ಅಂಬಾ ಪ್ರೀಮಿಯರ್ ಲೀಗ್,ರಾಘು ಟ್ರೋಫಿ ಉದ್ಘಾಟನೆ

Share

ಕುಂದಾಪುರ:ವಿದ್ಯದ ಜತೆಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ನಮ್ಮ ಜೀವನ ಹಸನಾಗಲಿದೆ ಭವಿಷ್ಯವನ್ನು ಉನ್ನತೀಕರಣಗೊಳಿಸುವಲ್ಲಿ ಕ್ರೀಡೆ ಒಳ್ಳೆ ರೀತಿಯಾದ ಮಾರ್ಗದರ್ಶಿ ಸೂತ್ರವನ್ನು ಒದಗಿಸಿಕೊಡುತ್ತೆ ಎಂದು ಉದ್ಯಮಿ ಚಿತ್ತರಂಜನ್ ಹೆಗ್ಡೆ ಹರ್ಕೂರು ಹೇಳಿದರು.
ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆಯಲ್ಲಿ ಶನಿವಾರ ನಡೆದ 28ನೇ ವರ್ಷದ ಅಂಬಾ ಪ್ರೀಯರ್ ಲೀಗ್ ರಾಘು ಟ್ರೋಫಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಕ್ಲಾಡಿ ಗ್ರಾ.ಪಂ ಮಾಜಿ ಸದಸ್ಯ ಸತೀಶ್ ಶೆಟ್ಟಿ ಯಳೂರು ಮಾತನಾಡಿ,ಕ್ರಿಕೆಟ್ ಎನ್ನುವುದು ಕೇವಲ ಪಂದ್ಯಾಟಕ್ಕೆ ಮಾತ್ರ ಸೀಮಿತವಾಗಿರಿಸದೆ ಅಂಬಾ ಕ್ರಿಕೆಟರ್ಸ್ ತಂಡ ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಸಹಕಾರವನ್ನು ನೀಡುತ್ತ ಬಂದಿದೆ ಎಂದು ಶ್ಲಾಘೀಸಿದರು.
ಮಂಜಯ್ಯ ಶೆಟ್ಟಿ ಪಾತ್ರಿಗಳು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ರಘುರಾಮ ಶೆಟ್ಟಿ,ಅಜಿತ್,ಅಮರ ಶೆಟ್ಟಿ,ರಾಘವೇಂದ್ರ ಶೆಟ್ಟಿ,ಸಂತೋಷ್ ಶೆಟ್ಟಿ ಹಣಿನಮಕ್ಕಿ,ಸತೀಶ್ ದೇವಾಡಿಗ,ಜೀವನ ಶೆಟ್ಟಿ,ಸುತನ ಶೆಟ್ಟಿ ಉಪಸ್ಥಿತರಿದ್ದರು.ವಿಘ್ನೇಶ ಸ್ವಾಗತಿಸಿದರು.ಅಜಿತ್ ವಂದಿಸಿದರು.

Advertisement

Share

Leave a comment

Your email address will not be published. Required fields are marked *

You cannot copy content of this page