ಉಪ್ಪುಂದ ದೋಣಿ ದುರಂತ:ಶಾಸಕ ಗಂಟಿಹೊಳೆ ಭೇಟಿ

Share

ಬೈಂದೂರು:ಉಪ್ಪುಂದ ಕರ್ಕಿಕಳಿ ಎಂಬಲ್ಲಿ ಸೋಮವಾರ ಸಂಭವಿಸಿದ ದೋಣಿ ದುರಂತ ಘಟನಾ ಸ್ಥಳಕ್ಕೆ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರು ಮಂಗಳವಾರ ಭೇಟಿ ನೀಡಿ,ಮೀನುಗಾರರ ಜತೆ ಮಾತುಕತೆ ನಡೆಸಿದರು.
ಉಪ್ಪುಂದದಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ ಉಪ್ಪುಂದ ಕರ್ಕಿಕಳಿ ದೊಡ್ಡಕೊಂಬಿನ ಮನೆ ನಾಗೇಶ್ (29) ಮೃತ ಪಟ್ಟಿದ್ದಾರೆ,ಕರ್ಕಿಕಳಿ ಗಂಜೇರನ ಮನೆ ಸತೀಶ (30) ಎನ್ನುವ ಮೀನುಗಾರ ಯುವಕ ಸಮುದ್ರದಲ್ಲಿ ನಾಪತ್ತೆ ಆಗಿದ್ದಾರೆ.ನಾಪತ್ತೆಯಾಗಿದ್ದ ಮೀನುಗಾರನಿಗಾಗಿ ಹುಡುಕಾಟ ಮುಂದುವರೆದಿದೆ.ಸಚಿನ್ ಎನ್ನುವವರ ಮಾಲೀಕತ್ವದ ಮರ್ಲುಚಿಕ್ಕು ಎನ್ನುವ ಹೆಸರಿನ ದೋಣಿ ಮುಳುಗಿದ್ದು ಸಂಪೂರ್ಣ ಹಾನಿ ಆಗಿದೆ.ಉಪ್ಪುಂದ,ಅಳ್ವೆಕೋಡಿ,ಕೋಡೇರಿ ಭಾಗದಲ್ಲಿ ಇಂತಹ ಘಟನೆಗಳು ಪದೆ ಪದೆ ಮರುಕಳಿಸುತ್ತಾ ಇದ್ದರೂ ಬ್ರೇಕ್ ವಾಟರ್,ಬಂದರು ಅಭಿವೃದ್ಧಿ ಪಡಿಸುವಲ್ಲಿ ಸರಕಾರಗಳು ಆಸಕ್ತಿ ತೋರಿಸುತ್ತಿಲ್ಲ ಎಂದು ಮೀನುಗಾರರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.ಜುಲೈ ತಿಂಗಳಿನಲ್ಲಿ ಕುಂದಾಪುರ ಮತ್ತು ಬೈಂದೂರು ತಾಲೂಕಿನ ಪ್ರದೇಶಗಳಲ್ಲಿ ಸಂಭವಿಸಿದ ಜಲ ದುರಂತದಲ್ಲಿ ಹಲವಾರು ಜನರು ಸಾವನ್ನಪ್ಪಿದ್ದಾರೆ.

(ಉಪ್ಪುಂದದಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ ಉಪ್ಪುಂದ ಕರ್ಕಿಕಳಿ ದೊಡ್ಡಕೊಂಬಿನ ಮನೆ ನಾಗೇಶ್ (29) ಮೃತ ಪಟ್ಟಿದ್ದಾರೆ,ಕರ್ಕಿಕಳಿ ಗಂಜೇರನ ಮನೆ ಸತೀಶ (30) ಎನ್ನುವ ಮೀನುಗಾರ ಯುವಕ ಸಮುದ್ರದಲ್ಲಿ ನಾಪತ್ತೆ ಆಗಿದ್ದಾರೆ)

Advertisement

Share

Leave a comment

Your email address will not be published. Required fields are marked *

You cannot copy content of this page