ಶ್ರೀ ಬೊಬ್ಬರ್ಯ ಪರಿವಾರ ದೇವರ ಪುನರ್ ಪ್ರತಿಷ್ಠೆ, ನೂತನ ಶಿಲಾಮಯ ದೇಗುಲ ಲೋಕಾರ್ಪಣೆ

ಕುಂದಾಪುರ:ಬೈಂದೂರು ತಾಲೂಕಿನ ನಾಗೂರು ಕಿರಿಮಂಜೇಶ್ವರ ಗುಂಜಾನುಗುಡ್ಡೆ ಶ್ರೀ ಬೊಬ್ಬರ್ಯ ಪರಿವಾರ ದೇವರ ಪುನರ್ ಪ್ರತಿಷ್ಠೆ,ನೂತನ ಶಿಲಾಮಯ ದೇಗುಲ ಲೋಕಾರ್ಪಣೆ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸೋಮವಾರ ನಡೆಯಿತು.ಶ್ರೀಬೊಬ್ಬಯ ಮತ್ತು ಪರಿವಾರ ದೇವರ ಪುನರ್ ಪ್ರತಿಷ್ಠೆ ಅಂಗವಾಗಿ ಬಿಂಬ ಪ್ರತಿಷ್ಠೆ,ಕುಂಭ ಅಭಿಷೇಕ,ಅಷ್ಟೋತ್ತರ ಕಲಶ ಸ್ಥಾಪನೆ,ಬ್ರಹ್ಮಕಲಶ ಸ್ಥಾಪನೆ,ಮಹಾ ಪೂಜೆ,ಪರಿ ಕಲಶ ಸಹಿತ ಬ್ರಹ್ಮಕಲಾಶಾಭೀಷೇಕವನ್ನು ನೆರವೇರಿಸಲಾಯಿತು.ಮಹಾ ಅನ್ನಸಂತರ್ಪಣೆ,ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.ನಾರಾಯಣ ಹೆಬ್ಬಾರ್ ಮಾತನಾಡಿ,ಶ್ರೀಬೊಬ್ಬರ್ಯ ದೇವರ ದೇವಸ್ಥಾನವನ್ನು 40 ವರ್ಷಗಳ ಹಿಂದೆ ನಿರ್ಮಾಣಮಾಡಲಾಗಿದೆ.ನಾಲ್ಕು ದಶಕಗಳ ಬಳಿಕ ಶ್ರೀದೇವರ ಅನುಗ್ರಹದಿಂದ ನೂತನ […]

ಮಾಟುಬಲೆ ಮೀನುಗಾರರ ಕ್ರಿಕೆಟ್ ಪಂದ್ಯಾಟ ಸಮಾರೋಪ ಸಮಾರಂಭ

ಕುಂದಾಪುರ:ಕರಾವಳಿ ಮಿತ್ರ ಮಂಡಳಿ ಮರವಂತೆ ಅದರ 25ನೇ ವಾರ್ಷಿಕೋತ್ಸವ ಅಂಗವಾಗಿ ಮರವಂತೆಯಲ್ಲಿ ಎರಡು ದಿನಗಳ ಕಾಲ ನಡೆದ ಮಾಟುಬಲೆ ಮೀನುಗಾರರ ಕ್ರಿಕೆಟ್ ಪಂದ್ಯಾಟ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ಭಾನುವಾರ ನಡೆಯಿತು.ಶ್ರೀರಾಮ ಮಂದಿರ ಮರವಂತೆ ಮೀನುಗಾರರ ಸೇವಾ ಸಮಿತಿ ಅಧ್ಯಕ್ಷ ವಾಸುದೇವ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷ ಸುರೇಶ್ ಖಾರ್ವಿ,ಕಾರ್ಯದರ್ಶಿ ಈಶ್ವರ ಖಾರ್ವಿ ಹಾಗೂ ಮಾಜಿ ಅಧ್ಯಕ್ಷರಾದ ಸೋಮಯ್ಯ ಖಾರ್ವಿ,ಪಿ ಚಂದ್ರ ಖಾರ್ವಿ ಮತ್ತು ಪ್ರೆÇೀತ್ಸಾಹಕರಾದ ಡಾ.ನಾಗರಾಜ ಖಾರ್ವಿ,ಚಾವನ ಆನಂದ ಖಾರ್ವಿ,ಕರಾವಳಿ ಮಿತ್ರ ಮಂಡಳಿ ಮರವಂತೆ […]

ಅಪೇಕ್ಸ್ ಇಂಟರ್‍ನ್ಯಾಷನಲ್ ಟ್ರೇಡಿಂಗ್,ನವ ಭಾರತ್ ಟಿಂಬರ್ಸ್ ಕುಂದಾಪುರದಲ್ಲಿ ಶುಭಾರಂಭ

ಕುಂದಾಪುರ:ತಾಲೂಕಿನ ಸಂಗಮ್‍ನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅಪೇಕ್ಸ್ ಇಂಟರ್‍ನ್ಯಾಷನಲ್ ಟ್ರೇಡಿಂಗ್,ನವಭಾರತ್ ಟಿಂಬರ್ಸ್ ಅದರ ಶುಭಾರಂಭ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಭಾನುವಾರ ನಡೆಯಿತು.ಕಳೆದ ಎಂಟು ವರ್ಷಗಳಿಂದ ಆಫ್ರಿಕಾ ದೇಶದಲ್ಲಿ ಅಪೇಕ್ಸ್ ಇಂಟರ್‍ನ್ಯಾಷನಲ್ ಟ್ರೇಡಿಂಗ್ ಎಂಬ ಹೆಸರಿನಲ್ಲಿ ಮರದ ಉದ್ಯಮವನ್ನು ಮಾಡುತ್ತಿರುವ ಅಪೇಕ್ಸ್ ಸಂಸ್ಥೆ ಬಹಳಷ್ಟು ಅನುಭವವನ್ನು ಹೊಂದಿದೆ.ಅದರ ಸಹ ಸಂಸ್ಥೆಯಾದ ನವಭಾರತ್ ಟಿಂಬರ್ಸ್ ಕುಂದಾಪುರದಲ್ಲಿ ಆರಂಭಗೊಂಡಿದೆ. ಕಟ್ಟಡ,ದೇವಸ್ಥಾನ,ಫರ್ನಿಚರ್,ಇಂಟೀರಿಯರ್‍ಗೆ ಬೇಕಾಗುವ ಎಲ್ಲಾ ರೀತಿಯ ಗುಣಮಟ್ಟದ ರೆಡಿ ಸೈಜ್,ಕಟ್ ಸೈಜ್ ಮರಗಳು ಸ್ಪರ್ಧಾತ್ಮಕ ದರದಲ್ಲಿ ದೊರೆಯುತ್ತದೆ.ಇಲ್ಲಿ ಇಂಪಾರ್ಟೆಂಟ್ ಟಿಕ್ಸ್,ಸಾಗುವಾನಿ,ಕಲ್ಲಂಬೋಗಿ,ಅಕೇಶೀಯಾ,ಬೋಗಿ,ಹಲಸು,ಹುಣಾಲ್,ಮಹಾಗನಿ,ಹೆಬ್ಬೆಲಸು ನಂತಹ ಉತ್ತಮ […]

You cannot copy content of this page