ಶ್ರೀನಾಗಕನ್ನಿಕಾ ಪರಮೇಶ್ವರಿ ದೇವಸ್ಥಾನ ಶ್ರೀಕ್ಷೇತ್ರ ಹಣಿನಮಕ್ಕಿ

ಕುಂದಾಪುರ:ಹೊಸಾಡು ಗ್ರಾಮದ ಅರಾಟೆ ಶ್ರೀನಾಗಕನ್ನಿಕಾ ಪರಮೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಹಣಿನಮಕ್ಕಿಯಲ್ಲಿ ನಾಗರ ಪಂಚಮಿ ಉತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸೋಮವಾರ ನಡೆಯಿತು.ನಾಗರ ಪಂಚಮಿ ಹಬ್ಬದ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ವಿಶೇಷ ಪೂಜಾಭಿಷೇಕ,ಹಣ್ಣುಕಾಯಿ,ಮಂಗಳಾರತಿ ಸೇವೆ ಹಾಗೂ ಪ್ರಸಾದ ವಿತರಣಾ ಕಾರ್ಯಕ್ರಮ ಜರುಗಿರತು.

ಶ್ರೀ ಪಂಜುರ್ಲಿ ಆಟೋ ಸೆಂಟರ್ ಶುಭಾರಂಭ

ಬೈಂದೂರು:ಉಪ್ಪುಂದ ಬಿಜೂರುನಲ್ಲಿ ಉದಯ್ ಪೂಜಾರಿ ಜಡ್ಡಾಡಿ ಅವರ ಮಾಲೀಕತ್ವದಲ್ಲಿ ನೂತನವಾಗಿ ಆರಂಭಗೊಂಡಿರುವ ಶ್ರೀ ಪಂಜುರ್ಲಿ ಆಟೋ ಸೆಂಟರ್ ಪ್ರಾರಂಭೋತ್ಸವ ಕಾರ್ಯಕ್ರಮ ವೇ.ಮೂ ಚೆನ್ನಕೇಶವ ಭಟ್ ಆನ್ಗಳ್ಳಿ ಗಜಪುರ ಅವರ ನೇತೃತ್ವದಲ್ಲಿ ಭಾನುವಾರ ನಡೆಯಿತು.ಈ ಸಂದರ್ಭ ಉದ್ಯಮಿ ಸತೀಶ ಪೂಜಾರಿ ಮರವಂತೆ,ರಾಜೇಶ ಪೂಜಾರಿ ತ್ರಾಸಿ,ಪ್ರವೀಣ್ ಪೂಜಾರಿ ಗೋಳಿಹೊಳೆ,ಶಂಕರ ಪೂಜಾರಿ ನಾವುಂದ,ಸುಬ್ರಹ್ಮಣ್ಯ ಉಪ್ಪುಂದ,ಜೋಕಿಮ್ ಡಿ ಕೋಸ್ಟಾ ಗೋವಾ ಉಪಸ್ಥಿತರಿದ್ದರು.

ನಾವುಂದ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ನರಸಿಂಹ ದೇವಾಡಿಗ ಆಯ್ಕೆ

ಬೈಂದೂರು:ನಾವುಂದ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಪಂಚಾಯತಿ ಸದಸ್ಯ ನರಸಿಂಹ ದೇವಾಡಿಗ ಅವರು ಆಯ್ಕೆಯಾಗಿದ್ದಾರೆ.ಬಿಜೆಪಿ ಪಕ್ಷದ ಬೆಂಬಲಿತ ಪಂಚಾಯತಿ ಸದಸ್ಯೆ ಸುಲೋಚನಾ ಗಾಣಿಗ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾದರು.ಕಾಂಗ್ರೆಸ್ ಪಕ್ಷದ 12 ಸದಸ್ಯರು ಮತ್ತು ಬಿಜೆಪಿ ಪಕ್ಷದ 03 ಸದಸ್ಯರೊಳಗೊಂಡ ನಾವುಂದ ಗ್ರಾಮ ಪಂಚಾಯತಿಯಲ್ಲಿ ಒಟ್ಟು 15 ಪಂಚಾಯತಿ ಸದಸ್ಯರಿದ್ದಾರೆ.ಕಾಂಗ್ರೆಸ್ ಪಕ್ಷದ ಸದಸ್ಯರ ಬೆಂಬಲದೊಂದಿಗೆ 08 ಮತಗಳನ್ನು ಪಡೆದ ಬಿಜೆಪಿ ಪಕ್ಷದ ಅಭ್ಯರ್ಥಿ ಸುಲೋಚನಾ ಗಾಣಿಗ ಅವರು ಪ್ರತಿಸ್ಪರ್ಥಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಾರದ ಪೂಜಾರಿ […]

You cannot copy content of this page