ಮರವಂತೆ:ನೃಸಿಂಹ ಜಯಂತಿ,ವಿಷ್ಣು ಪಾರಾಯಣ
ಬೈಂದೂರು:ತಾಲೂಕಿನ ಮರವಂತೆ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿ ನೃಸಿಂಹ ಜಯಂತಿ ಮತ್ತು ವಿಷ್ಣು ಪಾರಾಯಣ,ಪ್ರಸಾದ ಭೋಜನ ವಿತರಣೆ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮಂಗಳವಾರ ನಡೆಯಿತು.ಸಹಸ್ರಾರು ಭಕ್ತರು ದೇವಾಲಕ್ಕೆ ಆಗಮಿಸಿ ಶ್ರೀದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸತೀಶ ಎಂ ನಾಯಕ್ ಮತು ಸದಸ್ಯರು,ಅರ್ಚಕರು,ಉಪಾದಿವಂತರು,ಗ್ರಾಮಸ್ಥರು ಉಪಸ್ಥಿತರಿದ್ದರು.































































































































































































































































































































































































































































































































































































































































































































































































































































































































































































































































































































































































































































































































































































































































































