ಸೇನಾಪುರ:ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಆಗ್ರಹಿಸಿ ಪ್ರತಿಭಟನೆ

ಕುಂದಾಪುರ:ದಿನದಿಂದ ದಿನಕ್ಕೆ ರೈಲು ಪ್ರಯಾಣ ಎನ್ನುವುದು ಜನರಿಗೆ ಬಹಳಷ್ಟು ಅಗತ್ಯವಾಗಿರುವ ಮೂಲ ಸೌಕರ್ಯಗಳಲ್ಲಿ ಒಂದಾಗಿದೆ.ಕರಾವಳಿ ಭಾಗದ ಜನರ ಜೀವನದ ಕೊಂಡಿ ಆಗಿರುವ ಕೊಂಕಣ ರೈಲು ಸೇವೆ ಎನ್ನುವುದು ಸ್ಥಳೀಯ ಜನರಿಗೆ ಮರಿಚಿಕೆ ಆಗಿದ್ದು ಸೇನಾಪುರ ರೈಲು ನಿಲ್ದಾಣದಲ್ಲಿ ಮುಂಬಯಿ ಮತ್ತು ಬೆಂಗಳೂರು ಎಕ್ಸ್‌ಪ್ರೆಸ್ ರೈಲು ನಿಲುಗಡೆ ಮಾಡಲು ಸಂಸದರ ಜತೆ ಸೇರಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.ಕೊಂಕಣ ರೈಲ್ವೆ ಹೋರಾಟ ಸಮಿತಿ ಸೇನಾಪುರ ವತಿಯಿಂದ ಭಾನುವಾರ ಸೇನಾಪುರ […]

ಮರವಂತೆ:ಮೆಸ್ಕಾಂ ಸಿಬ್ಬಂದಿಗಳಿಗೆ ಸನ್ಮಾನ

ಬೈಂದೂರು:ಮರವಂತೆ ಗ್ರಾಮ ಪಂಚಾಯತ್ ವ್ಯಾಪ್ತಿ ಪ್ರದೇಶಗಳಲ್ಲಿ ವಿದ್ಯುತ್ ಬಳಕೆದಾರರ ಸಮಸ್ಯೆಗಳಿಗೆ ಹಗಲು,ರಾತ್ರಿ ಎನ್ನದೇ ಸ್ಪಂದಿಸಿ ಉತ್ತಮವಾದ ಸೇವೆಯನ್ನು ನೀಡುವುದರ ಜತಗೆ ಜನ ಪ್ರೀತಿ ಗಳಿಸಿರುವ ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳಾದ ಲೈನ್‍ಮ್ಯಾನ್ ಮಂಜುನಾಥ ದೇವಾಡಿಗ ಮತ್ತು ಅಲಗೌಡ ಪಾಟೀಲ ಅವರನ್ನು ಸಾಧಾನಾ ಸಮುದಾಯ ವೇದಿಕೆ ಮರವಂತೆ ವತಿಯಿಂದ ಶನಿವಾರ ನಡೆದ ಸಂಘದ ಮಾಸಿಕ ಸಭೆಯಲ್ಲಿ ಸನ್ಮಾನಿಸಲಾಯಿತು.ಸಾಧನಾ ಅಧ್ಯಕ್ಷ ಜೇಕ್ಸನ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು,ನಾಗೇಶ್ ಎಸ್.ರಾವ್,ಕೋಶಾಧಿಕಾರಿ ಎಂ.ಸುಬ್ರಹ್ಮಣ್ಯ ಅವಭೃತ,ಕಾರ್ಯದರ್ಶಿ ಗಜೇಂದ್ರ ಖಾರ್ವಿ,ದೇವಿದಾಸ್ ಶ್ಯಾನುಭಾಗ್ ಉಪಸ್ಥಿತರಿದ್ದರು.

ದೇವಾಡಿಗರ ಸಂಘ ಉಪ್ಪುಂದ ಅಧ್ಯಕ್ಷರಾಗಿ ರವೀಂದ್ರ ಎಚ್ ದೇವಾಡಿಗ ಅವಿರೋಧ ಆಯ್ಕೆ

ಬೈಂದೂರು:ದೇವಾಡಿಗರ ಸಂಘ ಉಪ್ಪುಂದ ಅದರ ನೂತನ ಅಧ್ಯಕ್ಷರಾಗಿ ರವಿಂದ್ರ ಎಚ್ ದೇವಾಡಿಗ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ರವೀಂದ್ರ ಎಚ್ ದೇವಾಡಿಗ ಅವರು ಪ್ರಸ್ತುತ ಉಡುಪಿ ಜಿಲ್ಲಾ ವಿಶೇಷ ಶಿಕ್ಷಕರ ಸಂಘದ ಅಧ್ಯಕ್ಷರಾಗಿ,ನಾಯ್ಕನಕಟ್ಟೆ ಸಂವೇಧನಾ ಟ್ರಸ್ಟ್ ನಾ ಕಾರ್ಯದರ್ಶಿಯಾಗಿ,ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರ ಸಂಘದ ನಿರ್ದೇಶಕರಾಗಿ,ವಾಗ್ಜ್ಯೋತಿ ಶ್ರವಣ ದೋಷ ಮಕ್ಕಳ ವಸತಿ ಶಾಲೆ ಅಂಪಾರು ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಬೈಂದೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದ್ದರು.

You cannot copy content of this page