ಸಂಚಲನ ಹೊಸಾಡು ವತಿಯಿಂದ ಕ್ಷಯ ರೋಗಿಗಳಿಗೆ ಕಿಟ್ ಕೊಡುಗೆ
ಕುಂದಾಪುರ:ಹೊಸಾಡು ಗ್ರಾಮ ಪಂಚಾಯತ್ ಹಾಗೂ ಸಂಚಲನ ಹೊಸಾಡು,ಪ್ರಾಥಮಿಕ ಆರೋಗ್ಯ ಕೇಂದ್ರ ಮರವಂತೆ,ಕ್ಷೇಮ ಕೇಂದ್ರ ಹೊಸಾಡು ವತಿಯಿಂದ ಹೊಸಾಡು ಗ್ರಾಮ ಪಂಚಾಯತ್ನಲ್ಲಿ ಶನಿವಾರ ನಡೆದ ಕ್ಷಯ ರೋಗ ಮಾಹಿತಿ ಮತ್ತು ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಸಂಚಲನ ಹೊಸಾಡು ವತಿಯಿಂದ ಕ್ಷಯ ರೋಗಿಗಳಿಗೆ ಕಿಟ್ನ್ನು ಕೊಡುಗೆ ಆಗಿ ನೀಡಲಾಯಿತು.
ಪಿಡಿಒ ಪಾರ್ವತಿ,ಸಂಚಲ ಹೊಸಾಡು ಸದಸ್ಯರಾದ ಪ್ರದೀಪ್ ಆಚಾರ್ಯ,ರಾಘವೇಂದ್ರ ಶೆಟ್ಟಿ,ಪ್ರದೀಪ್ ಬಿಲ್ಲವ,ಆಶಾ ಕಾರ್ಯಕರ್ತೆಯರಾದ ಪ್ರೇಮಾ,ಯಶೋಧ ಅರಾಟೆ,ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.ಸಮುದಾಯ ಆರೋಗ್ಯಾಧಿಕಾರಿ ಪ್ರವೀಣ್ ಕುಮಾರ್ ಸ್ವಾಗತಿಸಿ,ವಂದಿಸಿದರು.ಹೊಸಾಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕ್ಷಯ ರೋಗಳಿಗೆ ಸಂಚಲನ ಹೊಸಾಡು ವತಿಯಿಂದ ಪೌಷ್ಟಿಕ ಆಹಾರವನ್ನು 8 ತಿಂಗಳ ಅವಧಿ ವರೆಗೆ ನೀಡಲಿದೆ.