ಮನೆಯೊಳಗೆ ನುಗ್ಗಿದ ಚಿರತೆ,ವ್ಯಕ್ತಿಯೊಬ್ಬರ ಮೇಲೆ ದಾಳಿ

ಕುಂದಾಪುರ:ಮನೆಯೊಳಗೆ ನುಗ್ಗಿದ ಚಿರತೆಯೊಂದು ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿದ ಘಟನೆ ಕೊಲ್ಲೂರು ಸಮೀಪದ ನಾಗೋಡಿ ಎಂಬಲ್ಲಿ ಕಳೆದ ತಡ ರಾತ್ರಿ ನಡೆದಿದೆ.ಕೊಲ್ಲೂರು ಸಮೀಪದ ನಾಗೋಡಿ ನಿವಾಸಿ ಗಣೇಶ್ (48) ಎನ್ನುವವರು ಚಿರತೆ ದಾಳಿಗೆ ಒಳಗಾಗಿದ್ದ ವ್ಯಕ್ತಿ.ನಾಯಿಯನ್ನು ಬೇಟೆಯಾಡಲು ಬಂದಿದ್ದ ಚಿರತೆ ನಾಯಿ ಮೇಲೆ ದಾಳಿ ನಡೆಸಿದೆ ಚಿರತೆ ದಾಳಿಯಿಂದ ಬೆದರಿದ ನಾಯಿ ಮನೆಯೊಳಗೆ ನುಗಿದ್ದು,ನಾಯಿಯನ್ನು ಬೆನ್ನಟ್ಟಿ ಬಂದಿದ್ದ ಚಿರತೆ ಸಹ ಮನೆಯೊಳಗೆ ನುಗ್ಗಿದೆ ಈ ವೇಳೆ ಗಣೇಶ್ ಎನ್ನುವವರ ಮೇಲೆ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.ಕೂಡಲೇ […]

ಹೊಗೆ ಮೀನು ಶಿಕಾರಿ ಜೋರು

ಕುಂದಾಪುರ:ಎಡಬಿಡದೆ ಸುರಿದ ಬಾರಿ ಮಳೆಗೆ ಹಳ್ಳ,ಕೊಳ್ಳ,ಗದ್ದೆಗಳು ತುಂಬಿ ತೋಡಿನಲ್ಲಿ ನೀರು ಹರಿದ ಪರಿಣಾಮ ಬಡಾಕೆರೆ ಭಾಗದಲ್ಲಿ ಹೊಗೆ ಮೀನುಗಳ ರಾಶಿ ಕಂಡು ಬಂದಿದೆ,ಸ್ಥಳೀಯರು ಭರ್ಜರಿ ಆಗಿ ಮೀನಿನ ಶಿಕಾರಿಯನ್ನು ಮಾಡಿದರು.ಮೊದಲ ಮಳೆಗೆ ಹಿನ್ನಿರಿನಿಂದ ಮೀನುಗಳು ತೋಡಿನ ಮೂಲಕ ಗದ್ದೆಗಳತ್ತಾ ಧಾವಿಸಿ ಬರುತ್ತವೆ ಇದು ಒಂದೆರಡು ದಿನಗಳಿಗೆ ಮಾತ್ರ ಸೀಮಿತವಾಗುವ ಸಂದರ್ಭವಾಗಿದೆ.

ಚರಂಡಿಗೆ ಬಿದ್ದು ವಯೋವೃದ್ಧ ಸಾವು,ಸಾರ್ವಜನಿಕರು ಆಕ್ರೋಶ

ಕುಂದಾಪುರ:ರಾಷ್ಟ್ರೀಯ ಹೆದ್ದಾರಿಯಲ್ಲಿನ ಚರಂಡಿ ಹೊಂಡಕ್ಕೆ ಬಿದ್ದು ವಯೋವೃದ್ಧರೊಬ್ಬರು ಮೃತಪಟ್ಟ ಘಟನೆ ತೆಕ್ಕಟ್ಟೆಯಲ್ಲಿ ಶುಕ್ರವಾರ ನಡೆದಿದೆ.ಚರಂಡಿ ಅವ್ಯವಸ್ಥೆಯಿಂದ ಹಿರಿಯ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ಸಂಬಂಧಪಟ್ಟ ಇಲಾಖೆ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು,ಚರಂಡಿ ವ್ಯವಸ್ಥೆಯನ್ನು ಸರಿ ಪಡಿಸುವಂತೆ ಆಗ್ರಹಿಸಿದ್ದಾರೆ

You cannot copy content of this page