ಪರಿಯಾಳ ಸಮಾಜ ಸಭೆ,ಧನಸಹಾಯ ವಿತರಣೆ
ಕುಂದಾಪುರ:ತಾಲೂಕು ಪರಿಯಾಳ ಸಮಾಜದ ಸಭೆ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್ ಸಾಲಿಯನ್ ತ್ರಾಸಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಗೌರವಾಧ್ಯಕ್ಷ ಸುಜಯ್ ಸುವರ್ಣ ಕುಂಭಾಸಿ,ಮಹಾಸಭಾ ಕಾರ್ಯದರ್ಶಿ ಸಂದೀಪ್ ಸಾಲಿಯನ್ ಬ್ರಹ್ಮಾವರ,ಮಹಿಳಾ ಸಂಘದ ಅಧ್ಯಕ್ಷೆ ಸುಜಾತ ಸಾಲಿಯಾನ್ ತ್ರಾಸಿ,ತಾಲೂಕು ಕಾರ್ಯದರ್ಶಿ ಪ್ರಸನ್ನ ಸಾಲಿಯಾನ್ ಕುಂದಾಪುರ,ಉಪಾಧ್ಯಕ್ಷ ಸುರೇಶ್ ಸುವರ್ಣ ನಾವುಂದ,ಸಮಾಜದ ಹಿರಿಯರಾದ ಗಣಪ ಸುವರ್ಣ ಕೋಟೇಶ್ವರ,ಜಿಲ್ಲಾ ಮಾಜಿ ಅಧ್ಯಕ್ಷ ಸದಾಶಿವ್ ಬಂಗೇರ ಕುರ್ಕಾಲು ಉಪಸ್ಥಿತರಿದ್ದರು.ಬೈಕ್ ಅಪಘಾತದಲ್ಲಿ ಮೂಳೆ ಮುರಿತದಿಂದಾಗಿ ಚಿಕಿತ್ಸೆ ಪಡೆಯುತ್ತಿರುವ ವಿಕ್ರಂ ಸುವರ್ಣ ಮರವಂತೆ ಅವರಿಗೆ ವೈದ್ಯಕೀಯ ಧನಸಹಾಯ ನೀಡಲಾಯಿತು.