ಪತ್ನಿ ಛಾಯಾ ಪ್ರತಿಕೃತಿ ಜತೆ ಪತಿ 25ರ ಮದುವೆ ಸಂಭ್ರಮಾಚರಣೆ

ಕುಂದಾಪುರ:ಒಂದು ತಿಂಗಳ ಹಿಂದೆ ಅಕಾಲಿಕವಾಗಿ ನಿಧನರಾಗಿದ್ದ ಪತ್ನಿ ಸವಿ ನೆನಪಿನೊಂದಿಗೆ ಪತಿ 25 ರ ಸಂಭ್ರಮವನ್ನು ಆಚರಿಸಿಕೊಂಡು ಮಧುರ ದಾಂಪತ್ಯದ ಪ್ರೇಮದ ಪರಿಯನ್ನು ಜಗತ್ತಿಗೆ ಸಾರಿದ್ದಾರೆ.ಕುಂದಾಪುರ ಸಪ್ತಗಿರಿ ಕೋ-ಅಪರೇಟಿವ್ ಸೊಸೈಟಿ ಸಂಸ್ಥಾಪಕ ಸದ್ಗುರು ಚಂದ್ರಶೇಖರ್ ಅವರು ಇಂತಹದ್ದೊಂದು ಸವಿನಯ ಸಂಪ್ರದಾಯಕ್ಕೆ ಮುನ್ನುಡಿ ಬರೆದವರು.ವಿವಾಹ ಮಹೋತ್ಸವದ ಬೆಳ್ಳಿಹಬ್ಬ ಆಚರಣೆ ಹೀಗೆ ಇರಬೇಕು ಎನ್ನುವ ಪತ್ನಿ ಸುಮಾ ಅವರ ಅಭಿಲಾಷೆಯನ್ನು ಅವರ ಅನುಪಸ್ಥಿತಿಯಲ್ಲಿ ಪತಿ ಈಡೇರಿಕೆಮಾಡಿದ್ದಾರೆ.ಪತ್ನಿ ಸುಮಾ ಕಳೆದ ತಿಂಗಳು ಅನಾರೋಗ್ಯದಿಂದ ಮೃತಪಟ್ಟಿದ್ದರು.ಬಡಾಕೆರೆ ಲಕ್ಷ್ಮೀಜನಾರ್ದನ ಸಭಾಭವನದಲ್ಲಿ ಚಂದ್ರಶೇಖರ್ ಅವರು ಅಗಲಿದ […]

ಬಂಟ್ವಾಡಿ ಶಾಲೆಯಲ್ಲಿ,ಅಧಿ ಪತ್ರ ಚಲನಚಿತ್ರ ಚಿತ್ರೀಕರಣ

ಕುಂದಾಪುರ:ಬೈಂದೂರು ವಲಯದ ನ್ಯೂ ಅನುದಾನಿತ ಬಂಟ್ವಾಡಿ ಶಾಲೆಯಲ್ಲಿ ಅಧಿಪತ್ರ ಎಂಬ ಚಲನ ಚಿತ್ರದ ಚಿತ್ರೀಕರಣ ಗುರುವಾರ ನಡೆಯಿತು.ಬಿಗ್‍ಬಾಸ್ 2022 ವಿಜೇತರಾದ ರೂಪೇಶ್ ಶೆಟ್ಟಿ ಮತ್ತು ಚಿತ್ರ ತಂಡದ ಸದಸ್ಯರು ಜತೆಯಲ್ಲಿದ್ದರು.ಈ ಸಂದರ್ಭ ಶಾಲೆಯ ಎಸ್‍ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು.

ಕಾರ್ ಡಿಕ್ಕಿ:ಬೈಕ್ ಸವಾರ ಸಾವು

ಕುಂದಾಪುರ:ತಾಲೂಕಿನ ಹೆಮ್ಮಾಡಿ ಹಾಲು ಡೈರಿ ಡಿವೈಡರ್ ಬಳಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಜಯದುರ್ಗಾ ಬಸ್ ಡ್ರೈವರ್ ಮಹಾಬಲ ಅವರು ಮೃತಪಟ್ಟ ಘಟನೆ ಗುರುವಾರ ನಡೆದಿದೆ.ಬಸ್ ಡ್ರೈವರ್ ಕೆಲಸವನ್ನು ನಿರ್ವಹಿಸಿ ಮಹಾಬಲ ಅವರು ಬೈಕ್‍ನಲ್ಲಿ ಹೆಮ್ಮಾಡಿಯಿಂದ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಹೆಮ್ಮಾಡಿ ಹಾಲು ಡೈರಿ ಡಿವೈಡರ್ ಬಳಿ ತೋಪ್ಲು ಸಂಪರ್ಕ ರಸ್ತೆಗೆ ಟರ್ನ್ ತೆಗೆದುಕೊಳ್ಳುತ್ತಿದ್ದಾಗ ಮುಳ್ಳಿಕಟ್ಟೆ ಕಡೆಯಿಂದ ಕುಂದಾಪುರಕ್ಕೆ ಕಡೆಗೆ ವೇಗವಾಗಿ ಸಾಗುತ್ತಿದ್ದ ಡಸ್ಟರ್ ಕಾರು ಡಿಕ್ಕಿ ಹೊಡೆತ ಪರಿಣಾಮ ಸ್ಥಳದಲ್ಲೆ ಮೃತಪಟ್ಟಿದ್ದಾರೆ.

You cannot copy content of this page