ಹರ್ಕೂರು ಗಣಪತಿ ದೇವಸ್ಥಾನದಲ್ಲಿ ನಿಧಿ ಕಲಶ ಸ್ಥಾಪನೆ

ಕುಂದಾಪುರ:ಹರ್ಕೂರು ಗ್ರಾಮದ ಮಹಾಗಣಪತಿ ದೇವಸ್ಥಾನದ ನೂತನ ಗರ್ಭಗುಡಿ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ದೇವಳದಲ್ಲಿ ಷಢಾಧಾರ ಕಾರ್ಯಕ್ರಮ,ನಿಧಿಕುಂಭ ಸ್ಥಾಪನೆ,ನಿಧಿ ಕಲಶ ಶುದ್ಧಿ,ವಾಸ್ತು ಬಲಿ ನಿಧಿ ಕಲಶ ಪೂಜೆ ಸಹಿತ ಇನ್ನಿತರ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ,ಚಿತ್ತರಂಜನ್ ಹೆಗ್ಡೆ ಹರ್ಕೂರು,ಜಯಶೀಲ ಶೆಟ್ಟಿ,ತಂತ್ರಿಗಳಾದ ಚೆನ್ನಕೇಶವ ಉಪಾಧ್ಯಾಯ,ನವೀಕರಣ ಸಮಿತಿ ಸದಸ್ಯರು,ಗ್ರಾಮಸ್ಥರು,ಅರ್ಚಕ ವೃಂದದವರು ಉಪಸ್ಥಿತರಿದ್ದರು.

ಹವ್ಯಾಸಿ ಯಕ್ಷಗಾನ ಕಲಾವಿದ ಲೇಖಕ ಯೋಗೀಂದ್ರ ಮರವಂತೆಗೆ ಸನ್ಮಾನ

ಕುಂದಾಪುರ:ಯಕ್ಷದ್ರುವ ಪಟ್ಲ ಫೌಂಡೇಷನ್ ವತಿಯಿಂದ ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ನೇತೃತ್ವದಲ್ಲಿ ಲಂಡನ್ ಮತ್ತು ಬರ್ಮಿಂಗ್ಹ್ಯಾಮ್‍ನಲ್ಲಿ ಯಕ್ಷಗಾನ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ಅಭಿಯಾನ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಅನಿವಾಸಿ ಯಕ್ಷಗಾನ ಅಭಿಮಾನಿ ಮಂಡಳಿ ಯುಕೆ ಸಂಘಟನೆಯ ಪ್ರತಿನಿಧಿ ಹವ್ಯಾಸಿ ಯಕ್ಷಗಾನ ಕಲಾವಿದ ಲೇಖಕ ಯೋಗೀಂದ್ರ ಮರವಂತೆ ಅವರನ್ನು ಭಾಗವತ ಪಟ್ಲ ಸತೀಶ ಶೆಟ್ಟಿ ಗೌರವಿಸಿದರು.

ಯೋಗಾಚಾರ್ಯ ಸಂತೋಷಗೆ ವಿಶ್ವಮಾನ್ಯ ಯೋಗರತ್ನ ಪ್ರಶಸ್ತಿ

ಕುಂದಾಪುರ:ದೇಶ ವಿದೇಶಗಳಲ್ಲಿ ಯೋಗದ ಕಂಪನ್ನು ಬೀರಿ ಜನಜನಿತರಾಗಿರುವ ಕುಂದಾಪುರ ತಾಲೂಕಿನ ಕುಂದಬಾರಂದಾಡಿ ಗ್ರಾಮದ ಕೊಳುರು ನಿವಾಸಿ ಯೋಗಾಚಾರ್ಯ ಸಂತೋಷ್ ಗೂರೂಜಿ ಅವರು ಯೋಗಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಬ್ರಹ್ಮೀಭೂತ ಶ್ರೀ ವಾಸುದೇವ ಮಹಾರಾಜ್ ಫೌಂಡೇಷನ್ ವತಿಯಿಂದ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ವಿಶ್ವಮಾನ್ಯ ಯೋಗರತ್ನ ಪ್ರಶಸ್ತಿ-2023 ನೀಡಿ ಗೌರವಿಸಲಾಯಿತು.

You cannot copy content of this page