ಗಂಗೊಳ್ಳಿ:ಸಾಕ್ಷರತೆ ವಿಚಾರ ಸಂಕಿರಣ ಕಾರ್ಯಕ್ರಮ

Share

ಕುಂದಾಪುರ:ರೋಟರಿ ಕ್ಲಬ್ ಗಂಗೊಳ್ಳಿ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ಸಾಕ್ಷರತೆ ಕುರಿತು ವಿಶೇಷ ವಿಚಾರ ಸಂಕಿರಣ ಕಾರ್ಯಕ್ರಮ ಗಂಗೊಳ್ಳಿ ಎಸ್.ವಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ನಾಗೇಂದ್ರ ಪೈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಹಾಯಕ ರಾಜ್ಯಪಾಲ ಆರ್‍ಟಿಎನ್ ಪಿಎಚ್‍ಎಫ್ ಡಾ.ಸಂದೀಪ ಶೆಟ್ಟಿ ಉದ್ಘಾಟಿಸಿದರು.ಝೋನಲ್ ಲೆಫ್ಟಿನೆಂಟ್ ಆರ್‍ಟಿಎನ್ ಪ್ರದೀಪ್ ಯಡಿಯಾಲ್ ಶುಭಹಾರೈಸಿದರು.ವಲಯ ಸಂಯೋಜಕ ನಾರಾಯಣ್ ಇ ನಾಯ್ಕ್ ಸಾಕ್ಷರತೆಯ ಮಹತ್ವದ ಕುರಿತು ಮಾಹಿತಿಯನ್ನು ನೀಡಿದರು.ಶಿವಕುಮಾರ್ ಆಲಗೋಡು ಅವರು ಜೀವನದ ಮೌಲ್ಯಗಳು ಮತ್ತು ನೈತಿಕತೆ ಬಗ್ಗೆ ಮಾತನಾಡಿದರು.ಕ್ಲಬ್ಬಿನ ಅಧ್ಯಕ್ಷ ನಾಗೇಂದ್ರ ಪೈ ಸ್ವಾಗತಿಸಿದರು.ಕಾರ್ಯದರ್ಶಿ ಕೃಷ್ಣ ಪೂಜಾರಿ ನಿರೂಪಿಸಿ,ವಂದಿಸಿದರು.ವಿವಿಧ ಕಾಲೇಜುಗಳಿಂದ ಸುಮಾರು ನೂರಕ್ಕೂ ಅಧಿಕ ವಿದ್ಯಾರ್ಥಿಗಳು ವಿಚಾರಣ ಸಂಕಿರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement

Share

Leave a comment

Your email address will not be published. Required fields are marked *

You cannot copy content of this page