ಶಂಕರ ಜಯಂತಿ ಕಾರ್ಯಕ್ರಮ

Share

ಕುಂದಾಪುರ:ಕರ್ನಾಟಕ ಸರಕಾರ ಹಿಂದೂ ಧಾರ್ಮಿಕ ದತ್ತಿ ಇಲಾಖೆ,ಕುಂದೇಶ್ವರ ದೇವಸ್ಥಾನ ಕುಂದಾಪುರ ಮತ್ತು ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಅವರ ಸಹಭಾಗಿತ್ವದಲ್ಲಿ ಶಂಕರ ಜಯಂತಿ ಕಾರ್ಯಕ್ರಮ ಕುಂದೇಶ್ವರ ದೇವಸ್ಥಾನದಲ್ಲಿ ಭಾನುವಾರ ನಡೆಯಿತು.
ವಿದ್ವಾನ್ ಮಾಧವ ಮಂಜರು ಉಳ್ಳೂರು ಅಧ್ಯಕ್ಷತೆಯನ್ನು ವಹಿಸಿದ್ದರು.ವೇದಮೂರ್ತಿ ಲೋಕೇಶ್ ಅಡಿಗ ಪ್ರಾಂತೀಯ ಧರ್ಮ ಅಧಿಕಾರಿಗಳು ಶ್ರೀ ಶಾರದಾ ಪೀಠಂ ಶೃಂಗೇರಿ ಮತ್ತು ನಾಗ ಪಾತ್ರಿಗಳು ನಾವುಂದ ಬಡಾಕೆರೆ ಉಪಸ್ಥಿತರಿದ್ದರು.
ವೆಂಕಟ್ರಮಣರಾವ್,ಕುಮಾರಿ ಸನ್ನಿಧಿ ಅಡಿಗ ಬಡಾಕೆರೆ ಮತ್ತು ಕುಮಾರಿ ಸಾನಿಧ್ಯ ಮೈಯ ಉಪ್ಪುಂದ ಅವರು ಶಂಕರಾಚಾರ್ಯರ ಬಗ್ಗೆ ವಿವರಿಸಿದರು.ವಿದ್ವಾನ್ ಮಾಧವ ಅಡಿಗ ಉಳ್ಳೂರು ಆವರು ಶಂಕರಾಚಾರ್ಯರ ಬಗ್ಗೆ ಹಾಗೂ ಆತ್ಮ ಪರಮಾತ್ಮ ಮತ್ತು ಬ್ರಹ್ಮ ಸತ್ಯ ಜಗನ್ಮಿತ್ಯ ವಿಷಯಗಳ ಬಗ್ಗೆ ವಿಸ್ತಾರವಾಗಿ ಮಾಹಿತಿ ನೀಡಿದರು.
ವೇದ ಮೂರ್ತಿ ವಿಘ್ನೇಶ
ಮಂಜರು ಪೂಜೆಯನ್ನು ನೆರವೇರಿಸಿದರು.
ವಿದ್ವಾನ್ ಮಹೇಶ್ ಹೆಗಡೆ ದಾಂಡೇಲಿ ನಿರೂಪಿಸಿದರು.
ಲಕ್ಷ್ಮೀಶ ಅಡಿಗ ಸ್ವಾಗತಿಸಿದರು. ನಾಗೇಂದ್ರ ಅಡಿಗ ವಂದಿಸಿದರು.ಶ್ರುತಿಲಯ ಸಂಗೀತ ಶಾಲೆಯ ವಿದುಷಿ ನಳಿನಿರಾವ್ ಮತ್ತು ಸಂಗಡಿಗರಿಂದ ಹಾಗೂ ಬಡಾಕೆರೆ ಶ್ರೀ ಶಾರದಾ ಸದ್ವಿದ್ಯಾ ಕುಮಾರಿ ಶಿಬಿರದ ವಿದ್ಯಾರ್ಥಿನಿಯವರಿಂದ ಶಂಕರಾಚಾರ್ಯರ ಕೃತಿ ಪಠಣದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.

Advertisement

Share

Leave a comment

Your email address will not be published. Required fields are marked *

You cannot copy content of this page