ಹೊಸಾಡು:ಸಹಕಾರಿ ಸಪ್ತಾಹ,ಸನ್ಮಾನ ಕಾರ್ಯಕ್ರಮ

ಕುಂದಾಪುರ:70ನೇ ಸಹಕಾರಿ ಸಪ್ತಾಹದ ಅಂಗವಾಗಿ ಶ್ರೀಗಣೇಶ್ ಕ್ರೆಡಿಟ್ ಸೊಸೈಟಿ ಹೊಸಾಡು-ಮುಳ್ಳಿಕಟ್ಟೆ ವತಿಯಿಂದ ಸಹಕಾರಿ ಸಪ್ತಾಹ ಹಾಗೂ ಸನ್ಮಾನ ಕಾರ್ಯಕ್ರಮ ಸಂಘದ ಪ್ರಧಾನ ಕಚೇರಿಯಲ್ಲಿ ನಡೆಯಿತು.ಸಂಘದ ಅಧ್ಯಕ್ಷ ಮುರಳೀಧರ ಐತಾಳ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಉಪಾಧ್ಯಕ್ಷ ರವೀಶ್ ಹೊಳ್ಳ,ಸಂಘದ ನಿರ್ದೇಶಕರಾದ ಚಂದ್ರ ನಾಯ್ಕ,ಮಂಜುನಾಥ,ಗೋಪಾಲಕೃಷ್ಣ ಐತಾಳ್,ಶಾಂತರಾಮ ಭಟ್,ಸುಮಾವತಿ,ಸರಸ್ವತಿ,ಗೋಪಾಲ ಆಚಾರ್ಯ,ರಾಘವೇಂದ್ರ ಶೆಟ್ಟಿ ಹಾಗೂ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.ನಿವೃತ್ತ ಸಹಕಾರಿ ಉದ್ಯೋಗಿ ಗೋಪಾಲ ಪಿಂಚಿಕಾನ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.ಸಂಘದ ಸಲಹೆಗಾರ ವಿಶ್ವಂಭರ ಐತಾಳ್ ಸ್ವಾಗತಿಸಿದರು.ಲೆಕ್ಕಿಗ ಶ್ರೀಕರ ಐತಾಳ್ ಸಹಕರಿಸಿದರು.ಸಿಇಒ ಅಶ್ವಿನಿ […]

ಮುಳ್ಳಿಕಟ್ಟೆ ಸರ್ಕಲ್ ನಲ್ಲಿ ಅಪಘಾತ:ಕಾರ್ ಜಖಂ

ಕುಂದಾಪುರ:ಮುಳ್ಳಿಕಟ್ಟೆ ಯಿಂದ ಮರವಂತೆ ಕಡೆಗೆ ಸಾಗುತ್ತಿದ್ದ ಕಾರ್‍ಗೆ ಬೈಕ್ ಅಡ್ಡ ಬಂದ ಪರಿಣಾಮ ನಿಯಂತ್ರಣ ತಪ್ಪಿದ ಕಾರ್ ವಿದ್ಯುತ್ ಕಂಬಕ್ಕೆ ಗುದ್ದಿ,ಡಿವೈಡರ್ ದಾಟಿ ಪಕ್ಕದ ರೋಡಿನಲ್ಲಿ ಬೈಂದೂರು ಕಡೆಯಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಇನೋವಾ ಕಾರಿಗೆ ಡಿಕ್ಕಿ ಹೊಡೆದಿದೆ.ಎರಡು ಕಾರಿನ ಮುಂಭಾಗ ಜಖಂ ಗೊಂಡಿದ್ದು ಚಾಲಕ ಮತ್ತು ಪ್ರಯಾಣಿಕರಿಬ್ಬರೂ ಪಾರಾದ ಘಟನೆ ಮಂಗಳವಾರ ನಡೆದಿದೆ.ಗಂಗೊಳ್ಳಿ ಠಾಣೆಯ ಸಿಬ್ಬಂದಿಗಳು ಘಟನೆಯ ಸ್ಥಳಕ್ಕೆ ಆಗಮಿಸಿ ಸ್ಥಳ ಮಹಜರು ನಡೆಸಿದರು.ಅವೈಜ್ಞಾನಿಕತೆಯಿಂದ ಕೂಡಿದ ಮುಳ್ಳಿಕಟ್ಟೆ ಸರ್ಕಲ್‍ನಲ್ಲಿ ಆಗಿಂದಾಗೆ ಅಪಘಾತಗಳು ಸಂಭವಿಸುತ್ತಲೇ ಇದೆ,ಪ್ರಯಾಣಿಕರ ಹಿತ […]

ಗಂಗೊಳ್ಳಿ:ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ

ಕುಂದಾಪುರ:ಕೊಸೆಸಾಂವ್ ಅಮ್ಮನವರ ದೇವಾಲಯ ಗಂಗೊಳ್ಳಿ ಮತ್ತು ಸ್ತ್ರೀ ಆಯೋಗ ನೇತೃತ್ವದಲ್ಲಿ ದಂತ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಸಂತ ಜೋಸೆಫ್ ವಾಜಾರ ಸಂಭಾಗಣ ಗಂಗೊಳ್ಳಿಯಲ್ಲಿ ಮಂಗಳವಾರ ನಡೆಯಿತು.ಕೊಸೆಸಾಂವ್ ಅಮ್ಮನವರ ಚರ್ಚಿನ ಧರ್ಮಗುರು ವಂದನಿಯ ಫಾದರ್ ಧಾಮಸ್ ರೋಶನ್ ಡಿಸೋಜ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.ಸಂಘಟನೆಯ ಸಚೇತಕಿ ಸಿಸ್ಟರ್ ಕೊರೋನ,ಕುಂದಾಪುರ ವಲಯ ಭಾವನಾ ಮಹಿಳಾ ಒಕ್ಕೂಟ ಅಧ್ಯಕ್ಷೆ ಪ್ರೀತಿ ಫೆರ್ನಾಂಡಿಸ್,ವಲಯ ಪ್ರೇರಕಿ ಸಿಂತಿಯಾ ರೊಡಿಗ್ರಸ್,ಸಂಯೋಜಕಿ ರೆನಿಟಾ ಬಾರ್ನೆಸ್,ಆಶಾ ಫೆಸಿಲಿ,ಶಿಕ್ಷಕಿ ಕಲ್ಪನಾ,ಆಶಾ ಕಾರ್ಯಕರ್ತೆ ರೇಣುಕಾ ಉಪಸ್ಥಿತರಿದ್ದರು.ಬೈಂದೂರು ಸಮುದಾಯ ಆರೋಗ್ಯ […]

You cannot copy content of this page