ಕೋಟ:ಆದರ್ಶ ದಂಪತಿಗಳಿಗೆ ವೈಕುಂಠ ಭಾಗ್ಯ,ಸಾವಿನಲ್ಲೂ ಒಂದಾದ ಹಿರಿಯ ಜೀವಗಳು

ಕುಂದಾಪುರ:ಸಪ್ತಪದಿ ತುಳಿದು ದಂಪತಿಗಳಾಗಿ ಆದರ್ಶ ಜೀವನ ಕಟ್ಟಿಕೊಂಡಿದ್ದ ಹಿರಿಯ ದಂಪತಿಗಳು ಒಂದೇ ದಿನ ಮೊಕ್ಷವನ್ನು ಹೊಂದುವುದರ ಮೂಲಕ ಸಾವಿನಲ್ಲೂ ಜೊತೆಯಾಗಿ ಸಾಗಿದ ಅಪರೂಪದ ಘಟನೆ ಕೋಟ ಸಮೀಪದ ಬನ್ನಾಡಿ ಕಂಬಳಕಟ್ಟು ಎಂಬಲ್ಲಿ ನಡೆದಿದೆ.
ಕೋಟ ಕಂಬಳಕಟ್ಟು ಗುರಿಕಾರ ಮನೆ ಕೃಷ್ಣ ಪೂಜಾರಿ (58) ಮತ್ತು ಅವರ ಪತ್ನಿ ಮುತ್ತು ಪೂಜಾರ್ತಿ(53) ಎನ್ನುವ ದಂಪತಿಗಳು ಮರಣ ಹೊಂದುವಾಗಲೂ ಜೊತೆಯಾಗಿ ಇಹಲೋಕ ತ್ಯಜಿಸಿದ್ದಾರೆ.ಕಂಬಳಕಟ್ಟು ಗುರಿಕಾರ ಮನೆ ಕೃಷ್ಣ ಪೂಜಾರಿ ಬ್ರಹ್ಮಬೈದರ್ಕಳ ಕಂಬಳಾಭಿಮಾನಿಯಾಗಿ, ಕಂಬಳದ ಸ್ವಯಂಸೇವಕರಾಗಿ ನಿರಂತರ ಸೇವೆಮಾಡುತ್ತ, ಕೃಷಿರಾಗಿ ಗುರುತಿಸಿಕೊಂಡಿದ್ದರು.ಅವರ ಪತ್ನಿ ಮುತ್ತು ಪೂಜಾರ್ತಿ ಬನ್ನಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕಿ ಯಾಗಿದ್ದವರು.ಕೃಷ್ಣ ಪೂಜಾರಿ ಅವರ ಪತ್ನಿ ಮುತ್ತು ಪೂಜಾರ್ತಿ ಅವರು ಬುಧವಾರ ರಾತ್ರಿ ಅನಾರೋಗ್ಯದಿಂದ ಮೃತಪಟ್ಟಿದ್ದರು.ಮುತ್ತು ಪೂಜಾರ್ತಿಯವರ ಅಂತ್ಯಕ್ರಿಯೆ ಮುಗಿಸಿ ವಾಪಾಸ್ಸು ಬರುತ್ತಿದ್ದ ವೇಳೆ ಪತ್ನಿ ಕಳೆದುಕೊಂಡಿದ್ದ ದುಃಖದಲ್ಲಿದ್ದ ಅವರ ಪತಿ ಕೃಷ್ಣ ಪೂಜಾರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.ಮೃತ ದಂಪತಿಗಳು ಮೂವರು ಪುತ್ರಿ ಒರ್ವ ಪುತ್ರರನ್ನು ಅಗಲಿದ್ದಾರೆ.