ಕೆಸಿಡಿಸಿ ವಿಭಾಗೀಯ ವ್ಯವಸ್ಥಾಪಕ ಉದಯ ಜೋಗಿ ಹೃದಯಘಾತದಿಂದ ನಿಧನ

ಕುಂದಾಪುರ:ಕೆಸಿಡಿಸಿ ವಿಭಾಗೀಯ ವ್ಯವಸ್ಥಾಪಕ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಕುಂದಾಪುರ ತಾಲೂಕಿನ ಕಟ್‌ಬೇಲ್ತೂರು ನಿವಾಸಿಯಾಗಿರುವ ಬೈಂದೂರಿನ ಉದಯ ಕುಮಾರ್ ಜೋಗಿ (ಐಎಫ್‌ಎಸ್) ಅವರು ಸಿಮ್ಲಾಕ್ಕೆ ಪ್ರವಾಸಕ್ಕೆಂದು ಹೋಗಿದ್ದ ಸಂದರ್ಭದಲ್ಲಿ ತೀವೃತರಹದ ಹೃದಯಾಘಾತಕ್ಕೆ ಒಳಗಾಗಿ ಶನಿವಾರ ನಿಧನರಾಗಿದ್ದಾರೆ.ಮೃತದೇಹ ಸೋಮವಾರ ಹುಟ್ಟೂರು ತಲುಪಲಿದೆ ಎಂದು ಅವರ ನಿಕಟವರ್ತಿಗಳು ತಿಳಿಸಿದ್ದಾರೆ.ಅವರಿಗೆ ಪತ್ನಿ ಸಹಿತ ಇಬ್ಬರು ಪುತ್ರರು ಇದ್ದಾರೆ.ಅತ್ಯಂತ ಸೌಮ್ಯ ಸ್ವಭಾವದ ವ್ಯಕ್ತಿಯಾಗಿರುವ ಉದಯ ಜೋಗಿ ಅವರ ಅಕಾಲಿಕ ಸಾವಿನಿಂದ ಬಹಳಷ್ಟು ದುಖಃವನ್ನುಂಟು ಮಾಡಿದೆ ಎಂದು ಕೆಸಿಡಿಸಿ ಸಿಬ್ಬಂದಿಗಳು ತಮ್ಮ ನೋವವನ್ನು ಹಂಚಿಕೊ0ಡಿದ್ದಾರೆ.

ಪರೀಕ್ಷೆಯಲ್ಲಿ ಅಂಕ ನೀಡುವಂತೆ ದೈವದ ಮೊರೆ ಹೋದ ವಿದ್ಯಾರ್ಥಿ

ಕುಂದಾಪುರ:ಪರೀಕ್ಷೆಯಲ್ಲಿ ತಾನು ಅಂದು ಕೊಂಡಷ್ಟು ಮಾಕ್ರ್ಸ್ ನೀಡುವಂತೆ ನಿವೇದಿಸಿ ವಿದ್ಯಾರ್ಥಿಯೊಬ್ಬ (ಳು) ಹೊಳ್ಮಗೆ ಹೋರ್ ಬೊಬ್ಬರ್ಯ ದೈವದ ಮೊರೆ ಹೋಗಿದ್ದು.ಚೀಟಿ ಬರೆದು ಹುಂಡಿಗೆ ಹಾಕಿರುವ ಕುತೂಹಲಕರ ವಿಷಯ ಹುಂಡಿ ಒಡೆಯುವ ಸಮಯದಲ್ಲಿ ಬೆಳಕಿಗೆ ಬಂದಿದೆ.ವಿದ್ಯಾರ್ಥಿ ಬರೆದು ಹುಂಡಿಗೆ ಹಾಕಿರುವ ಚೀಟಿ ಸೋಷಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗಿದೆ.

ಆಲೂರು:ಸಾವಿನಲ್ಲೂ ಸಾರ್ಥಕತೆ ಮೆರೆದ ರತ್ನಾಕರ ಜೊಯಿಸ್

ಕುಂದಾಪುರ:ತಾಲೂಕಿನ ಆಲೂರು ಗ್ರಾಮದ ನಿವಾಸಿ ರತ್ನಾಕರ ಜೊಯಿಸ್ (48) ಅವರು ತಮ್ಮ ಅಂಗಾಂಗಗಳನ್ನು ದಾನ ಮಾಡುವುದರ ಮುಖೇನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.ಜನವರಿ.21 ರಂದು ಕಾರಿನಲ್ಲಿ ಸಾಗುತ್ತಿದ್ದ ರತ್ನಾಕರ ಜೊಯಿಸ್ ಅವರ ಕಾರಿಗೆ ವಿರುದ್ಧ ದಿಕ್ಕಿನಲ್ಲಿ ಬಂದಿದ್ದ ಲಾರಿ ಅರಾಟೆ ಸೇತುವೆ ಡಿವೈಡರ್ ಬಳಿ ಡಿಕ್ಕಿ ಹೊಡೆದಿದೆ.ಅಪಘಾತದಲ್ಲಿ ಗಂಭೀರ ಸ್ವರೂಪದ ಗಾಯದೊಂದಿಗೆ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು.ಆರೋಗ್ಯದಲ್ಲಿ ಧಿಡೀರ್ ಏರುಪೇರು ಉಂಟಾಗಿದ್ದರಿಂದ ಗುರವಾರ ದಂದು ಚಿಕಿತ್ಸೆ ಫಲಕಾರಿ ಆಗದೆ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಕುಟುಂಬಸ್ಥರ ನಿರ್ಣಯದಂತೆ ರತ್ನಾಕರ […]

You cannot copy content of this page