ಹೆಮ್ಮಾಡಿ ಶಾಲೆ ವಾರ್ಷಿಕೋತ್ಸವ ಕಾರ್ಯಕ್ರಮ

ಕುಂದಾಪುರ:ಹಳ್ಳಿ ಜನರು ಶಿಕ್ಷಣಕ್ಕೆ ಒತ್ತು ನೀಡಿದ್ದರಿಂದಲೇ ದೇಶ ಅಭಿವೃದ್ದಿ ಪಥದತ್ತ ಸಾಗಲು ಸಹಕಾರಿ ಆಗಿದೆ.ಶಿಕ್ಷಣದಿಂದ ಬಡತನವನ್ನು ಹೊಗಲಾಡಿಸ ಬಹುದೆಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.ಕುಂದಾಪುರ ತಾಲೂಕಿನ ಬೈಂದೂರು ವಲಯದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಹೆಮ್ಮಾಡಿ ಶಾಲೆಯಲ್ಲಿ ಗುರುವಾರ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ,ವಿದ್ಯಾಭ್ಯಾಸದ ಜತೆಗೆ ಮಕ್ಕಳಿಗೆ ಸಂಸ್ಕಾರಯುತವಾದ ಶಿಕ್ಷಣವನ್ನು ನೀಡುವಲ್ಲಿ ಪೋಷಕರು ಹೆಚ್ಚಿನ ಗಮನವನ್ನು ಹರಿಸಬೇಕಾಗಿದೆ.ಮಕ್ಕಳ ಭವಿಷ್ಯವನ್ನು ನಿರೂಪಿಸುವಲ್ಲಿ ಶಿಕ್ಷಕರ ಪಾತ್ರದ […]

ಹೆಮ್ಮಾಡಿ:ನಿವೃತ್ತ ಶಿಕ್ಷಕರಿಗೆ ಗುರುವಂದನೆ ಸಲ್ಲಿಕೆ

ಕುಂದಾಪುರ:ಕರ್ತವ್ಯಪಾಲನೆ ಎನ್ನುವುದು ಉಸಿರು ಇರುವ ತನಕ ನಮ್ಮನ್ನು ಸದಾ ಎಚ್ಚರಗೊಳ್ಳುವಂತೆ ಮಾಡುತ್ತದೆ,ನಾವು ಮಾಡುವ ಸಾಧನೆಗಳು ಮಾತನಾಡುವಂತೆ ಇರಬೇಕು ವಿನಹ,ಮಾತುಗಳೇ ಸಾಧನೆ ಆಗಬಾರದೆಂದು ಹಿರಿಯ ನಿವೃತ್ತ ಶಿಕ್ಷಕ ರವೀಂದ್ರನಾಥ ಶೆಟ್ಟಿ ಹೇಳಿದರು.ಬೈಂದೂರು ವಲಯದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಹೆಮ್ಮಾಡಿ ಶಾಲೆಯಲ್ಲಿ ಗುರುವಾರ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಶಿಷ್ಯವರ್ಗದವರಿಂದ ಗುರುವಂದನೆಯನ್ನು ಸ್ವೀಕರಿಸಿ ಅವರು ಮಾತನಾಡಿದರು.ಗುರುವಂದನೆ ಕಾರ್ಯಕ್ರಮದ ಅಂಗವಾಗಿ ನಿವೃತ್ತ ಶಿಕ್ಷರಾದ ಹೆಚ್.ಮುತ್ತಯ್ಯ ಶೆಟ್ಟಿ,ಚಂದ್ರಶೇಖರ ಶೆಟ್ಟಿ,ಶಿವರಾಮ ಶೆಟ್ಟಿ,ಮರಿಯಾ ಮುಗ್ದಲಿನಾ ಕ್ರಾಸ್ತಾ,ಕೆ.ರವೀಂದ್ರನಾಥ ಶೆಟ್ಟಿ,ರಘುರಾಮ್ ನಾಯಕ್,ಎಂ.ವೆಂಕ ಹಾಂಡ,ಜಸಿಂತ್ ಜೂಡಿತ್ ಪಾಯ್ಸ್,ಭಾಸ್ಕರ ಶೆಟ್ಟಿ,ಸಾದಮಿನಿ ಚಂದ್ರಾವತಿ,ಸುಬ್ರಹ್ಮಣ್ಯ […]

ಹಕ್ಲಾಡಿ ಶಾಲೆಗೆ,ಧನಸಹಾಯ ವಿತರಣೆ

ಕುಂದಾಪುರ:ತಾಲೂಕಿನ ಬೈಂದೂರು ವಲಯದ ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಹಕ್ಲಾಡಿ ಶಾಲೆಯ ಅಭಿವೃದ್ಧಿಗೆ ಲಯನ್ಸ್ ಕ್ಲಬ್ ಹಕ್ಲಾಡಿ ಚೆನ್ನಕೇಶವ ವತಿಯಿಂದ 75,000.ರೂ ಧನಸಹಾಯವನ್ನು ಕ್ಲಬ್ಬಿನ ಅಧ್ಯಕ್ಷ ಗಣಪಯ್ಯ ಶೆಟ್ಟಿ ಹಾಗೂ ಪದಾಧಿಕಾರಿಗಳು ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಮತ್ತು ಶಾಲೆಯ ಮುಖ್ಯೋಪಾಧ್ಯಾಯರಿಗೆ ಚೆಕ್ ರೂಪದಲ್ಲಿ ಬುಧವಾರ ನಡೆದ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಹಸ್ತಾಂತರ ಮಾಡಿದರು.ಈ ಸಂದರ್ಭ ಅತಿಥಿಗಳು ಉಪಸ್ಥಿತರಿದ್ದರು.

You cannot copy content of this page