ರಾಜಗೋಪುರ ಪುನರ್ ನವೀಕರಣ,ಕಲಶ ಪ್ರತಿಷ್ಠೆ

ಕುಂದಾಪುರ:ಗಂಗೊಳ್ಳಿ ಖಾರ್ವಿಕೇರಿ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನದ ರಾಜಗೋಪುರ ಪುನರ್ ನವೀಕರಣ ಮತ್ತು ಕಲಶ ಪ್ರತಿಷ್ಠೆ ಕಾರ್ಯಕ್ರಮ ಕೆಪಿ ಕುಮಾರ ಗುರು ತಂತ್ರಿಗಳು ಮತ್ತು ದೇವಳದ ಅರ್ಚಕರ ನೇತೃತ್ವದಲ್ಲಿ ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ಶುಕ್ರವಾರ ನಡೆಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ,ಜೀರ್ಣೋದ್ಧಾರ ಸಮಿತಿ,ಮಹಿಳಾ ಮಂಡಳಿ ಸದಸ್ಯರು,ದೇವಸ್ಥಾನದ ದೈವ ಪಾತ್ರಿಗಳು ಉಪಸ್ಥಿತರಿದ್ದರು.

ಗಂಗೊಳ್ಳಿ ಠಾಣೆ ಪಿಎಸ್‍ಐ ಹರೀಶ್‍ಗೆ ಅಭಿನಂದನೆ

ಕುಂದಾಪುರ:ಗಂಗೊಳ್ಳಿ ಪೊಲೀಸ್ ಠಾಣೆಯ ಠಾಣಾಧಿಕಾರಿಯಾಗಿ ನೇಮಕಗೊಂಡಿದ್ದ ಹರೀಶ್ ಎಸ್ ಅವರಿಗೆ ಜೈ ಭೀಮ್ ಸಂಘಟನೆ ಗಂಗೊಳ್ಳಿ ವತಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ನೀಡಿ ಅಭಿನಂದಿಸಿ ಸ್ವಾಗತಿಸಲಾಯಿತು.ಈ ಸಂದರ್ಭದಲ್ಲಿ ಜೈ ಭೀಮ್ ಸಂಘಟನೆ ಗಂಗೊಳ್ಳಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮರವಂತೆ ಕಡಲ್ಕೊರೆತ ಪ್ರದೇಶಕ್ಕೆ ಸಂಸದ ಬಿ.ವೈ ರಾಘವೇಂದ್ರ ಭೇಟಿ,ಪರಿಶೀಲನೆ

ಕುಂದಾಪುರ:ಪ್ರತಿ ವರ್ಷ ಮರವಂತೆಯಲ್ಲಿ ಸಂಭವಿಸುತ್ತಿರುವ ಕಡಲ್ಕೊರೆತದಿಂದ ಸ್ಥಳೀಯರಿಗೂ ಆತಂಕದ ವಿಚಾರವಾಗಿದೆ ಸಮುದ್ರ ಕೊರೆತದಿಂದ ನಿದ್ದೆ ಇಲ್ಲದ ರಾತ್ರಿಯನ್ನು ಜನರು ಕಳೆಯುವಂತಹ ಪರಿಸ್ಥಿತಿ ಎದುರಾಗಿದೆ.ಕಡಲ್ಕೊರೆತದ ತಡೆಗೆ ಶಾಶ್ವತ ಪರಿಹಾರವನ್ನು ಕೈಗೊಳ್ಳಲು ಕೇಂದ್ರ ಸರಕಾರಕ್ಕೆ ಮನವಿಯನ್ನು ನೀಡಲಾಗುವುದು ಆದ್ಯತೆ ಮೆರೆಗೆ ಶೀಘೃ ಕ್ರಮಗಳನ್ನು ಕೈಗೊಳ್ಳಲು ಪ್ರಯತ್ನಿಸಲಾಗುದೆಂದು ಶಿವಮೊಗ್ಗ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ಹೇಳಿದರು.ಬಿಪರ್‍ಜಾಯ್ ಚಂಡಮಾರುತದದಿಂದ ಕಡಲ್ಕೊರೆತ ಉಂಟಾಗಿ ಹಾನಿ ಸಂಭವಿಸಿದ ಬೈಂದೂರು ತಾಲೂಕಿನ ಮರವಂತೆ ಕರಾವಳಿ ಸಮುದ್ರ ತೀರ ಪ್ರದೇಶಕ್ಕೆ ಶುಕ್ರವಾರ ಭೇಟಿ ನೀಡಿದ ಸಂಸದರು ಹಾನಿಯ ಪ್ರಮಾಣವನ್ನು […]

You cannot copy content of this page