ಮೆಟ್ಟಿನಹೊಳೆ‌ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ

ಕುಂದಾಪುರ:ಬೈಂದೂರು ವಲಯದ ಸರ್ಕಾರಿ ಹಿರಿಯ ಪ್ರಾಥಮಿಕ ಮೆಟ್ಟಿನ ಹೊಳೆ ಶಾಲೆಯಲ್ಲಿ 9ನೇ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.ಯೋಗಭ್ಯಾಸ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಶ್ರೀಮತಿ ಪ್ರತಿಮಾ, ಕು.ಭೂಮಿಕಾ, ಆಶಾಕಾರ್ಯಕರ್ತೆ ಚಂದು ಕುಲಾಲ್,ಪೋಷಕರು,ಹಳೆ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಪ್ರೇರಣೆ ನೀಡಿದರು.ಯೋಗ ಮಂತ್ರದಿಂದ ಮೊದಲುಗೊಂಡು ಶಿಥಿಲೀಕರಣ ವ್ಯಾಯಾಮ ಮಾಡಿಸಿ ನಂತರ ಯೋಗಾಭ್ಯಾಸ ಹಾಗೂ ಪ್ರಾಣಾಯಾಮವನ್ನು ಮಾಡಿಸಲಾಯಿತು.ಯೋಗ ಶಿಕ್ಷಕರಾದಸುಬ್ಬಯ್ಯ ದೇವಾಡಿಗ ಹಾಗೂ ಮಂಜುನಾಥ ದೇವಾಡಿಗ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.ತಾಜುದ್ದೀನ್ ಅತ್ತೀಕಟ್ಟಿ ಸ್ವಾಗತಿಸಿದರು. ಪ್ರತಿಮಾ ಜಿ. ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕಿ ಅಭಿಲಾಷಾ ಶೆಟ್ಟಿ ವಂದಿಸಿದರು. […]

ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ

ಕುಂದಾಪುರ:ಶ್ರೀ ಸತ್ಯಸಾಯಿ ಸೇವಾ ಸಮಿತಿ ಕುಂದಾಪುರ ವತಿಯಿಂದ ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಹೊಸಾಡು ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಕೂಲ್ ಬ್ಯಾಗ್‍ನ್ನು ವಿತರಿಸಲಾಯಿತು.ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷೆ ರೇಖಾ ಗಣೇಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು,ಶ್ರೀ ಸತ್ಯಸಾಯಿ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಆನಂದ ಉದ್ಘಾಟಿಸಿದರು.ಶ್ರೀ ಸತ್ಯಸಾಯಿ ಸಮಿತಿ ಕುಂದಾಪುರ ಸಂದೀಪ ರಾವ್ ಮತ್ತು ಸಂಚಾಲಕ ರಾಮಚಂದ್ರ.ಬಿ.ಎನ್,ದೈಹಿಕ ಶಿಕ್ಷಣ ಪರೀವಿಕ್ಷಣಾಧಿಕಾರಿ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು.ಮುಖ್ಯೋಪಾಧ್ಯಾಯ ರಾಜೇಶ್ ಸ್ವಾಗತಿಸಿದರು.ದೈಹಿಕ ಶಿಕ್ಷಕ ಸಂತೋಷ ಖಾರ್ವಿ ವಂದಿಸಿದರು.ಸಹ ಶಿಕ್ಷಕಿ ಲೀಲಾ.ಜಿ ವಂದಿಸಿದರು.

ಕೆಎಸ್ಆರ್ ಟಿಸಿ ಬಸ್‍ಗೆ ಡಿಕ್ಕಿ ಹೊಡೆದ ಕಾರು:ಮೂವರಿಗೆ ಗಾಯ

ನಾವುಂದ:ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಅತಿ ವೇಗದಿಂದ ಸಾಗುತ್ತಿದ್ದ ಕಾರು ನಿಯಂತ್ರಣ ತಪ್ಪಿ ಬ್ಯಾರಿಕೇಡ್‍ಗೆ ಗುದ್ದಿ ಕುಂದಾಪುರದಿಂದ ಬೈಂದೂರು ಕಡೆಗೆ ಸಂಚರಿಸುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್‍ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ ಘಟನೆ ನಾವುಂದ-ಬಡಾಕೆರೆ ಕ್ರಾಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ನಡೆದಿದೆ.ಬಸ್‍ಗೆ ಡಿಕ್ಕಿ ಹೊಡೆದ ಕಾರು ಡಿವೈಡರ್‍ಗೆ ಬಡಿದು ರಸ್ತೆಗೆ ಅಡ್ಡಲಾಗಿ ನಿಂತ್ತಿದ್ದ ಪರಿಣಾಮ ಕೆಲವು ಹೊತ್ತುಗಳ ಕಾಲ ಹೆದ್ದಾರಿಯಲ್ಲಿ ಸಂಚಾರಕ್ಕೆ ತೊಡಕು ಉಂಟಾಯಿತು.ಕಾರು ಜಖಂ ಗೊಂಡಿದ್ದು ಕಾರಿನಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಬೈಂದೂರು ಠಾಣೆಯ ಪೆÇಲೀಸರು ಸ್ಥಳಕ್ಕೆ ಆಗಮಿಸಿ […]

You cannot copy content of this page