ಕುಂದಾಪುರ ಶಾಸಕರ ನೂತನ ಕಛೇರಿ ಉದ್ಘಾಟನೆ

ಕುಂದಾಪುರ:ಕುಂದಾಪುರ ಹೃದಯ ಭಾಗದಲ್ಲಿರುವ ತಾಲೂಕು ಪಂಚಾಯತ್ ಕಟ್ಟಡದಲ್ಲಿ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಅವರ ನೂತನ ಕಛೇರಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.ಮಾಜಿ ಶಾಸಕ ಧಾರ್ಮಿಕ ಮುಖಂಡರಾದ ಅಪ್ಪಣ್ಣ ಹೆಗ್ಡೆ ಅವರು ಶಾಸಕರ ನೂತನ ಕಛೇರಿಯನ್ನು ಉದ್ಘಾಟಿಸಿ ಶುಭಹಾರೈಸಿದರು.ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ,ಬಿಜಿಪಿ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ,ಕಾಡೂರು ಸುರೇಶ್ ಶೆಟ್ಟಿ,ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ವಕ್ವಾಡಿ,ಸುರೇಶ್ ಶೆಟ್ಟಿ ಗೊಪಾಡಿ,ಬಾರ್ಕೂರು ಶಾಂತರಾಮ ಶೆಟ್ಟಿ,ಸಂಪತ್ ಶೆಟ್ಟಿ ಉಪಸ್ಥಿತರಿದ್ದರು.ಜನ ಸಾಮಾನ್ಯರಿಗೆ ನೆರವು ಆಗುವ ದೃಷ್ಟಿಯಿಂದ ಶಾಸಕರ ಕಛೇರಿಯನ್ನು ತೆರೆಯಲಾಗಿದ್ದು,ಸಾರ್ವಜನಿಕರ […]

ಶಿಕ್ಷಕರ ವರ್ಗಾವಣೆ ಪಡುಕೋಣೆ ಶಾಲೆಯಲ್ಲಿ ಮುಂದುವರಿದ ಪೋಷಕರ ಪ್ರತಿಭಟನೆ

ಕುಂದಾಪುರ:ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಪಡುಕೋಣೆ ಶಾಲೆಯಲ್ಲಿ ಕನ್ನಡ ಶಿಕ್ಷಕರನ್ನು ವರ್ಗಾವಣೆ ಮಾಡಿರುವುದನ್ನು ಖಂಡಿಸಿ ಮಕ್ಕಳ ಪೋಷಕರು ಕೈಗೊಂಡಿದ್ದ ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟಿದೆ.ಶಿಕ್ಷಕರನ್ನು ನೇಮಕ ಮಾಡದೆ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಹಠ ಹಿಡಿದು ಕುಳಿತ ಪೋಷಕರ ಪ್ರತಿಭಟನೆಯಿಂದ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗದೆ ನಾಲ್ಕು ದಿನಗಳೆ ಕಳೆದು ಹೋಗಿದ್ದು ಮಕ್ಕಳ ಭವಿಷ್ಯ ಅತಂತ್ರವಾಗಿದೆ. ಕನ್ನಡ ಶಿಕ್ಷಕರನ್ನು ವರ್ಗಾವಣೆ ಮಾಡಬಾರದೆಂದು ಮಡುಕೋಣೆ ಶಾಲೆಯ ಶಾಲಾಭಿವೃದ್ಧಿ ಮತ್ತು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸಭೆ ನಡೆಸಿ ನಿರ್ಣಯ […]

ವಿದ್ಯಾರ್ಥಿಗಳಿಗೆ ಶಬ್ದಕೋಶ ಪುಸ್ತಕ ವಿತರಣೆ

ಕುಂದಾಪುರ:ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಹೊಸಾಡು ಶಾಲೆಯ 6,7 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ನಿವೃತ್ತ ಅಧ್ಯಾಪಕರಾದ ಸಂಪತ್ ಕುಮಾರ್ ಪಾಂಗಾಳ ಅವರು ಅತ್ಯುತ್ತಮ ಗುಣಮಟ್ಟದ ಶಬ್ದಕೋಶ ಪುಸ್ತಕವನ್ನು ಉಚಿತವಾಗಿ ನೀಡಿ ಶುಭಹಾರೈಸಿದರು.ದೈಹಿಕ ಶಿಕ್ಷಣ ಪರಿವಿಕ್ಷಣಾಕಾರಿ ಚಂದ್ರಶೇಖರ ಶೆಟ್ಟಿ,ಮುಖ್ಯೋಪಾಧ್ಯಾಯರಾದ ರಾಜೇಶ್,ಶಿಕ್ಷಕವೃಂದವರು ಉಪಸ್ಥಿತರಿದ್ದರು.

You cannot copy content of this page