ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ನ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆಯಾಗಿ ಶಯದೇವಿಸುತೆ ಮರವಂತೆ ಆಯ್ಕೆ

ಕುಂದಾಪುರ:ಶಯದೇವಿಸುತೆ ಮರವಂತೆ(ಜ್ಯೋತಿ ಜೀವನ್ ಸ್ವರೂಪ್) ಅವರು ಉಡುಪಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ನ ನೂತನ ಮಹಿಳಾ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.ಆಧ್ಯಾತ್ಮಿಕ ಚಿಂತಕರಾಗಿ, ಸಂಗೀತ-ಸಾಹಿತ್ಯ ಕಲಾ ಲೋಕದಲ್ಲಿ,ಯಕ್ಷಗಾನ ಕ್ಷೇತ್ರದಲ್ಲಿ,ವಿವಿಧ ಪತ್ರಿಕೋದ್ಯಮ ಹಾಗೂ, ಹಲವಾರು ಮಾಧ್ಯಮ ವಾಹಿನಿಗಳಲ್ಲಿ ಸತತ ಸೇವೆಗೈಯ್ಧಿರುವಂತಹಇವರ ಕಲಾಪ್ರತಿಭೆಯ ನಿರಂತರ ಸೇವೆಗೆ ಅಕ್ಕಮಹಾದೇವಿ ಪ್ರಶಸ್ತಿ,ಹುಟ್ಟೂರ ಸಾಧಕ ಸಂಮ್ಮಾನ ಪ್ರಶಸ್ತಿ,ಮಹಿಳಾ ಸಾಧಕಿ ಪ್ರಶಸ್ತಿ,ರಂಗಸ್ಥಳ ರತ್ನ ಪ್ರಶಸ್ತಿ,ಕುಂದಶ್ರೀ ಪ್ರಶಸ್ತಿ, ವಿಶ್ವಕವಿ ಕುವೆಂಪು ಕಾವ್ಯ ಪುರಸ್ಕಾರ,ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ,ಸ್ಟೇಟ್ ಲೆವೆಲ್ ಅವಾರ್ಡ್,ಡಾ. ಜಿ.ಡಿ. ಜೋಶಿ ಗೌರವ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ […]

ಹೊಸಾಡು:ಮನೆ ಮೇಲೆ ಅಡಿಕೆ ಮರ ಬಿದ್ದು ಹಾನಿ

ಕುಂದಾಪುರ:ಮಂಗಳವಾರ ಸುರಿದ ಭಾರಿ ಗಾಳಿ ಮಳೆಗೆ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಕಾಳುಮನೆ ಕಾಳಮ್ಮ ಎಂಬುವವರ ಮನೆ ಮಾಡಿನ ಮೇಲೆ ಅಡಿಕೆ ಮರ ಬಿದ್ದು ಸಿಮೆಂಟ್ ಸೀಟ್,ಪಕಾಸಿ,ಹೆಂಚು,ಡಿಟಿಎಚ್ ತುಂಡಾಗಿದೆ.ಘಟನೆಯಲಿ ಅಂದಾಜು 15 ಸಾವಿರ.ರೂ ನಷ್ಟ ಉಂಟಾಗಿದೆ.ಹೊಸಾಡು ವಿ.ಎ ಮತ್ತು ಉಗ್ರಾಣಿ ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು

ಮಳೆ ಅಬ್ಬರ,ಶಾಲೆ ದೇವಳ ಕೃಷಿ ಗದ್ದೆಗಳಿಗೆ ನುಗ್ಗಿದ ನೀರು

ಸಿದ್ದಾಪುರ:ಕಳೆದೆರೆಡು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಗ್ರಾಮೀಣದ ಅಮಾಸೆಬೈಲ್ ಸಿದ್ದಾಪುರ ಹಳ್ಳಿಹೊಳೆ ಆಜ್ರಿ ಶಂಕರನಾರಾಯಣ ಅಂಪಾರು ಹೊಸಂಗಡಿ ಮುಂತಾದ ಕಡೆ ಮಳೆ ಅಬ್ಬರಕ್ಕೆ ಹಲವಾರು ವಿದ್ಯುತ್ ಕಂಬಗಳು ಬೃಹತಾಕಾರಾದ ಮರಗಳು ಧರೆಗುರುಳಿದ್ದು ಜನಸಂಚಾರಕ್ಕೆ ಅಡ್ಡಿಯಾಗಿದ್ದು ಸುತ್ತುವರಿದ ಸಂಚಾರ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.ಘಾಟ್ ಪ್ರದೇಶದಿಂದ ಬಾರಿ ಮಟ್ಟದಲ್ಲಿ ನೀರು ಹರಿದು ಬರುತ್ತಿದ್ದು ನದಿ ಹಳ್ಳ ತೋಡುಗಳು ತುಂಬಿ ಹರಿದಿದ್ದು ಗದ್ದೆಗಳಿಗೆ ನೀರು ನುಗ್ಗಿ ಜಲಾವೃತವಾಗಿದೆ ಇತ್ತಿಚೆಗೆ ಬಿತ್ತನೆ ಮಾಡಿದ ಭತ್ತ ಕೃಷಿಗಳು ಸಂಪೂರ್ಣ ಮಳೆ ಪಾಲಾಗಿವೆ.ಮನೆ ದೇವಸ್ಥಾನ ತೋಟಗಳಿಗೆ […]

You cannot copy content of this page