ದಲಿತ ಸಂಘರ್ಷ ಸಮಿತಿ ನಾಡ ಶಾಖೆ ಪುನರ್ ರಚನೆ,ಜನಶಕ್ತಿ ಸಮಾವೇಶ

ಕುಂದಾಪುರ:ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಮಿತಿ ವತಿಯಿಂದ ನಾಡ (ಪಡುಕೋಣೆ) ಶಾಖೆ ಪುನರ್‍ರಚನೆ,ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಾಗೂ ಜನಶಕ್ತಿ ಸಮಾವೇಶದಲ್ಲಿ ನಾಡ ಗ್ರಾಮ ಪಂಂಚಾಯಿತಿ ಸಭಾಭವನದಲ್ಲಿ ಭಾನುವಾರ ನಡೆಯಿತು.ಗಾಯಕ ರವಿ ಬನ್ನಾಡಿ ತಮ್ಮ ಕಂಠ ಸಿರಿ ಮೂಲಕ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಜಿಲ್ಲಾ ಸಂಘಟನಾ ಸಂಚಾಲಕ ಸುರೆಶ ಹಕ್ಲಾಡಿ ನಾಡ ಶಾಖೆಯ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.ಅಶಕ್ತ ಕುಟುಂಬಗಳಿಗೆ ಆರ್ಥಿಕ ನೆರವು ವಿತರಿಸಲಾಯಿತು.ಮುಖ್ಯ ಮಂತ್ರಿ ಪದಕ ವಿಜೇತರಾದ ಅರಣ್ಯ ಇಲಾಖೆ ಸಿಬ್ಬಂದಿ ಶೇಷು,ಧಾರ್ಮಿಕ […]

ಗಂಗೊಳ್ಳಿ ಸ್ಟೆಲ್ಲಾ ಮಾರಿಸ್ ಪ್ರೌಢ ಶಾಲೆಯಲ್ಲಿ ಪಾಲಕರ ಸಭೆ

ಕುಂದಾಪುರ:ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಪರಿಶೀಲಿಸಲು 8,9 ಮತ್ತು 10ನೇ ತರಗತಿ ವಿದ್ಯಾರ್ಥಿಗಳ ಪಾಲಕರ ಸಭೆ ಗಂಗೊಳ್ಳಿ ಸ್ಟೆಲ್ಲಾ ಮಾರಿಸ್ ಪ್ರೌಢ ಶಾಲೆಯಲ್ಲಿ ನಡೆಯಿತು.ಮಕ್ಕಳ ಪಾಲಕರು ಸಂಕಲನಾತ್ಮಕ ಪರೀಕ್ಷೆ-1 ರ ಉತ್ತರ ಪತ್ರಿಕೆಗಳನ್ನು ನೋಡಿ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿ ಕುರಿತು ಶಿಕ್ಷಕರೊಂದಿಗೆ ಚರ್ಚಿಸಿದರು.ಮಕ್ಕಳ ಸುರಕ್ಷೆ,ವಿದ್ಯಾರ್ಥಿಗಳಿಗೆ ಹೊರಸಂಚಾರ ಇತ್ಯಾದಿ ವಿಷಯಗಳ ಕುರಿತು ಮುಖ್ಯ ಶಿಕ್ಷಕರು ಮಕ್ಕಳ ಪಾಲಕರಿಗೆ ತಿಳಿಸಿದರು.ಈ ಸಂದರ್ಭ ಶಾಲೆಯ ಶಿಕ್ಷಕವೃಂದವರು,ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕುಂದಾಪುರ ತಾಲೂಕು ವಿಪ್ರ ಮಹಿಳಾ ಸಮಾವೇಶ,ಸದ್ಭಾವನಾ ಲಹರಿ-2024 ಕಾರ್ಯಕ್ರಮ ಉದ್ಘಾಟನೆ

ಬೈಂದೂರು:ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು ಮತ್ತು ಮಹಿಳಾ ವೇದಿಕೆ ವತಿಯಿಂದ,ಉಪ್ಪುಂದ ವಲಯದ ಸಹಕಾರದೊಂದಿಗೆ ಕುಂದಾಪುರ ತಾಲೂಕು ವಿಪ್ರ ಮಹಿಳಾ ಸಮಾವೇಶ ಸದ್ಭಾವನಾ ಲಹರಿ-2024 ಸಂತಸ, ಸಡಗರ,ಸನ್ಮಾನ, ಸ್ಪರ್ಧೆಗಳ ಹಬ್ಬ ಕಾರ್ಯಕ್ರಮ, ಆರೋಗ್ಯ ಶಿಬಿರ ಕಾರ್ಯಕ್ರಮ ನಾಗೂರು ಒಡೆಯರಮಠ ಶ್ರೀ ಕೃಷ್ಣ ಲಲಿತ ಕಲಾಮಂದಿರದಲ್ಲಿ ಭಾನುವಾರ ನಡೆಯಿತು.ದ್ರಾವಿಡ ಬ್ರಾಹ್ಮಣ ಪರಿಷತ್ತು ಮತ್ತು ಮಹಿಳಾಇ ಸಮಾವೇಶದಲ್ಲಿ ಬಾಲ್ಯ ಪೌಂಡೇಶನ್ ಸಹಕಾರದಲ್ಲಿ ದಾಮೋದರ ಶಾಸ್ತ್ರಿ ಅವರು ಫಲಾನುಭವಿಗಳಿಗೆ ಸಹಾಯ ಹಸ್ತ ವಿತರಿಸಿದರು.ಯಾರ್ಂಕ್ ಪಡೆದ ವಿದ್ಯಾರ್ಥಿಗಳಾದ ಶ್ರೀ ಲಕ್ಷ್ಮೀ ಮರವಂತೆ,ಶ್ರೀ ಲಕ್ಷ್ಮೀ […]

You cannot copy content of this page