ನೆನೆ ಗುದ್ದಿಗೆ ಬಿದ್ದಿರುವ ಸಮಗ್ರ ಒಳ ಚರಂಡಿ ಬಗ್ಗೆ ಚರ್ಚೆ

ಕುಂದಾಪುರ:ಉಡುಪಿ ಜಿಲ್ಲೆಯ ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ನೆನೆ ಗುದ್ದಿಗೆ ಬಿದ್ದಿರುವ ಸಮಗ್ರ ಒಳಚರಂಡಿ ವಿಷಯದ ಬಗ್ಗೆ ಕುಂದಾಪುರ ಕ್ಷೇತ್ರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರ ನೇತೃತ್ವದಲ್ಲಿ ಕಾಮಗಾರಿಯ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಯಿತು.ಕರ್ನಾಟಕ ಸರ್ಕಾರ ನೀರು ಸರಬರಾಜು ಮತ್ತು ಒಳಚರಂಡಿ ನೈರ್ಮಲ್ಯ ಮಂಡಳಿಯ ಇಂಜಿನಿಯರ್ ಚಂದ್ರಶೇಖರ್ ,ರಕ್ಷಿತ್ ಕುಮಾರ್,ಪುರಸಭೆ ಮುಖ್ಯ ಅಧಿಕಾರಿ,ಪುರಸಭಾ ಇಂಜಿನಿಯರ್ ಮತ್ತು ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮಾದಕ ವಸ್ತುಗಳ ಚಟಕ್ಕೆ ಬಿದ್ದರೆ ಜೀವನ ಸಂಪೂರ್ಣ ಹಾಳಾಗುತ್ತದೆ

ಕುಂದಾಪುರ:ಮಾದಕ ವಸ್ತುಗಳ ಚಟಕ್ಕೆ ಬಿದ್ದರೆ ಜೀವನ ಸಂಪೂರ್ಣ ಹಾಳಾಗುವುದು ಮಾತ್ರವಲ್ಲದೆ ತನ್ನ ಸಂಸಾರವನ್ನು ಬೀದಿಗೆ ಹಾಕುವ ಪರಿಸ್ಥಿತಿ ಉದ್ಭವಾಗಲಿದೆ.ಕ್ಷಣಿಕ ಸುಖಕ್ಕಾಗಿ ಯುವ ಜನಾಂಗ ಗಾಂಜಾ,ಧೂಮಪಾನ,ತಂಬಾಕು ಸೇವನೆ ಅಂತಹ ಮಾದಕ ವಸ್ತುಗಳ ದಾಸರಾಗುತ್ತಿದ್ದು,ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಜನಜಾಗೃತಿ ವೇದಿಕೆ ಉಡುಪಿ ಜಿಲ್ಲಾ ಸಮಿತಿ ಸದಸ್ಯ ಸತೀಶ ಎಂ.ನಾಯಕ್ ಹೇಳಿದರು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್,ಜಿಲ್ಲಾ ಜನಜಾಗೃತಿ ವೇದಿಕೆ,ಜನಜಾಗೃತಿ ವೇದಿಕೆ ತ್ರಾಸಿ ವಲಯದ ವತಿಯಿಂದ ಗಂಗೊಳ್ಳಿ ಶ್ರೀವೀರೇಶ ಮಾಂಗಲ್ಯ ಮಂದಿರದಲ್ಲಿ ನಡೆದ ಮಾದಕ ವಸ್ತು […]

ಶೈಕ್ಷಣಿಕ ನೆರವು,ಕಲಾ ಸಾಮಾಗ್ರಿಗಳು ವಿತರಣೆ

ಕುಂದಾಪುರ:ಶ್ರೀಇಂದುಧರ ದೇವಸ್ಥಾನ ಗಂಗೊಳ್ಳಿ ವತಿಯಿಂದ ಶೈಕ್ಷಣಿಕ ನೆರವು ಮತ್ತು ಕಲಾ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮ ಶ್ರೀಇಂದುಧರ ಸಭಾಭವನದಲ್ಲಿ ಭಾನುವಾರ ನಡೆಯಿತು.ಎಚ್.ಗಣೇಶ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಕವಿತಾ ಕೃಷ್ಣಪ್ಪ ಶಿವಲಿಂಗಪ್ಪ ಅವರಿಗೆ ಶೈಕ್ಷಣಿಕ ನೆರವು ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ಕಲಾ ಸಾಮಾಗ್ರಿಗಳನ್ನು ವಿತರಿಸಲಾಯಿತು.ಗೋಪಾಲ ಪೂಜಾರಿ,ದಿನೇಶ ಬಿಲ್ಲವ,ದೇವಸ್ಥಾನದ ಮೊಕ್ತೇಸರ ಸಂಜೀವ ಜಿ.ಟಿ,ನರಸಿಂಹ ಕೆ,ಸುಂದರ ಬಿ, ಜಿ.ಈಶ್ವರ,ಶಿವಾನಂದ ಜಿ.ಟಿ,ಕೃಷ್ಣಪ್ಪ ಶಿವಲಿಂಗಪ್ಪ ವೇಷಗಾರ್,ಸುಶೀಲಾ ಉಪಸ್ಥಿತರಿದ್ದರು.ಶ್ರೀಕಾಂತ ಸ್ವಾಗತಿಸಿದರು.ಸುರೇಶ ಜಿ ನಿರ್ವಹಿಸಿದರು.ಜಿ.ಈಶ್ವರ ವಂದಿಸಿದರು.

You cannot copy content of this page