ಶಿಕ್ಷಕ ಸಂತೋಷ್ ಖಾರ್ವಿಗೆ ಬೀಳ್ಕೊಡುಗೆ

ಕುಂದಾಪುರ:ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಹೊಸಾಡು ಶಾಲೆಯಲ್ಲಿ ಸುದೀರ್ಘ ಹತ್ತು ವರ್ಷಗಳ ಕಾಲ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ ಬೇರೆ ಶಾಲೆಗೆ ವರ್ಗಾವಣೆಗೊಂಡಿರುವ ಶಿಕ್ಷಕ ಸಂತೋಷ್.ಎನ್ ಖಾರ್ವಿ ಅವರನ್ನು ಶಾಲೆಯ ಎಸ್.ಡಿ.ಎಂ.ಸಿ ಮತ್ತು ಶಿಕ್ಷಕವೃಂದವರಿಂದ ಹೊಸಾಡು ಶಾಲೆಯಲ್ಲಿ ಶುಕ್ರವಾರ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.ಶಾಲಾ ಎಸ್‍ಡಿಎಂಸಿ ಅಧ್ಯಕ್ಷೆ ರೇಖಾ ಅಧ್ಯಕ್ಷತೆ ಅಧ್ಯಕ್ಷತೆ ವಹಿಸಿದ್ದರು,ಉಪಾಧ್ಯಕ್ಷ ಹುಸೇನಪ್ಪ,ನಿವೃತ್ತ ಶಿಕ್ಷಕರಾದ ಸದಾಶಿವ ಶೆಟ್ಟಿ ಮತ್ತು ತೇಜಪ್ಪ ಶೆಟ್ಟಿ,ಅಧ್ಯಾಪಕಿ ನಿರ್ಮಲ ಉಪಸ್ಥಿತರಿದ್ದರು.ಶಾಲಾ ಮುಖ್ಯ ಶಿಕ್ಷಕ ರಾಜೇಶ್ ಪಡುಕೋಣೆ ಸ್ವಾಗತಿಸಿದರು.ಸಹ ಶಿಕ್ಷಕರಾದ […]

ಮರವಂತೆ:ಡಿವೈಡರ್ ಏರಿದ ಬಸ್,ವಿದ್ಯುತ್ ಕಂಬಕ್ಕೆ ಡಿಕ್ಕಿ

ಕುಂದಾಪುರ:ಕೇರಳದಿಂದ ದಾಂಡೇಲಿ ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಟೂರಿಸ್ಟ್ ಬಸ್ ಬೈಂದೂರು ತಾಲೂಕಿನ ಮರವಂತೆ ಕೇಶವ ಬೊಬ್ಬರ್ಯ ಬಸ್ ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುರುವಾರ ಬೆಳಗಿನ ಜಾವಾ 5.30 ರ ಸುಮಾರಿಗೆ ನಿಯಂತ್ರಣ ಕಳೆದು ಕೊಂಡು ಡಿವೈಡರ್ ಮಧ್ಯ ಇರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.ಎರಡು ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದು,ಬಸ್ಸಿನ ಮುಂಭಾಗ ಜಖಂ ಗೊಂಡಿದೆ.ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.ಅಪಘಾತದ ರಭಸಕ್ಕೆ ಬುಡ ಸಮೇತ ಕಿತ್ತು ಬಂದಿದ್ದ ವಿದ್ಯುತ್ ಕಂಬ ಬಸ್ಸಿನ ಮುಂಭಾಗದಲ್ಲಿ ಸಿಲುಕಿ ಕೊಂಡಿತ್ತು.

ಶ್ರೀಪದ್ಮಾವತಿ ದೇವಿ ಕೃಪಾಪೋಷಿತ ಯಕ್ಷಗಾನ ಮಂಡಳಿ,ಶ್ರೀಕ್ಷೇತ್ರ ಬೋಳಂಬಳ್ಳಿ

ಕುಂದಾಪುರ:ಬೈಂದೂರು ತಾಲೂಕಿನ ಪ್ರಸಿದ್ದ ಕಾಲ್ತೋಡು ಬೋಳಂಬಳ್ಳಿ ಶ್ರೀಪದ್ಮಾವತಿ ದೇವಿ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀಧರ್ಮರಾಜ ಜೈನ್ ಬೋಳಂಬಳ್ಳಿ ಅವರ ನೇತೃತ್ವದಲ್ಲಿ ಶ್ರೀ ಪದ್ಮಾವತಿ ದೇವಿ ಕೃಪಾಪೆÇೀಷಿತ ಯಕ್ಷಗಾನ ಮಂಡಳಿ ಶ್ರೀಕ್ಷೇತ್ರ ಬೋಳಂಬಳ್ಳಿ ವತಿಯಿಂದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.ಪ್ರದರ್ಶನಗೊಳ್ಳುವ ಪ್ರಸಂಗಗಳು-ಕಾವ್ಯ ತರಂಗಿಣಿ,ಕುಲದೈವ ಪಂಜುರ್ಲಿ,ಉಮಲೀಲೆ,ಭರಣಿ ನಕ್ಷತ್ರ,ಜೀವನ ಯಾತ್ರೆ ಸೇರಿದಂತೆ ಇನ್ನಿತರ ಜನಪ್ರಿಯ ಪ್ರಸಂಗಗಳು ಮೇಳದ ವತಿಯಿಂದ ಪ್ರದರ್ಶನಗೊಳ್ಳಲಿದೆ.ಕಲಾಭಿಮಾನಿಗಳು ಶ್ರೀಬೋಳಂಬಳ್ಳಿ ಮೇಳವನ್ನು ಪ್ರೋತ್ಸಾಹಿಸಬೇಕೆಂದು ಕ್ಷೇತ್ರದ ಧರ್ಮದರ್ಶಿಗಳಾದ ಧರ್ಮರಾಜ ಜೈನ್ ಕೇಳಿಕೊಂಡಿದ್ದಾರೆ

You cannot copy content of this page