ಹೊಸಾಡು:ಪದಾಧಿಕಾರಿಗಳ ಆಯ್ಕೆ,ವಾರ್ಷಿಕ ಮಹಾಸಭೆ

Share

ಕುಂದಾಪುರ:ತಾಲೂಕಿನ ಹೊಸಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಸೌಪರ್ಣಿಕಾ ಸಂಜೀವಿನಿ ಒಕ್ಕೂಟ ಹಾಗೂ ಗ್ರಾಮ ಮಟ್ಟದ ವಾರ್ಡ್ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಹಾಗೂ ವಾರ್ಷಿಕ ಮಹಾಸಭೆ ಕಾರ್ಯಕ್ರಮ ಹೊಸಾಡು ಪಂಚಾಯತ್ ಸಭಾಭವನದಲ್ಲಿ ಬುಧವಾರ ನಡೆಯಿತು.
ಸೌಪರ್ಣಿಕಾ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಂದನಾ ಖಾರ್ವಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು,ತಾಲೂಕು ಒಕ್ಕೂಟ ಅಧ್ಯಕ್ಷೆ ವಿಜಯ ಗಾಣಿಗ,ತಾಲೂಕು ಕಾರ್ಯಕ್ರಮದ ವ್ಯವಸ್ಥಾಪಕ ಯತೀಶ್,ಪಿಡಿಒ ಪಾರ್ವತಿ,ಹೊಸಾಡು ಆಡಳಿತಾಧಿಕಾರಿ ರಘುರಾಮ ಶೆಟ್ಟಿ,ವಾರ್ಡ್ ಅಧ್ಯಕ್ಷೆ ರೇಖಾ,ಒಕ್ಕೂಟದ ಕಾರ್ಯದರ್ಶಿ ಪಲ್ಲವಿ,ಆಶಾ ಕಾರ್ಯಕರ್ತೆಯರಾದ ಪ್ರೇಮಾ ಬಳೆಗಾರ್,ಪ್ರೇಮಾ ಭಂಡಾರಿ ಉಪಸ್ಥಿತರಿದ್ದರು.ಒಕ್ಕೂಟದ ಅಧ್ಯಕ್ಷರಾಗಿ ಯಶೋಧ ವಳನಾಡು,ಉಪಾಧ್ಯಕ್ಷೆ ಸುಮಿತ್ರಾ,ಕಾರ್ಯದರ್ಶಿ ವೀಣಾ ನಾಯಕ್,ಜೊತೆ ಕಾರ್ಯದರ್ಶಿ ಮೀನಾ,ಕೋಶಾಧಿಕಾರಿಯಾಗಿ ಜಯಶ್ರೀ ದೇವಾಡಿಗ ಆಯ್ಕೆಯಾದರು.ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು.ಸವಿತಾ ಸ್ವಾಗತಿಸಿದರು.ಚೈತ್ರಾ ವಾರ್ಷಿಕ ವರದಿ ಮಂಡಿಸಿದರು.ವಸಂತಿ ದೇವಾಡಿಗ ನಿರೂಪಿಸಿದರು.ವಿಮಲ ವಂದಿಸಿದರು.

Advertisement

Share

Leave a comment

Your email address will not be published. Required fields are marked *

You cannot copy content of this page