ಹೆಮ್ಮಾಡಿ:ಸುನೀತಾ ಪೂಜಾರಿಗೆ ಸನ್ಮಾನ

ಕುಂದಾಪುರ:ಪಂಚಾಬ್‍ನ ಬಿ.ಎಸ್.ಎಫ್ ಕ್ಯಾಂಪ್‍ನಲ್ಲಿ 11 ತಿಂಗಳುಗಳ ಕಾಲ ತರಬೇತಿ ಮುಗಿಸಿ ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯಲ್ಲಿನ ಭಾರತ ಬಾಂಗ್ಲಾ ಗಡಿಯಲ್ಲಿ ಕರ್ತವ್ಯಕ್ಕೆ ನಿಯೋಜನೆ ಗೊಂಡು ಹುಟ್ಟೂರಿಗೆ ಆಗಮಿಸಿರುವ ಸುನೀತಾ ಪೂಜಾರಿ ಅವರನ್ನು ಹಟ್ಟಿಯಂಗಡಿ ವಲಯದ ಹೆಮ್ಮಾಡಿ ಗ್ರಾಮದ ಮುವತ್ತು ಮುಡಿ ಅಂಗನವಾಡಿ ಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೇಬಿ,ವಲಯ ಮೇಲ್ವಿಚಾರಕಿ ಸುಮಾ.ಎಂ,ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಪ್ರಭಾವತಿ,ಅಂಗನವಾಡಿ ಕಾರ್ಯಕರ್ತೆ ವಿಜಯಲಕ್ಷ್ಮೀ,ಸಹಾಯಕಿ ಸುಶೀಲ,ಹೆಮ್ಮಾಡಿ ಅಂಗನವಾಡಿ ಕಾರ್ಯಕರ್ತೆ ಪಾರ್ವತಿ,ಮಕ್ಕಳ ಪೆÇೀಷಕರು […]

ಹೊಸಾಡು:ಸಹಕಾರಿ ಸಪ್ತಾಹ,ಸನ್ಮಾನ ಕಾರ್ಯಕ್ರಮ

ಕುಂದಾಪುರ:70ನೇ ಸಹಕಾರಿ ಸಪ್ತಾಹದ ಅಂಗವಾಗಿ ಶ್ರೀಗಣೇಶ್ ಕ್ರೆಡಿಟ್ ಸೊಸೈಟಿ ಹೊಸಾಡು-ಮುಳ್ಳಿಕಟ್ಟೆ ವತಿಯಿಂದ ಸಹಕಾರಿ ಸಪ್ತಾಹ ಹಾಗೂ ಸನ್ಮಾನ ಕಾರ್ಯಕ್ರಮ ಸಂಘದ ಪ್ರಧಾನ ಕಚೇರಿಯಲ್ಲಿ ನಡೆಯಿತು.ಸಂಘದ ಅಧ್ಯಕ್ಷ ಮುರಳೀಧರ ಐತಾಳ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಉಪಾಧ್ಯಕ್ಷ ರವೀಶ್ ಹೊಳ್ಳ,ಸಂಘದ ನಿರ್ದೇಶಕರಾದ ಚಂದ್ರ ನಾಯ್ಕ,ಮಂಜುನಾಥ,ಗೋಪಾಲಕೃಷ್ಣ ಐತಾಳ್,ಶಾಂತರಾಮ ಭಟ್,ಸುಮಾವತಿ,ಸರಸ್ವತಿ,ಗೋಪಾಲ ಆಚಾರ್ಯ,ರಾಘವೇಂದ್ರ ಶೆಟ್ಟಿ ಹಾಗೂ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.ನಿವೃತ್ತ ಸಹಕಾರಿ ಉದ್ಯೋಗಿ ಗೋಪಾಲ ಪಿಂಚಿಕಾನ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.ಸಂಘದ ಸಲಹೆಗಾರ ವಿಶ್ವಂಭರ ಐತಾಳ್ ಸ್ವಾಗತಿಸಿದರು.ಲೆಕ್ಕಿಗ ಶ್ರೀಕರ ಐತಾಳ್ ಸಹಕರಿಸಿದರು.ಸಿಇಒ ಅಶ್ವಿನಿ […]

ಮುಳ್ಳಿಕಟ್ಟೆ ಸರ್ಕಲ್ ನಲ್ಲಿ ಅಪಘಾತ:ಕಾರ್ ಜಖಂ

ಕುಂದಾಪುರ:ಮುಳ್ಳಿಕಟ್ಟೆ ಯಿಂದ ಮರವಂತೆ ಕಡೆಗೆ ಸಾಗುತ್ತಿದ್ದ ಕಾರ್‍ಗೆ ಬೈಕ್ ಅಡ್ಡ ಬಂದ ಪರಿಣಾಮ ನಿಯಂತ್ರಣ ತಪ್ಪಿದ ಕಾರ್ ವಿದ್ಯುತ್ ಕಂಬಕ್ಕೆ ಗುದ್ದಿ,ಡಿವೈಡರ್ ದಾಟಿ ಪಕ್ಕದ ರೋಡಿನಲ್ಲಿ ಬೈಂದೂರು ಕಡೆಯಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಇನೋವಾ ಕಾರಿಗೆ ಡಿಕ್ಕಿ ಹೊಡೆದಿದೆ.ಎರಡು ಕಾರಿನ ಮುಂಭಾಗ ಜಖಂ ಗೊಂಡಿದ್ದು ಚಾಲಕ ಮತ್ತು ಪ್ರಯಾಣಿಕರಿಬ್ಬರೂ ಪಾರಾದ ಘಟನೆ ಮಂಗಳವಾರ ನಡೆದಿದೆ.ಗಂಗೊಳ್ಳಿ ಠಾಣೆಯ ಸಿಬ್ಬಂದಿಗಳು ಘಟನೆಯ ಸ್ಥಳಕ್ಕೆ ಆಗಮಿಸಿ ಸ್ಥಳ ಮಹಜರು ನಡೆಸಿದರು.ಅವೈಜ್ಞಾನಿಕತೆಯಿಂದ ಕೂಡಿದ ಮುಳ್ಳಿಕಟ್ಟೆ ಸರ್ಕಲ್‍ನಲ್ಲಿ ಆಗಿಂದಾಗೆ ಅಪಘಾತಗಳು ಸಂಭವಿಸುತ್ತಲೇ ಇದೆ,ಪ್ರಯಾಣಿಕರ ಹಿತ […]

You cannot copy content of this page