತು ಚಿಕಿತ್ಸೆ ಕೊಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿರುವ ಆಟೋ ಚಾಲಕರು ಆಪ್ತರಕ್ಷಕರಿದ್ದಂತೆ.ಸೌಲಭ್ಯಗಳು ಎಷ್ಟೆ ಮುಂದುವರೆದಿದ್ದರೂ ಜನರಿಗೆ ನೇರವಾಗಿ,ತ್ವರಿತವಾಗಿ ಮತ್ತು ರೀಯಾತಿ ದರದಲ್ಲಿ ಸಿಗುವುದು ಆಟೋ ರಿಕ್ಷಾ ಸೇವೆ ಆಗಿದೆ.ಹಗಲು ರಾತ್ರಿ ಎನ್ನದೆ ಜನರ ಕಷ್ಟ ಕಾರ್ಪಣ್ಯಗಳಿಗೆ ಸದಾ ಸ್ಪಂದಿಸುವ ರಿಕ್ಷಾ ಚಾಲಕ ಮತ್ತು ಮಾಲೀಕರ ಸೇವೆ ಶ್ಲಾಘನೀಯವಾದದು ಎಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಿದ […]

ಬಿಜೆಪಿಗೆ ಮತ ಹಾಕುವವರು ರಾಕ್ಷಸರು:ಕಾಂಗ್ರೆಸ್ ಮುಖಂಡ ಸುರ್ಜೇವಾಲಾ ವಿವಾದಾತ್ಮಕ ಹೇಳಿಕೆ

ಬೆಂಗಳೂರು:ಹರಿಯಾಣದ ಕೈದಾಲ್‍ನಲ್ಲಿ ಭಾನುವಾರ ನಡೆದ ಜನಕ್ರೋಶ ಸಭೆಯಲ್ಲಿ ಮಾತನಾಡಿದ ಕಾಂಗ್ರಸ್ ಪಕ್ಷದ ಮುಖಂಡ ರಣದೀಪ್ ಸುರ್ಜೇವಾಲಾ ಬಿಜೆಪಿ ನಾಯಕರು,ಬಿಜೆಪಿಗೆ ಮತ ಹಾಕುವವರು ರಾಕ್ಷಸರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ಬಿಜೆಪಿಗೆ ಮತ ಹಾಕುವವರು ಮತ್ತು ಬಿಜೆಪಿ ಬೆಂಬಲಿಗರು ಅವರು ರಾಕ್ಷಸ ಸ್ವಭಾವದವರು.ನಾನು ಅವರನ್ನು ಇಂದು ಮಹಾಭಾರತದ ಈ ಭೂಮಿಯಿಂದ ಶಪಿಸುತ್ತೇನೆ,ಮಹಾಭಾರತ ನಡೆದ ಸ್ಥಳದಿಂದ ಇದನ್ನು ಹೇಳುತ್ತಿದ್ದೇನೆ ಎಂದಿದ್ದಾರೆ.ಸುರ್ಜೇವಾಲ ಅವರ ಈ ವಿವಾದಾತ್ಮಕ ವಿಡಿಯೋ ವೈರಲ್ ಆಗಿದೆ.

ಸಿದ್ದಾಪುರದ ಸೂರ,ಗಿರಿಜಾ ಪೂಜಾರಿ ದಂಪತಿಗೆ ಮೋದಿ ಆಹ್ವಾನ

ಕುಂದಾಪುರ:ಉದ್ಯೋಗ ಖಾತರಿ ಯೋಜನೆಯಡಿ ಅಮೃತ ಸರೋವರ ಯೋಜನೆಯಲ್ಲಿ ನೂರು ದಿನಕ್ಕೂ ಮಿಕ್ಕಿ ಕೆಲಸವನ್ನು ಮಾಡಿದ ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಕೆಳಪೇಟೆ ಸೂರ ಪೂಜಾರಿ ಮತ್ತು ಗಿರಿಜಾ ಪೂಜಾರಿ ದಂಪತಿಗಳಿಗೆ ಆ.15 ರಂದು ದೆಹಲಿಯಲ್ಲಿ ನಡೆಯುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಹ್ವಾನವನ್ನು ನೀಡಿದ್ದಾರೆ.ದಂಪತಿಗಳು ನಾಳೆ ನಡೆಯುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

You cannot copy content of this page