ವಾರ್ಷಿಕ ಮಹಾಸಭೆ,ಆರೋಗ್ಯ ನಿಧಿ ವಿತರಣೆ

Share

ಕುಂದಾಪುರ:ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಗಳ ಪ್ರತಿಷ್ಠಿತ ಕ್ಲಬ್‍ಗಳಲ್ಲಿ ಒಂದಾದ ಕುಂದಾಪುರ ತಾಲೂಕು ಎಡ್ವರ್ಡ್ ಮೆಮೋರಿಯಲ್ ಕ್ಲಬ್‍ನ ಹಾಗೂ ರೀಡಿಂಗ್ ರೂಮ್ ಸೊಸೈಟಿ ಕುಂದಾಪುರ ಅದರ 95ನೇ ವಾರ್ಷಿಕ ಮಹಾಸಭೆಯಲ್ಲಿ ಬಡ ಕುಟುಂಬದ ಸದಸ್ಯರ ಅನಾರೋಗ್ಯ ಪೀಡಿತರಿಗೆ ಆರೋಗ್ಯ ನಿಧಿ ಯೋಜನೆಯಡಿ ಧನಸಾಹಯವನ್ನು ಕ್ಲಬ್ಬಿನ ಅಧ್ಯಕ್ಷ ಚಿತ್ತರಂಜನ್ ಹೆಗ್ಡೆ ಹರ್ಕೂರು ಅವರು ವಿತರಿಸಿದರು.ಕ್ಲಬ್ಬಿನ ಸರ್ವ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕ್ಲಬ್ಬಿನ ಕಾರ್ಯದರ್ಶಿ ಕಾಳಾವರ ಉದಯ ಶೆಟ್ಟಿ ಲೆಕ್ಕಪತ್ರ ಮಂಡನೆ ಮಾಡಿದರು.ನಿವೃತ್ತ ಮುಖ್ಯೋಪಾಧ್ಯಾಯರಾದ ವೀರಣ್ಣ ಶೆಟ್ಟಿ ನಿರೂಪಿಸಿದರು.ಎಡ್ವರ್ಡ್ ಮೆಮೋರಿಯಲ್ ಕ್ಲಬ್ ಹಾಗೂ ರೀಡಿಂಗ್ ರೂಮ್ ಸೊಸೈಟಿ ಕುಂದಾಪುರ ವತಿಯಿಂದ ಸುಮಾರು 11 ಜನರಿಗೆ ತಲಾ 10,000.ರೂ ಚೆಕನ್ನು ವಿತರಣೆ ಮಾಡಲಾಯಿತು.

Advertisement

Share

Leave a comment

Your email address will not be published. Required fields are marked *

You cannot copy content of this page